ಅಕ್ರಮವಾಗಿ ಕಳ್ಳಬಟ್ಟಿ ಸಾಗಾಟ, ಮಾಲೀಕನ ವಿರುದ್ಧ ಪ್ರಕರಣ ದಾಖಲು
ವಿಜಯಪುರ : ಜಿಲ್ಲೆ, ಅಬಕಾರಿ ಉಪ ಅಧೀಕ್ಷರು ವಿಜಯಪುರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ದಿನಾಂಕ: 18/6/2025 ರಂದು ಮುಂಜಾನೆ 5:00ಗಂಟೆಗೆ ವಿಜಯಪುರ ವಲಯ ರ ವ್ಯಾಪ್ತಿಯ್ ಕಾರಜೋಳ ಮತ್ತು ಕಾಖಂಡಕಿ ಗ್ರಾಮಕ್ಕೆ ಹೋಗುವ ಮಾರ್ಗದ ಮದ್ಯೆ ರಸ್ತೆ ಗಾವಲು ಮಾಡುತ್ತಿರುವಾಗ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿಯನ್ನು ಸಾಗಾಣಿಕೆ ಮಾಡುತ್ತಿದ್ದಾಗ ಪತ್ತೆ ಹಚ್ಚಿದ್ದು ಒಟ್ಟು 2 ಗೊಬ್ಬರ ಚೀಲದಿಂದ. 180 ಎಂ ಎಲ್ ನ 600 ಕ್ಳಳಬಟ್ಟಿ ಸಾರಾಯಿ ತುಂಬಿದ ಪ್ಲಾಸ್ಟಿಕ್ ಪ್ಯಾಕೆಟ್ ಗಳಿದ್ದು ಅದು ಒಟ್ಟು 108 ಲೀ ನಷ್ಟು ಕಳ್ಳಬಟ್ಟಿ ಸಾರಾಯಿ ಇರುವದು ಪತ್ತೆಯಾಗಿದ್ದು. ಮಾಲೀಕನ ವಿರ್ರುದ್ಧ ಪ್ರಕರಣ ದಾಖಲಿಸಲಾಗಿದೆ.
ಕಳ್ಳಬಟ್ಟಿ ಸಾರಾಯಿ ಮತ್ತು ವಾಹನದ ಒಟ್ಟು ಮೌಲ್ಯ 42000,/- ಗಳಾಗುತ್ತದೆ. ದಾಳಿಯಲ್ಲಿ ಅಬಕಾರಿ ನಿರೀಕ್ಷಕರು ಮಂಜುನಾಥ ಶಿರಹಟ್ಟಿ ವಾಹನ ಚಾಲಕರಾದ ಅಜಿಮ್ ಮನಗೂಳಿ ಮತ್ತು ಗ್ರಹ ರಕ್ಷಕ ದಳದ ಸಿಬ್ಬಂದಿ ಹಾಜರಿದ್ದರು..