ಇಂಡಿ | ಮುಖ್ಯಮಂತ್ರಿ ಜುಲೈ 14 ರಂದು ಆಗಮನ ಹಿನ್ನೆಲೆ ಸಂಚಾರ ನಿರ್ಬಂಧ ಮತ್ತು ಮಾರ್ಗ ಬದಲಾವಣೆ
ಇಂಡಿ : ದಿನಾಂಕ 14/07/2025 ರಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಭೇಟಿ ನೀಡಿ. ಪಟ್ಟಣ ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ಪೊಲೀಸ್ ಮೈದಾನದಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ. ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ಸುಗಮ ಸಂಚಾರ ಮತ್ತು ಭದ್ರತಾ ವ್ಯವಸ್ಥೆಗಾಗಿ. ಇಂಡಿ ಪಟ್ಟಣದಾದ್ಯಂತ ಸಂಚಾರ ಮತ್ತು ವಾಹನ ನಿಲುಗಡೆ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡಲಾಗಿದೆ.
ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು ಈ ಕೆಳಗಿನ ಸೂಚನೆಗಳನ್ನು ಪಾಲಿಸಿ. ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಕೋರಲಾಗಿದೆ.
ಸಂಚಾರ ನಿರ್ಬಂಧ ಮತ್ತು ಮಾರ್ಗ ಬದಲಾವಣೆ
1. ದಿನಾಂಕ 14/07/2025 ರಂದು ಬೆಳಿಗ್ಗೆ 10:00 ಮುಗಿಯುವವರೆಗೆ. ಗಂಟೆಯಿಂದ ಕಾರ್ಯಕ್ರಮ ಪೊಲೀಸ್ ಮೈದಾನದ ಕಾರ್ಯಕ್ರಮ ನಡೆಯುವ ಸುತ್ತಮುತ್ತಲಿನ ರಸ್ತೆಗಳಾದ ಬಸ್ ನಿಲ್ದಾಣ ರಸ್ತೆ, ನ್ಯಾಯಾಲಯ ರಸ್ತೆ ಮತ್ತು ತಹಶೀಲ್ದಾರ್ ಕಚೇರಿ ರಸ್ತೆಗಳಲ್ಲಿ ಸಾರ್ವಜನಿಕ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
2. ವಿಜಯಪುರದಿಂದ ಸೊಲ್ಲಾಪುರ ಕಡೆಗೆ ಮತ್ತು ಸೊಲ್ಲಾಪುರದಿಂದ ವಿಜಯಪುರ ಕಡೆಗೆ ಸಾಗುವ ವಾಹನಗಳು ಇಂಡಿ ಪಟ್ಟಣ ಪ್ರವೇಶಿಸದೆ. ಬೈಪಾಸ್ ರಸ್ತೆಯನ್ನು ಕಡ್ಡಾಯವಾಗಿ ಬಳಸತಕ್ಕದ್ದು.
3. ಪಟ್ಟಣದ ಒಳಗಿನ ನಿವಾಸಿಗಳು ತಮ್ಮ ಸಂಚಾರಕ್ಕಾಗಿ ಸಾಧ್ಯವಾದಷ್ಟು ಪರ್ಯಾಯ ರಸ್ತೆಗಳನ್ನು ಬಳಸಲು ಕೋರಲಾಗಿದೆ.
