ಗೌರವ ಕಾರ್ಯದರ್ಶಿ ಪ್ರಭಾಕರ್ ಬಗಲಿ ನಿಧನ
ಇಂಡಿ: ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದಶಿ೯ ಪ್ರಭಾಕರ. ಎಸ್. ಬಗಲಿ, ವಯಸ್ಸು70 ಮಂಗಳವಾರ ಮಧ್ಯಾಹ್ನ ನಿಧನ ಹೊಂದಿದ್ದಾರೆ. ಮೃತರಿಗೆ ಪತ್ನಿ, ಮಗ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಅಂತ್ಯಕ್ರಿಯೆ ಬುಧವಾರ ಸಾಯಂಕಾಲ 4 ಘಂಟೆಗೆ ಇಂಡಿಯಲ್ಲಿ ನೇರವೇರಲಿದ್ದು, ಇವರ ನಿಧನಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ, ನೀಲಕಂಠಗೌಡ ಪಾಟೀಲ, ಸಿದ್ದಣ ತಾಂಬೆ, ಸತೀಶ್ಚಂದ್ರ ಕುಲಕರ್ಣಿ,ಡಿ.ಆರ್. ಶಹಾ, ಎಮ್.ಕೆ.ಕುಲಕರ್ಣಿ, ಆಡಳಿತ ಮಂಡಳಿ ಸದಸ್ಯರು ಹಾಗು ಶಾಲಾ ಕಾಲೇಜಿನ ಸಿಬ್ಬಂದಿಯವರು ಸಂತಾಪ ಸೂಚಿಸಿದ್ದಾರೆ.