ಇಂದಿರಾ ಕ್ಯಾಂಟೀನ್ ಬಡವರ ಪಾಲಿಗೆ ವರವಾಗಿದೆ ನಮ್ಮ ಕಾಂಗ್ರೆಸ್ ಸರ್ಕಾರ ಬಡವರ ಪರ ಕಾಳಜಿಯನ್ನು ತೋರಿಸುತ್ತದೆ
ಇಂದಿರಾ ಕ್ಯಾಂಟೀನ್ ಆರಂಭದಿಂದ ಬಡವರಿಗೆ ಮಧ್ಯಮ ವರ್ಗದವರಿಗೆ, ರೈತರಿಗೆ ಅನುಕೂಲ :ಶಾಸಕ ನಾಡಗೌಡ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ : ಇಂದಿರಾ ಕ್ಯಾಂಟೀನ್ ಆರಂಭದಿಂದ ಬಡವರಿಗೆ ರೈತರಿಗೆ ಅನುಕೂಲವಾಗಿದೆ ಇಂದಿನ ದುಬಾರಿ ದಿನಮಾನದಲ್ಲಿಯೂ ಕಡಿಮೆ ದರದಲ್ಲಿಆಹಾರ ವಿತರಿಸುವ ಇಂದಿರಾ ಕ್ಯಾಂಟೀನ್ ಬಡವರ ಪಾಲಿಗೆ ವರವಾಗಿದೆ ಇದು ಕಾಂಗ್ರೆಸ್ ಸರ್ಕಾರ ಬಡವರ ಪರ ಕಾಳಜಿಯನ್ನು ತೋರಿಸುತ್ತದೆ ಎಂದು ಕೆ ಎಸ್ ಡಿ ನಿಗಮ ಅಧ್ಯಕ್ಷ ಶಾಸಕ ಸಿ.ಎಸ್ ನಾಡಗೌಡ ಅಪ್ಪಾಜಿ ಹೇಳಿದರು ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರ ಆವರಣ ಪಕ್ಕದಲ್ಲಿ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಗೂಳಸಿ ಅವರು ಮಾತನಾಡಿದರು
ಈ ವೇಳೆ ತಹಶಿಲ್ದಾರ ಬಲರಾಮ ಕಟ್ಟಮನಿ,ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಸತೀಶ್ ಓಸ್ವಾಲ್, ಸಿ.ಬಿ ಅಸ್ಕಿ, ಸಂಗನಗೌಡ ಬಿರಾದಾರ ಜಿಟಿಸಿ, ಗಣೇಶ ಅನ್ನಗೌನಿ, ಕಾಮರಾಜ ಬಿರಾದಾರ, ಟಿ ವಿಜಯಭಾಸ್ಕರ್, ರಾಜು ಕಲಬುರಗಿ, ನಾಗಭೂಷಣ ನಾವದಗಿ, ಗುರು ತಾರನಾಳ, ಸುದೀರ ನಾವದಗಿ, ಶರಣು ಸಜ್ಜನ, ತಿಪ್ಪಣ್ಣ ದೂಡಮನಿ, ನಾಗೇಶ ಭಜಂತ್ರಿ, ಬಾಪುರಾವ ದೇಸಾಯಿ, ರಾಯನಗೌಡ ತಾತರೆಡ್ಡಿ,ಯಲ್ಲಪ್ಪ ನಾಯಕಮಕ್ಕಳ, ಹುಸೇನ್ ಮುಲ್ಲಾ, ಜಾವಿದ ಇನಾಮದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕ್ಯಾಂಟೀನ್ನಲ್ಲಿಟಿಫಿನ್ಗೆ 5 ರೂ. ಊಟಕ್ಕೆ 10 ರೂಪಾಯಿ ನಿಗದಿ ಮಾಡಿದ್ದು, ಒಂದು ದಿನಕ್ಕೆ ಬೆಳಗ್ಗೆ 250 ಟಿಫಿನ್, ಮಧ್ಯಾಹ್ನ 250 ಊಟ ಮತ್ತು ರಾತ್ರಿ 250 ಊಟದ ವ್ಯವಸ್ಥೆಯನ್ನು ಇಂದಿರಾ ಕ್ಯಾಂಟೀನ್ನಲ್ಲಿಮಾಡಲಾಗುತ್ತಿದೆ. ಹೆಚ್ಚಿನ ಬೇಡಿಕೆ ಬಂದಲ್ಲಿ ಹೆಚ್ಚಿನ ಜನರಿಗೆ ಅವಕಾಶ ಕಲ್ಪಿಸಲಾಗುತ್ತದೆ ; ಅಪ್ಪಾಜಿ ನಾಡಗೌಡ