ಮಾನವ ಜನ್ಮ ದೊಡ್ಡದು : ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ
ಇಂಡಿ: ಪಟ್ಟಣದ ಸಿಂದಗಿ ರಸ್ತೆಯ ಸಿವಿ ರಾಮನ್ ಪದವಿ ಪೂರ್ವ ವಿದ್ಯಾಲಯದಲ್ಲಿ ಸೋಮವಾರ ವಿಶ್ವಹಿಂದೂ ಪರಿಷದ್ ಭಜರಂಗದಳ ಅವರ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಪರಿಷದ ಸ್ಥಾಪನಾ ದಿನಾಚರಣೆ ಆಚರಿಸಲಾಯಿತು.
ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಮಾತನಾಡಿ, ಮಾನವ ಜನ್ಮ ದೊಡ್ಡದು. ಸರ್ವ ಜನಾಂಗ ಶಾಂತಿಯ ತೋಟ ನಾವೆಲ್ಲರೂ ಕೂಡಿ ಬಾಳುವುದರಲ್ಲಿ ಸಾಮರಸ್ಯವಿದೆ ಎಂದು ಹೇಳಿದರು
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರಿನ ಕ್ಷತ್ರಿಯ ವಿಶ್ವ ಹಿಂದೂ ಪರಿಷತ್ನ ಸೂರ್ಯ ನಾರಾಯಣಜಿ ಮಾತನಾಡಿ, ದೇಶ ದೊಡ್ಡದು. ದೇಶಕ್ಕಾಗಿ ನಾವೆಲ್ಲರೂ ದುಡಿಯೋಣ. ದೇಶವಿದ್ದರೆ ನಾವು ಅನ್ನುವ ಭಾವನೆಯನ್ನು ಯುವಕರು ತುಂಬಿಕೊಳ್ಳಬೇಕೆಂದು ಮಾರ್ಮಿಕವಾಗಿ ನುಡಿದರು.
ಸಿ.ವಿ. ರಾಮನ್ ಸಂಸ್ಥೆಯ ಸಂಸ್ಥಾಪಕÀ ಶಿವಾನಂದ್ ಕಾಮಗೊಂಡ ಮಾತನಾಡಿ, ಮಾನವ ಧರ್ಮ ದೊಡ್ಡದು ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು
ವಿ.ಹಿಂ.ಪ ಮುಖಂಡ ಶ್ರೀಮಂತ ದುದಗ್ಗಿ ಕೃಷ್ಣನ ಜನ್ಮ ಚರಿತ್ರೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾಯಕ್ಕ ಚೌದರಿ ಶಾಂತಿ ಸಂದೇಶದ ಮಂತ್ರಗಳನ್ನು ಪಠಿಸಿದರು.
ಸುನಿಲ್ ಜಮಖಂಡಿ, ಪ್ರಕಾಶ್ ಬಿರಾದಾರ, ವಿಠ್ಠಲ ಹೊಸಮನಿ, ಮಲ್ಲಿಕಾರ್ಜುನ ಬಿರಾದಾರ, ನೇತಾಜಿ ಪವಾರ ಸೇರಿದಂತೆ ಇನ್ನಿತರರು ಇದ್ದರು.
ಐವತ್ತಕ್ಕೂ ಹೆಚ್ಚು ಮಕ್ಕಳು ಕೃಷ್ಣನ ವೇಷ ಧರಿಸಿ ಜನ್ಮಾಷ್ಟಮಿಯಲ್ಲಿ ಪಾಲ್ಗೊಂಡಿದ್ದರು. ಸಂಸ್ಥೆಯ ನಿರ್ದೇಶಕರಾದ ಮಹಾವೀರ್ ವರ್ಧಮಾನ್, ಸನ್ಮತಿ ಹಳ್ಳಿ, ಶೈಲೇಶ್ ಬಿಳಗಿ, ಪ್ರಸನ್ನ ಕುಮಾರ್ ನಾಡಗೌಡ ಉಪಸ್ಥಿತರಿದ್ದರು.
ಇಂಡಿ: ಪಟ್ಟಣದ ಸಿಂದಗಿ ರಸ್ತೆಯ ಸಿವಿ ರಾಮನ್ ಪದವಿ ಪೂರ್ವ ವಿದ್ಯಾಲಯದಲ್ಲಿ ಸೋಮವಾರ ವಿಶ್ವಹಿಂದೂ ಪರಿಷದ್ ಭಜರಂಗದಳ ಅವರ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಪರಿಷದ ಸ್ಥಾಪನಾ ದಿನಾಚರಣೆ ಆಚರಿಸಲಾಯಿತು.