ಸಾರ್ವಜನಿಕರ ವಾಹನ ನಿಲುಗಡೆ (ಪಾರ್ಕಿಂಗ್) ವ್ಯವಸ್ಥೆ
ಕಾರ್ಯಕ್ರಮಕ್ಕೆ ವಿವಿಧ ಗ್ರಾಮಗಳು ಸಾರ್ವಜನಿಕರ ವಾಹನಗಳ ನಿಲುಗಡೆಗಾಗಿ
1) ವಿಜಯಪುರ ರಸ್ತೆ: ಬಂಜಾರ ಲಾಡ್ಯ ಎದುರುಗಡೆ ವಿಶಾಲವಾಗಿರುವ ಮೈದಾನ:
ಅಥರ್ಗಾ, ನಾಗಠಾಣ, ರಾಮತೀರ್ಥ ತಾಂಡೆ, ರಾಜನಾಳ ತಾಂಡೆ, ಬೋಳೆಗಾಂವ ಲಿಂಗದಳ್ಳಿ, ತಡವಲಗಾ, ಹಿರೇರೂಗಿ, ಹಿರೇಮಸಳಿ, ಗೋರನಾಳ, ತೆನ್ನಹಳ್ಳಿ, ಬೆನಕಹಳ್ಳಿ, ಶಿರಕನಹಳ್ಳಿ, ಗೋಗಿಹಾಳ, ತಾಂಬಾ ಕಡೆಯಿಂದ ಬರುವ ವಾಹನಗಳ ಪಾರ್ಕಿಂಗ ವ್ಯವಸ್ತೆ ಇರುತ್ತದೆ
2)ಸಿಂದಗಿ ರಸ್ತೆ: ಧನಶೆಟ್ಟಿ ರವರ ಮಂಗಲ ಕಾರ್ಯಾಲಯದ ಹತ್ತಿರ ಇರುವ
ಸಾಲೋಟಗಿ ನಾದ ಗೋಳಸಾರ, ಮೀರಗಿ, ರೋಡಗಿ, ಖೇಡಗಿ, ಅಜರ್ಣಗಿ ಹಂಚನಾಳ ಮಾರ್ಸನಹಳ್ಳಿ, ಶಿರಶ್ಯಾಡ, ತೆಗ್ಗಿಹಳ್ಳಿ, ಸಂಗೋಗಿ, ಆಲಮೇಲ ಕಡೆಯಿಂದ ಬರುವ ವಾಹನಗಳ ಪಾರ್ಕಿಂಗ ವ್ಯವಸ್ಥೆ ಇರುತ್ತದೆ
3) ಅಗರಖೇಡ ರಸ್ತೆಯಲ್ಲಿರುವ ಕಲ್ಲೂರ ಪೆಟ್ರೋಲ್ ಪಂಪ ಎದರುಗಡೆ ಇರುವ ಖಾಜಿ ರವರ ಖಾಲಿ ಪ್ಲಾಟ;
ಹಿರೇಬೇನೂರ, ಇಂಗಳಗಿ, ಆಳೂರ, ಚಿಕ್ಕಮಣ್ಣೂರ, ಹಿರೇಬೇನೂರ, ಹಿರೇಬೇನೂರ ತಾಂಡಾಅಗರಖೇಡ, ಅಗರಖೇಡ ತಾಂಡಾ, ಇನಾಮಶಿರಗೂರ, ಗುಬ್ಬೇವಾಡ, ಬುಯ್ಯಾರ, ಕಡೆಯಿಂದ ಬರುವ ವಾಹನಗಳ ಪಾರ್ಕಿಂಗ ವ್ಯವಸ್ಥೆ ಇರುತ್ತದೆ
4) ಸೋಲ್ಲಾಪುರ ರಸ್ತೆಗೆ ಹದಗಲ ರವರ ಖುಲ್ಲಾ ಪ್ಲಾಟ:
ಇಂಡಿ ರೇಲ್ವೆ ಸ್ಟೇಶನ, ಅಹಿರಸಂಗ, ಬೂದಿಹಾಳ, ಬೈರುಣಗಿ, ಭತಗುಣಕಿ, ಹಲಸಂಗಿ, ಮರಗೂರ ದೂಳಖೇಡ, ಲೋಣಿ, ಝಳಕಿ, ಅಂಜುಟಗಿ, ಚಿಕ್ಕಬೇನೂರ, ಜೇವೂರ ಕಡೆಯಿಂದ ಬರುವ ವಾಹನಗಳ ಪಾರ್ಕಿಂಗ ವ್ಯವಸ್ಥೆ ಇರುತ್ತದೆ
5) ಹಂಜಗಿ ರಸ್ತೆಗೆ ಇರುವ ಮಾನೆ ರವರ ಖುಲ್ಲಾ ಜಾಗೆಯಲ್ಲಿ.
