ಮುಂದಿನ ಸಿಎಂ ನಾನೇ : ಸತೀಶ ರಾಠೋಡ..
ವಿಜಯಪುರ: ನನ್ನನ್ನು ಸಿಎಂ ಸಿದ್ದರಾಮಯ್ಯ ಸಿಎಂ ಮಾಡಲಿಲ್ಲ ಎಂದ್ರೇ ಸಿದ್ದರಾಮಯ್ಯ ಜೈಲಿಗೆ ಹೋಗೋದು ಪಕ್ಕಾ ಎಂದು ವಿಜಯಪುರ ಜಿಲ್ಲೆಯ ಉಪ್ಪಲದಿನ್ನಿ ನಿವಾಸಿ ಸತೀಶ ರಾಠೋಡ ಭವಿಷ್ಯ ನುಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಮುಂದಿನ ಸಿಎಂ ನಾನೇ. ಕಳೆದ 2021ರಲ್ಲಿ ಈ ಬಗ್ಗೆ ನಾನು ಪ್ರಸ್ತಾಪ ಮಾಡಿದೆ. ಆದ್ರೇ, ಯಾರು ಗಂಭೀರವಾಗಿ ತೆಗೆದುಕೊಂಡಿಲ್ಲ. ಈ ಬಾರಿ ನನ್ನನ್ನು ಸಿಎಂ ಮಾಡಬೇಕು. ಇಲ್ಲದೇ ಹೋದ್ರೇ ಭಾರತ ದೇಶ ಅಭಿವೃದ್ಧಿ ಆಗಲ್ಲ. ಬದಲಿಗೆ ಮತ್ತಷ್ಟು ಕೋವಿಡ್ನಂತಹ ವಿವಿಧ ರೋಗಗಳು ಉಲ್ಬಣ ಆಗುತ್ತವೆ. ಅಲ್ಲದೇ, ನನಗೆ ಸಿಎಂ ಮಾಡಿದ್ರೇ ಮುಂದೇ ಸಂಸದ, ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ಪ್ರಧಾನಮಂತ್ರಿ ಆಗುತ್ತಾರೆ ಎಂದರು.