ಇಂಡಿ | ಫಲಿತಾಂಶ ಸುಧಾರಣೆಗೆ ಮುಖ್ಯೋಪಾಧ್ಯಾಯರು ಮುನ್ನುಡಿ ಬರೆಯಿರಿ
ಇಂಡಿ : ಕಲಿಕಾ ಅಂತರ ವಿರುವ ವಿದ್ಯಾರ್ಥಿಗಳ ಫಲಿತಾಂಶ ಸುಧಾರಿಸುವಲ್ಲಿ ಆ ಮಕ್ಕಳನ್ನು ಕೇಂದ್ರಿಕರಿಸಿ ಈ ವರ್ಷದ ಕ್ರೀಯಾಯೋಜನೆಯನ್ನು ಶಾಲೆಗಳಲ್ಲಿ ಅಳವಡಿಸಿ ಫಲಿತಾಂಶದ ಸುಧಾರಣೆಗೆ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಮುನ್ನುಡಿಯನ್ನು ಬರೆಯಲಿ ಎಂದು ಇಂಡಿಯ ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನ್ನುರ ಹೇಳಿದರು.
ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿಗಳ ಸಬಾಭವನದಲ್ಲಿ ಪ್ರೌಢಶಾಲೆಗಳ ಮುಖ್ಯೋಧ್ಯಾಪಾಯರ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಕುರಿತು ನಡೆದ ಕಾರ್ಯಾಗಾರದಲ್ಲಿ ಮಾತನಾಡಿದರು.
ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಎ.ಓ.ಹೂಗಾರ ಮಾತನಾಡಿ ಎಸ್ಸೆಸ್ಸೆಲ್ಸಿ ಫಲಿತಾಂಶ ಅಭಿವೃದ್ದಿಯಾಗಬೇಕಾದರೆ ಹತ್ತನೆಯ ತರಗತಿಯಲ್ಲಿ ಓದುತ್ತಿರುವ ಕಲಿಕಾ ನಿಧಾನ ಗತಿಯ ಲಕ್ಷಣಗಳುಳ್ಳ ವಿದ್ಯಾರ್ಥಿಗಳಿಗೆಜೂನ ೧೫ ರಿಂದ ಜುಲೈ ೩೧ ರ ವರೆಗೆ ಕಲಿಕಾ ಸ್ನೇಹಿ ಸೇತುಬಂಧು ಕಾರ್ಯಕ್ರಮವನ್ನು ತಾಲೂಕಿನಲ್ಲಿ ಎಲ್ಲ ಶಾಲೆಗಳಲ್ಲಿ ಕೈಕೊಂಡು ಅಂತಹ ಮಕ್ಕಳನ್ನು ಇತರ ಮುಂದು ವರೆದ ಮಕ್ಕಳ ಜೊತೆ ಕೂಡಿಸಿ ವರ್ಷದುದ್ದಕ್ಕೂ ವಿಶೇಷ ಕಾಳಜಿ ವಹಿಸಿ ಕಲಿಕಾ ಅಂತರ ತುಂಬಿದಲ್ಲಿ ಫಲಿತಾಂಶ ಆಭಿವೃದ್ದಿಯಾಗಿ ಕಲಿಕಾ ಗುಣಮಟ್ಟ ಸಾಧಿಸುವಲ್ಲಿ ಯಾವದೇ ಸಂಶಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಮುಖ್ಯೋಪಾಧ್ಯಾಯರು ಪಾಲ್ಗೊಂಡಿದ್ದರು.
ಇಂಡಿ ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿಗಳ ಸಬಾಭವನದಲ್ಲಿ ಪ್ರೌಢಶಾಲೆಗಳ ಮುಖ್ಯೋಧ್ಯಾಪಾಯರ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಕುರಿತು ನಡೆದ ಕಾರ್ಯಾಗಾರದಲ್ಲಿ ಸುಜಾತಾ ಹುನ್ನುರ ಮಾತನಾಡಿದರು.