ಹಂಜಗಿ,ಹಂಜಗಿ ತಾಂಡಾ, ಲಿಂಗದಳ್ಳಿ ಲಿಂಗದಳ್ಳಿ ತಾಂಡಾ, ನಿಂಬಾಳ ನಿಂಬಾಳ ತಾಂಡಾ, ಕ್ಯಾತನಕೇರಿ ಬಸನಾಳ ಕೊಟ್ನಾಳ, ಬಬಲಾದ, ಹೊರ್ತಿ, ಚವಡಿಹಾಳ, ಹಡಲಸಂಗ, ಇಂಚಗೇರಿ, ಸಾವಳಸಂಗ, ದೇಗಿನಾಳ, ಕೊಳೂರಗಿ ಕೂಡಗಿ ಕಡೆಯಿಂದ ಬರುವ ವಾಹನಗಳ ಪಾರ್ಕಿಂಗ ವ್ಯವಸ್ಥೆ ಇರುತ್ತದೆ
6) ಮಾವಿನಹಳ್ಳಿ ರೋಡ ಅಶೋಕಗೌಡರ್ ಖುಲ್ಲಾ ಪ್ಲಾಟದಲ್ಲಿ:-
ಮಾವಿನಹಳ್ಳಿ, ಆಳೂರ, ಲಚ್ಯಾಣ, ಪಡನೂರ, ಅಹಿರಸಂಗ, ಕಡೆಯಿಂದ ಬರುವ ವಾಹನಗಳ ಪಾರ್ಕಿಂಗ ವ್ಯವಸ್ಥೆ ಇರುತ್ತದೆ
ಕಾರ್ಯಕ್ರಮಕ್ಕೆ ಬರುವ ಎಲ್ಲಾ ಸಾರ್ವಜನಿಕರು (ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳು) ತಮ್ಮ ವಾಹನಗಳನ್ನು ಇದೇ ನಿಗದಿತ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಬೇಕು.
ಪಾರ್ಕಿಂಗ್ ಸ್ಥಳದಿಂದ ಕಾರ್ಯಕ್ರಮದ ಸ್ಥಳಕ್ಕೆ ನಡೆದು ಬರುವ ವ್ಯವಸ್ಥೆ ಇರುತ್ತದೆ.
ಕಾರ್ಯಕ್ರಮ ಸ್ಥಳದ ಸಮೀಪದಲ್ಲಿ ಯಾವುದೇ ಕಾರಣಕ್ಕೂ ವಾಹನ ನಿಲುಗಡೆಗೆ ಅವಕಾಶವಿರುವುದಿಲ್ಲ.
ಸಾರ್ವಜನಿಕರಲ್ಲಿ ಮನವಿ
ಕಾರ್ಯಕ್ರಮದ ಸ್ಥಳ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ಗುರುತಿಸಲಾದ ‘ನೋ ಪಾರ್ಕಿಂಗ್’ ವಲಯದಲ್ಲಿ ವಾಹನಗಳನ್ನು ನಿಲ್ಲಿಸುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವ ವಾಹನಗಳನ್ನು ತೆರವುಗೊಳಿಸಿ. ಕಾನೂನು ಕ್ರಮ ಜರುಗಿಸಲಾಗುವುದು.
ಸಂಚಾರ ದಟ್ಟಣೆಯನ್ನು ತಪ್ಪಿಸಲು. ಕಾರ್ಯಕ್ರಮಕ್ಕೆ ಬೇಗನೆ ಆಗಮಿಸಿ ನಿಗದಿತ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಲು ಕೋರಲಾಗಿದೆ.
ಸಂಚಾರ ನಿಯಂತ್ರಣ ಮತ್ತು ಭದ್ರತೆಗಾಗಿ ನಿಯೋಜಿಸಲಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಹಕರಿಸಿ. ದಾರಿಯುದ್ದಕ್ಕೂ ಅಳವಡಿಸಲಾಗಿರುವ ಮಾಹಿತಿ ಫಲಕಗಳಲ್ಲಿನ ಸೂಚನೆಗಳನ್ನು ಪಾಲಿಸಿ.
ಸಾರ್ವಜನಿಕರು ಈ ಬದಲಾವಣೆಗಳನ್ನು ಗಮನಿಸಿ. ಇಂಡಿ ಪಟ್ಟಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಜಿಲ್ಲಾ ಪೊಲೀಸ್ ಇಲಾಖೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.