ಬಡವರ ದಿನ ದಲಿತರ ದುರ್ಭಲರಿಗೆ ಸಹಾಯ ಮಾಡಿ..!
ಇಂಡಿ: ತಡವಲಗಾ ಗ್ರಾಮದ ಮೇತ್ರಿ ಕಾಕಾ ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣ ಕ ಕ್ಷೇತ್ರಗಳಲ್ಲಿ ಅನೇಕ ಕಾರ್ಯಗಳನ್ನು ಮಾಡಿ ಬಡವರ ದಿನ ದಲಿತರ ದುರ್ಭಲರಿಗೆ ಸಹಾಯ ಮಾಡಿ ಮೇರು ವ್ಯಕ್ತಿತ್ವ ಹೊಂದಿದ್ದರು ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ತಡವಲಗಾ ಗ್ರಾಮದ ಜೋಡಗುಡಿಯ ಮರುಳ ಸಿದ್ದೇಶ್ವರ ಮಂಗಲ ಕಾರ್ಯಾಲಯದಲ್ಲಿ ಸಮಾಜ ಮುಖಿ ಮೇತ್ರಿ ಕಾಕಾ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಅನೇಕ ರಾಜ ಕಾರಣ ಗಳನ್ನು ಶಾಸಕರನ್ನಾಗಿ ಮಾಡುವಲ್ಲಿ ಮೇತ್ರಿ ಕಾಕಾ ಪಾತ್ರ ಪ್ರಮುಖ, ಅವರು ನಿಷ್ಠಾವಂತ, ಸಿದ್ದಾಂತದ ಮತ್ತು ಅನೇಕ ಕಲ್ಯಾಣ ಕಾರ್ಯ ಮಾಡುವ ಮೂಲಕ ಕಾರ್ಯಕರ್ತರ ಜನ ಮಾನಸದಲ್ಲಿ ಉಳಿದಿದ್ದರು.
ಹಿಂದುಳಿದ ಪ್ರದೇಶದಲ್ಲಿ ಶೈಕ್ಷಣ ಕ ಸಂಸ್ಥೆ ತೆಗೆದು ಜೊತೆಗೆ ತಡವಲಗಾ ಸೇರಿದಂತೆ ಸುತ್ತಿನ ಗ್ರಾಮಗಳ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅಜಾತಶತ್ರು ರಾಜಕಾರಣ ಎಂದರು.
ಗ್ರAಥ ಬಿಡುಗಡೆಯನ್ನು ವಿಜಯಪೂರ ಹಾಗೂ ಬಾಗಲಕೋಟೆ ಜಿಲ್ಲೆಯ ಸಂಸದರಾದ ರಮೇಶ್ ಜಿಗಜಿಣಗಿ ಹಾಗೂ ಪಿ.ಸಿ.ಗದ್ದಿಗೌಡರ ಅವರು ಬಿಡುಗಡೆ ಗೊಳಿಸಿ, ಹಾಗೂ ಎಸ್.ಎಸ್.ಸಿಂಪಗೇರ ಅವರು ರಚಿತ ಕವನ ಸಂಕಲನವನ್ನು ಇಂಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಬಿಡುಗಡೆ ಗೊಳಿಸಿ ಮೇತ್ರಿ ಕಾಕಾ ಅಜಾತ ಶತ್ರು ವಾಗಿದ್ದರು. ಅವರು ಬಡವರ ಪರ ಚಿಂತನೆ ಮಾಡಿ ಮತಕ್ಷೇತ್ರದಲ್ಲಿ ಮತ್ತು ತಡವಲಗಾ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಅನೇಕ ಕಾರ್ಯ ಮಾಡಿದರು ಎಂದರು.
ದಿವ್ಯ ಸಾನ್ನಿಧ್ಯದವನ್ನು ಡಾ. ಜಯಬಸವಕುಮಾರ ಮಾಹಾಸ್ವಾಮಿಗಳು ಆಡಳಿತಾಧಿಕಾರಿ ಮುರುಘಾಮಠ ಚಿತ್ರದುರ್ಗ ಹಾಗೂ ನಾಗಠಾಣದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು, ತಡವಲಗಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರು ಮೇತ್ರಿ ಕಾಕಾ ಕುರಿತು ಮಾತನಾಡಿದರು.
ಗೋಳಸಾರದ ಅಭಿನವ ಪುಂಡಲಿAಗ ಶಿವಯೋಗಿಗಳು ತಿಂಥಣ -ಶಿರಕನಹಳ್ಳಿಯ ಅಡವಿಲಿಂಗ ಮಾಹಾರಾಜರು, ಹೀರೆರೂಗಿ ಸುಗಲಾದೇವಿ ಅಮ್ಮನವರು, ಖ್ಯಾತ ಪುರಾಣ ಕರಾದ ಶಿವಾನಂದ ಶಾಸ್ತ್ರಿಗಳು ಹಿರೇಮಠ ತಡವಲಗಾ, ಮಾಜಿ ಶಾಸಕ ರಮೇಶ್ ಬೊಸನೂರ, ಎಸ್.ಕೆ.ಬೆಳ್ಳುಬ್ಬಿ, ಬಿ.ಜಿ.ಪಾಟೀಲ, ಎ.ಎಸ್.ಗಾಣ ಗೇರ, ಗುರುಶಾಂತ್ ನಿಡೋಣ , ಬಿ.ಬಿ.ಗುಡ್ಡದ, ಸಂಗು ಸಜ್ಜನ, ಕಲ್ಲನಗೌಡ ಪಾಟೀಲ, ಬಿ.ಬಿ.ಗಡ್ಡದ, ಬಾಬುಸಾಹುಕಾರ ಮೇತ್ರಿ ತಮ್ಮಣ್ಣ ಪೂಜಾರಿ ಮತ್ತಿತರಿದ್ದರು.
ಇಂಡಿ: ತಾಲೂಕಿನ ತಡವಲಗಾ ಗ್ರಾಮದ ಜೋಡಗುಡಿಯ ಮರುಳ ಸಿದ್ದೇಶ್ವರ ಮಂಗಲ ಕಾರ್ಯಾಲಯದಲ್ಲಿ ಸಮಾಜ ಮುಖಿ ಮೇತ್ರಿ ಕಾಕಾ ಸ್ಮರಣ ಸಂಚಿಕೆಯ ಕಾರ್ಯಕ್ರಮವನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು.



















