ಜಿಲ್ಲೆ ಸಮಗ್ರ ನೀರಾವರಿ ಆಗಬೇಕಾದರೆ ಪ್ರತಿ ರೈತನ ನ ಹೊಲಕ್ಕೂ ಕೃಷ್ಣಾ ನದಿಯ ನೀರು ಸಿಗಬೇಕಾದರೆ ರೈತ ಸಂಘಟನೆಗಳು ನಿಸ್ವಾರ್ಥದಿಂದ, ಸಂಘಟನಾತ್ಮಕ ಹೋರಾಟ ಅವಶ್ಯ.
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ವಿಜಯಪುರ ಜಿಲ್ಲೆ ಸಮಗ್ರ ನೀರಾವರಿ ಆಗಬೇಕಾದರೆ ಪ್ರತಿ ರೈತನ ನ ಹೊಲಕ್ಕೂ ಹೊಲಕ್ಕೂ ಕೃಷ್ಣಾ ನದಿಯ ನೀರು ಸಿಗಬೇಕಾದರೆ ರೈತ ಸಂಘಟನೆಗಳು ನಿಸ್ವಾರ್ಥದಿಂದ, ಸಂಘಟನಾತ್ಮಕ ಹೋರಾಟ ಹಮ್ಮಿಕೊಳ್ಳಬೇಕು. ನೀರಾವರಿ ವಿಷಯ ದಲ್ಲಿ ರೈತ ಸುಘಟನೆಗಳ ಕೊಡುಗೆಯೂ ಮಹತ್ವ ದ್ದಾಗಿದೆ ಎನ್ನುವುದನ್ನು ಅರಿತುಕೊಳ್ಳಬೇಕು. ರೈತ ಮುಖಂಡರ ಮಾತುಗಳು, ಭರವಸೆಗಳು ಮಾತು ಗಳಲ್ಲೇ ಉಳಿದುಕೊಳ್ಳುವಂತಾಗಬಾರದು ಎಂದು ರೈತ ಸಂಘದ ತಾಲೂಕು ಘಟಕದ ಕಾರ್ಯಾಧ್ಯಕ್ಷ ಜಿ.ಬಿ.ಪಾಟೀಲ ಹಿರೇಮುರಾಳ ಹೇಳಿದರು.
ಇಲ್ಲಿನ ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಏರ್ಪಡಿಸಿದ್ದ ರೈತ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ನಮ್ಮಲ್ಲಿ ನೀರಾವರಿಗಾಗಿ ಒಗ್ಗಟ್ಟಿನ ಹೋರಾಟ ನಡೆಯುತ್ತಿಲ್ಲ ರೈತರ ಹೊಲಕ್ಕೆ ನೀರು ಬರುತ್ತಿಲ್ಲ ಭೂಸ್ವಾಧೀನ ಪ್ರಕರಣಗಳಲ್ಲಿ ರೈತರ ಭೂಮಿಗೆ ಇದುವರೆಗೂ ಸರಿಯಾದ ಪರಿಹಾರ ದೊರೆತಿಲ್ಲ, ಆಲಮಟ್ಟಿ ಡ್ಯಾಂ ಎತ್ತರಿಸುವ ಇಚ್ಛಾಶಕ್ತಿಯನ್ನು ಸರ್ಕಾರಗಳು ತೋರಿಸುತ್ತಿಲ್ಲ. ಬೆಂಗಳೂರು ಅಭಿವೃದ್ಧಿಗೆ 40000 ಕೋಟಿ ಅನುದಾನ ನೀಡುವ ಸರ್ಕಾರ ರೈತರ ಯೋಜನೆಗಳಿಗೆ ಹಣ ಕೊಡುತ್ತಿಲ್ಲ ಕೃಷ್ಣಾ ಮೇಲ್ದಂಡೆ ಯೋಜನೆಗೆ ಲಕ್ಷ ಕೊಟಿ ಕೊಡುವ ವಾಗ್ದಾನ ಮಾಡಿದ್ದಮುಖ್ಯಮಂತ್ರಿಸಿದ್ದರಾಮಯ್ಯನ ವರು ತಮ್ಮದೇ ಘೋಷಣೆ ಅನುಷ್ಠಾನಗೊಳಿಸಿಲ್ಲ ಎಂದರು.
ದೇವೇಗೌಡರು ಪ್ರಧಾನಿಯಾಗಿದ್ದಾಗ ಕೃಷ್ಣಾ
ಭಾಗ್ಯ ಜಲ ನಿಗಮದ ಸ್ಥಾಪಿಸಿ ಬಾಂಡ್ ಮೂಲಕ ಹಣ ಸಂಗ್ರಹಿಸಲು ಮುಂದಾಗಿದ್ದರು. ಅದನ್ನೇ ಈಗ ಮರಳಿ ಜಾರಿಗೊಳಿಸಬಹುದಾಗಿದೆ. ಪ್ರತಿಯೊಬ್ಬ ರೈತನ ಹೊಲಕ್ಕೆ ನೀರು ದೊರೆತಲ್ಲಿ ಮಾತ್ರ ರೈತರ ಜೀವನ ಮಟ್ಟ ಸುಧಾರಣೆ ಆಗುವುದು ಸಾಧ್ಯವಿದೆ. ಈ ಭಾಗದಲ್ಲಿ ಕಬ್ಬು ಬೆಳೆಯುವ 10 ಸಾವಿರ ಹೆಕ್ಟೇರ್ ಹೊಲಕ್ಕೆ ನೀರು ಬಂದರೆ ಕಬ್ಬಿನ ಇಳುವರಿ ಹೆಚ್ಚಾಗಿ ಇನ್ನೊಂದೆರಡು ಸಕ್ಕರೆ ಕಾರ್ಖಾನೆ ಆರಂಭಗೊಂಡು ರೈತರ ಜೀವನ ಮಟ್ಟ ಸುಧಾರಿಸುತ್ತದೆ. ರೈತನ ಮಕ್ಕಳಿಗೆ ಹೆಣ್ಣು ಕೊಡುವುದಿಲ್ಲ ಎನ್ನುವ ಮನೋಭಾವ ರೈತ ಸಬಲನಾಗುವುದರಿಂದ ದೂರವಾಗಬಹುದು ಎಂದರು.
