ಹೇಮರೆಡ್ಡಿ ಮಲ್ಲಮ್ಮನವರು ಮಮತೆಯ ಸಾಕಾರಮೂರ್ತಿ : ಸಂಗಮೇಶ ನವಲಿ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ : ಶ್ರೀ ಹೇಮರೆಡ್ಡಿ ಮಲ್ಲಮ್ಮನವರು ಮಮತೆಯ ಸಾಕಾರ ಮೂರ್ತಿ ಮುಖ್ಯ ಎಂದು ಗುರುಗಳಾದ ಸಂಗಮೇಶ ಶಾಂತಪ್ಪ ನವಲಿ ಎಂದು ಹೇಳಿದರು.
ತಾಲ್ಲೂಕಿನ ಗುಡಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾತೋಶ್ರೀ ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರಾದ ಶಾಂತಗೌಡ ಮಾಡಗಿ ಹಾಗೂ ಮುಖ್ಯ ಅತಿಥಿಗಳಾಗಿ ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಯಮನಪ್ಪ ಹಣಮಂತಪ್ಪ ಮಾದರ, ವೇದಮೂರ್ತಿಗಳಾದ ಗುರುಲಿಂಗಯ್ಯ ಸಂಗಯ್ಯ ಹಿರೇಮಠ, ಈರಣ್ಣ ರುದ್ರಪ್ಪ ಮಾಡಗಿ, ಬಸಲಿಂಗಪ್ಪ ರುದ್ರಪ್ಪ ನರಸಣಗಿ, ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರಾದ ಶಿವಾನಂದ ಸಂಗಣ್ಣ ಮಾಡಗಿ, ಪ್ರತೀಕ ರಾಮನಗೌಡ ಚಿತ್ತಾಪುರ, ಯಮನಪ್ಪ ಚಲವಾದಿ, ಮತ್ತು ಶಾಲಾ ಮುಖ್ಯ ಗುರುಗಳಾದ ಸಂಗಮೇಶ ನವಲಿ ಹಾಗೂ ಅತಿಥಿ ಶಿಕ್ಷಕಿಯರಾದ ಕಾಶಿಬಾಯಿ ಹಾದಿಮನಿ, ಶಾಲಾ ಮುದ್ದು ಮಕ್ಕಳು ಉಪಸ್ಥಿತರಿದ್ದರು. ಮಕ್ಕಳಿಗೆಲ್ಲ ಸಿಹಿಯನ್ನು ಎಸ್ಡಿಎಂಸಿ ಅಧ್ಯಕ್ಷರು ವಿತರಿಸಿದರು ಎಲ್ಲ ಮಕ್ಕಳಿಗೂ ಪೆನ್ಸಿಲನ್ನು ಈರಣ್ಣ ರುದ್ರಪ್ಪ ಮಾಡಗಿ ವಿತರಿಸಿದರು. ಕಾಶಿಬಾಯಿ ಹಾದಿಮನಿ ನಿರೂಪಿಸಿದರು.
ಸಂಗಮೇಶ ಶಾಂತಪ್ಪ ನವಲಿ ಸ್ವಾಗತಿಸಿದರು, ವಂದಿಸಿದರು.
ಕುಮಾರಿ ಸ್ವಪ್ನ ಹಾದಿಮನಿ ಪ್ರಾರ್ಥಿಸಿದರು