ಗುಬ್ಬೇವಾಡ ಗ್ರಾಮ ಪಂಚಾಯತ್ ನೂತನ ಸಾರಥಿ ಶಾರದಾಬಾಯಿ ಮರಗೂರ..
ಇಂಡಿ : ತಾಲ್ಲೂಕಿನ ಗುಬ್ಬೇವಾಡ ಗ್ರಾಮ ಪಂಚಾಯತ್ ಬುಧುವಾರ ನಡೆದ ಎರಡನೇ ಅವಧಿಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಾರದಾಬಾಯಿ ಸಿದ್ದಪ್ಪ ಮರಗೂರ ಹಾಗೂ ಉಪಾಧ್ಯಕ್ಷರಾಗಿ ಅನೀತಾ ಆನಂದ ಚಾಂದಕವಟೆ ಆಯ್ಕೆಯಾಗಿದ್ದಾರೆ. ಒಟ್ಟು 14 ಸದಸ್ಯರಲ್ಲಿ 9 ಸದಸ್ಯರು ಇದ್ದು ಬಲ ತೋರಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಶಾರದಾಬಾಯಿ ಸಿದ್ದಪ್ಪ ಮರಗೂರ ಮಾತಾನಾಡಿದ ಅವರು, ಸ್ವಂತತ್ರ ದೊರಕಿದ ಸುಮಾರು 76 ಕಳೆದರೂ ನಮ್ಮೂರಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ದೊರಕಿರಿಲಿಲ್ಲ. ಆದರೆ ಈ ಬಾರಿ ಗ್ರಾಮದ ಮುಖಂಡರ ಹಾಗೂ ಶಿರಗೂರ ಇನಾಂ ಮತ್ತು ಚಿಕ್ಕ ಮಣ್ಣೂರ ಗ್ರಾಮದ ಜನರ ಸಹಕಾರದಿಂದ ಗುಬ್ಬೇವಾಡ ಗ್ರಾಮಕ್ಕೆ ಪ್ರಥಮ ಬಾರಿಗೆ ಗೆಲವು ಒಲಿದಿದ್ದು ತುಂಬಾ ಖುಷಿಯ ಸಂಗತಿ ಎಂದು ಹೇಳಿದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎರಡು ಗ್ರಾಮಗಳಿಗೂ ಹೆಚ್ಚಿನ ಕಾಳಜಿ ವಹಿಸಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡುತ್ತೆನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿಯಾಗಿ ಕೃಷಿ ಇಲಾಖೆ ಎಡಿ ಮಹಾದೇವಪ್ಪ ಏವೂರ, ಪಿಡಿಒ ಸಿದ್ದರಾಮ ಸಿನಖೇಡ ಹಾಗೂ ಮುಖಂಡರು ಅರ್ಜುನ ಮರಗೂರ, ಮಶ್ಯಾಕ ಕಸಾಯಿ, ಸತೀಶ ಚಾಂದಕವಟೆ, ಧರ್ಮಣ್ಣ ಕೋಳಿ ಇನ್ನೂ ಗ್ರಾಮಸ್ಥರು ಉಪಸ್ಥಿತರಿದ್ದರು.