ವಿಜಯಪುರ ಜಿಲ್ಲೆಯಲ್ಲಿ ಎರಡು ಜಲಾಶಯ ಇವೆ. ಇವತ್ತಿಗೂ ಬಹಳಷ್ಟು ರೈತರ ಹೊಲಕ್ಕೆ ನೀರು ಬರುತ್ತಿಲ್ಲ ಆಂಧ್ರದಲ್ಲಿ ಇವತ್ತು ಎಲ್ಲ ರೈತರ ಹೊಲಕ್ಕೂ ನೀರು ಬರುತ್ತಿದೆ. ಇದು ವಿಜಯಪುರ ಜಿಲ್ಲೆಗೆ ತೋರುತ್ತಿರುವ ಮಲತಾಯಿ ಧೋರಣೆ ಯಾಗಿದೆ. ದೇವೇಗೌಡರು ಯುಕೆಪಿ ಅನುಷ್ಠಾನದ ರೂವಾರಿಗಳು. ಅವರಿಂದಾಗಿಯೇ ನಾವಿಂದು ಹೊಲಗಳಿಗೆ ನೀರು ಕಾಣುವಂತಾಗಿದ್ದು ಅವರ ಮಹತ್ವಾಕಾಂಕ್ಷಿ ಯೋಜನೆ ಈಗಿನ ಅವಧಿಯಲ್ಲಿ ಪೂರ್ಣವಾಗಿ ಅನುಷ್ಠಾನಗೊಳ್ಳದೆ ನೆನೆಗುದಿಗೆ ಬಿದ್ದಿರುವುದು ವಿಷಾಧ ಪಡುವಂಥದ್ದು ಎಂದರು.
ರೈತರೇ ನಿಜವಾದ ಸ್ವಾತಂತ್ರ್ಯ ಹೋರಾಟಗಾರರು ನಮಗೆ ಸ್ವಾತಂತ್ರ್ಯ ಸಿಗುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಮಹಾತ್ಮ ಗಾಂಧೀಜಿ ಇನ್ನಿತರ ನಾಯಕರು ಹೋರಾಟದ ನೇತೃತ್ವ ವಹಿಸಿ ಕೊಂಡಿದ್ದರು. ನರಗುಂದ ಬಂಡಾಯ ರಾಜ್ಯದ ರೈತಾಪಿ ವರ್ಗದ ಇತಿಹಾಸದಲ್ಲಿ ಅತ್ಯಂತ ಮಹತ್ವದ
ಹೋರಾಟವಾಗಿತ್ತು. ಆಗ ಹುತಾತ್ಮರಾದ ರೈತರು ಸದಾ ಕಾಲ ಸ್ಮರಣೀಯರಾಗಿದ್ದಾರೆ. ನರಗುಂದ ಬಂಡಾಯದ ನಂತರವೇ ಸರ್ಕಾರ ರೈತರಿಗೆ ಸೌಲಭ್ಯ ಕೊಡಲು ಪ್ರಾರಂಭಿಸಿತು. ಇದು ರೈತ ಹೋರಾಟದ ಅವಿಸ್ತರಣೀಯ ಘಟನೆಯಾಗಿದೆ ಎಂದರು.
ಇದಕ್ಕೂ ಮುನ್ನ ಎಲ್ಲ ರೈತರು ಬಸವೇಶ್ವರ ವೃತ್ತದಲ್ಲಿ ಕಾಲ್ನಡಿಗೆಯಲ್ಲಿ ಆಗಮಿಸಿದರು. ನರಗುಂದ ಬಂಡಾಯದಲ್ಲಿ ಹುತಾತ್ಮರಾದ ರೈತರಿಗೆ ಎಪಿಎಂಸಿ ಆವರಣದಲ್ಲಿ ಶ್ರದ್ದಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ತಾಲೂಕು ಅಧ್ಯಕ್ಷ ಅಯ್ಯಣ್ಣ ಬಿದರಕುಂದಿ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಗುರುಸ್ವಾಮಿ ಹಂಡರಗಲ್. ಸುಮಂಗಲಾ ಪುರಾಣಿಕಮಠ ಸಂಗಮೇಶಸ್ವಾಮಿ ಕೋಳೂರ, ತಾಳಿಕೋಟೆ ತಾಲೂಕಾಧ್ಯಕ್ಷ ಅಮರೇಶ ಮಡಿವಾಳರ, ಅಮರೇಶ ಬಿರಾದಾರ, ಮಲಗಲ ದಿನ್ನಿ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ರೈತ ಮುಖಂಡರು, ರೈತರರು ಪಾಲ್ಗೊಂಡಿದ್ದರು.