ಭಾರತದ ಮೊಟ್ಟ ಮೊದಲ ಪ್ರಧಾನಿ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪುಣ್ಯ ತಿಥಿ..!
ವಿಜಯಪುರ : ಮಾಜಿ ಪ್ರಧಾನಿಗಳಾದ ಪಂಡಿತ ಜವಾಹರಲಾಲ ನೆಹರುವರ ಪುಣ್ಯ ತಿಥಿಯನ್ನು ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಪುಷ್ಪಾರ್ಚನೆ ಮಾಡಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ವೈಜನಾಥ ಕರ್ಪೂರಮಠ ಮಾತನಾಡುತ್ತಾ ನವಭಾರತ ನಿರ್ಮಾಣವನ್ನು ನಿರ್ಮಿಸಲು ಅಡಿಗಲ್ಲು ಹಾಕಿ, ದೇಶದ ಭದ್ರ ಬುನಾದಿಗಾಗಿ ಅಡಿಪಾಯ ಹಾಕಿದ ಸಾಕಾರ ಮೂರ್ತಿ, ಅನಕ್ಷರನ್ನು ಅಕ್ಷರಸ್ತರನ್ನಾಗಿ ಮಾಡಲು ಶಿಕ್ಷಣದ ವ್ಯವಸ್ಥೆಗೆ ಬಲವನ್ನು ನೀಡಲು ಭಾರತದಲ್ಲಿ ಹಲವಾರು, ಸಾವಿರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಮುನ್ನುಡಿ ಬರೆದು ಸಾಕ್ಷರತೆಯಲ್ಲಿ ಮೈಲಿಗಲ್ಲು ನಿರ್ಮಾಣ ನಿರ್ಮಾಣ ಮಾಡಿ ಧೀರಂತ ನಾಯಕ, ಭಾರತದಾದ್ಯಂತ ಹಲವಾರು ಆಸ್ಪತ್ರೆಗಳನ್ನು ಕಟ್ಟಲು ಆಜ್ಞೆ ಮಾಡಿದ ವೈದ್ಯಲೋಕದ ರಾಯಭಾರಿ, ಹಲವಾರು ನದಿ, ಸೇತುವೆಗಳನ್ನು ಕಟ್ಟಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ ನೀರಾವರಿಯ ತಜ್ಞ, ವಿಜ್ಞಾನಿಗಳ ಸಾಧನೆಯನ್ನು ಮನಗಂಡು ಇಸ್ರೋ ಬಾಹ್ಯಾಕಾಶ ಸಂಸ್ಥೆಯನ್ನು ಸೃಷ್ಠಿಸಿದ ವಿಜ್ಞಾನಿಗಳ ಅಚ್ಚು ಮೆಚ್ಚಿನ ನಾಯಕ, ಸರ್ವಜನಾಂಗದ ಶಾಂತಿಯ ತೋಟದ ಪರಿಪಾಲಕ, ಸಾವಿರಾರು ಕಿಲೋಮೀಟರ್ ರಸ್ತೆಗಳನ್ನು ನಿರ್ಮಿಸಲು ಶಂಕು ಸ್ಥಾಪನೆ ಮಾಡಿದ ಪ್ರಜಾಸೇವಕ ಭಾರತದ ಮೊಟ್ಟ ಮೊದಲ ಪ್ರಧಾನಿಯಾಗಿ ಜಗತ್ಪçಸಿದ್ಧರಾದವರು ಎಂದು ಗುನಗಾನ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಿಸಿಸಿ ಉಪಾಧ್ಯಕ್ಷರಾದ ಕೆ. ಎಫ್. ಅಂಕಲಗಿ ವಕೀಲರು, ಡಿ. ಎಲ್. ಚವ್ಹಾಣ, ಗಂಗಾಧರ ಸಂಬಣ್ಣಿ, ಪ್ರಧಾನ ಕಾರ್ಯದರ್ಶಿಗಳಾದ ಎಂ. ಎಂ. ಮುಲ್ಲಾ (ದ್ಯಾಬೇರಿ), ವಸಂತ ಹೊನಮೋಡೆ, ದೇಸು ಚವ್ಹಾಣ ಬ್ಲಾಕ್ ಅಧ್ಯಕ್ಷರುಗಳಾದ ಜಮೀರಹ್ಮದ ಬಕ್ಷಿ, ಆರತಿ ಶಾಹಪೂರ, ವಿದ್ಯಾಧರ ಪಾಟೀಲ ಅಧ್ಯಕ್ಷರು ವಿಜಯಪುರ ಜಿಲ್ಲಾ ಕಾಂಗ್ರೆಸ್ ಮಾಜಿ ಸೈನಿಕರ ವಿಭಾಗ, ಅಶ್ಪಾಕ ಮನಗೂಳಿ, ಮಹ್ಮದ ಮುಲ್ಲಾ, ಸಂತೋಷ ಬಾಲಗಾವಿ, ತಾಜುದ್ದೀನ ಖಲೀಫಾ, ಎಂ. ಬಿ. ನಾಯಿಕ, ಸರಫರಾಜ ಮಿರ್ಜಿ, ಶಬೀಹಾ ಮಂಟೂರ, ಮಹಿಬೂಬ ಕರ್ಜಗಿ, ದಿಲಿಪ ಪ್ರಭಾಕರ ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.


















