ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ ; ಸರಕಾರಿ ಹುದ್ದೆಯಿಂದ ಒಂದು ಕುಟುಂಬದ ಶೈಕ್ಷಣಿಕ ಹಾಗೂ ಆರ್ಥಿಕ ಮಟ್ಟದ ಸುಧಾರಣೆ ಆಗುತ್ತದೆ ಎಂದು ಧಾರವಾಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಹೆಚ್ ಬಿ ವಾಲಿಕಾರ ಹೇಳಿದರೂ ಅವರು ಗುರುವಾರ ಪಟ್ಟಣದ ಹೋಳ್ಕರ ಬಡಾವಣೆಯ ಅಭ್ಯುದಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸಮಾಜ ಸೇವಕ ಶಿಕ್ಷಣ ಪ್ರೇಮಿ ಮಲ್ಲಿಕಾರ್ಜುನ ಮದರಿ ನೇತೃತ್ವದಲ್ಲಿ ಸಂಯೋಜಿತ ಪದವಿಗಳ ಕುರಿತು ೨ದಿನದ ಉಚಿತ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು ಬಿಎ ,ಬಿಎಎಸ್ಸಿ, ಬಿಕಾಂ ಪಠ್ಯ ಕ್ರಮದಿಂದ ಡಿಗ್ರಿ ಸಿಗುತ್ತದೆ ಈ ಡಿಗ್ರಿಯನ್ನುವುದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರವೇಶಪತ್ರವಿದ್ದಂತೆ ಸ್ಪರ್ಧೆಗೆ ಅವಕಾಶ ಸಿಗುತ್ತದೆ ಇದಕ್ಕೆ ಮಲ್ಲಿಕಾರ್ಜುನ ಮದರಿಯವರು ಶಿಕ್ಷಣದ ಬಂಡೆ ತಯಾರಿ ಮಾಡಿದ್ದಾರೆ ನುರಿತ ಶಿಕ್ಷಣ ತಜ್ಞರು ತರಬೇತಿಯನ್ನು ನೀಡುತ್ತಾರೆ ಅದಕ್ಕೆ ಅಭ್ಯುದಯ ಕಾಲೇಜಿನಲ್ಲಿ ಹೈಬ್ರೀಡ್ ಕ್ಲಾಸ್ ( ಸ್ಮಾರ್ಟ್ ಕ್ಲಾಸ್) ರೆಡಿ ಮಾಡಿದ್ದಾರೆ ಈ ಮೂಲಕ ಈ ಕಾಲೇಜಿನ ವಿದ್ಯಾರ್ಥಿಗಳು ಸಂಯೋಜಿತ ಪದವಿಗಳ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪಡೆಯಬಹುದು ಹಾಗೆ ಇತರೆ ಕಾಲೇಜಿನ ಅಥವಾ ಡಿಗ್ರಿ ವಿದ್ಯಾರ್ಥಿಗಳಿಗೆ ಸಹ ಪ್ರತ್ಯೇಕ ಕ್ಲಾಸ್ ನ ವ್ಯವಸ್ಥೆ ಸಹ ಆಗಲಿದೆ ಎಂದರು
ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ ಮಾತನಾಡಿ ಡಾ.ಹೆಚ್ ಬಿ ವಾಲಿಕಾರ ಅವರ ಮಾರ್ಗದರ್ಶನದಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಸ್ಮಾರ್ಟ್ ಕ್ಲಾಸ್ ಗಳನ್ನು ಆರಂಭಿಸಲಾಗುತ್ತಿದೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಉನ್ನತ ಹುದ್ದೆಗಳನ್ನು ಪಡೆಯಲು ಸಾದ್ಯವೆಂದರು
ಧಾರವಾಡ ಜೀನಿಯಸ್ ಅಕಾಡೆಮಿ ಯ ಸಿದ್ದಣ್ಣ ದಳವಾಯಿ , ಪ್ರೀಯಾಂಕ ಪತ್ತಾರ ಪಿಎಸೈ ಪಿಡಿಒ ಕಾನ್ಸಟೇಬಲ್ ಬ್ಯಾಕಿಂಗ್ ಆರ್ ಅರ್ ಬಿ ಎಸ್ ಎಸ್ ಸಿ ಹುದ್ದೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು,ಪ್ರಾಂಶುಪಾಲ ಆರ್ ಎಸ್ ಜಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸೈನ್ಸ್, ಬಿಎಸ್ಸಿ ಸಿಇಟಿ,ನೀಟ್ ನಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಶ್ರೀದೇವಿ ಮದರಿ, ಮಹಾದೇವಿ ಮದರಿ,ಶ್ರದ್ದಾ ಮದರಿ, ಸೌಮ್ಯ ಮದರಿ ಕಿರಣ್ ಮದರಿ, ಶೇಖಪ್ಪ ಮೇಟಿ ,ಬಸವರಾಜ ಬಿಜ್ಜೂರ, ಎಂಎಂ ಧನ್ನೂರ, ಪ್ರಶಾಂತ ಬಿರಾದಾರ ಎಸ್ ರಂಗಸ್ವಾಮಿ, ವಿರೇಶ ಹೂಲಿಕೇರಿ, ರವಿ ಚಲವಾದಿ, ರವಿ ಜಗಲಿ, ಚಂದ್ರು ಜೋಗಿನ, ಬಸವರಾಜ ಗೂಡಲಮನಿ, ಸೇರಿದಂತೆ ಕಾರ್ಯಾಗಾರದಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಿ.ಜಿ ಬಿರಾದಾರ ನಿರೂಪಿಸಿ ವಂದಿಸಿದರು .
ಮುದ್ದೇಬಿಹಾಳದಲ್ಲಿ ಶಿಕ್ಷಣದ ಕ್ರಾಂತಿ ಮಾಡಿದವರಲ್ಲಿ ಮೊದಲಿಗರು ಮಹಾದಾನಿ ಗಂಗಮ್ಮ ಚಿನಿವಾರ ಅವರು ಎರಡನೇ ಸ್ಥಾನದಲ್ಲಿ ಮಲ್ಲಿಕಾರ್ಜುನ ಮದರಿಯವರು ಇದ್ದಾರೆ ಯಾರಲ್ಲಿ ಶಿಕ್ಷಣ ಸಂಸ್ಥೆಗೆ ಕೈಚಾಚದೆ ಸ್ವಂತ ದುಡಿಮೆಯಿಂದ ಸಂಸ್ಥೆ ಹುಟ್ಟುಹಾಕಿದ್ದಾರೆ ಅವರಲ್ಲಿ ಕಾರ್ಯ ಕ್ಷಮತೆ ಇದೆ ;
ಡಾ.ಹೆಚ್ ಬಿ ವಾಲಿಕಾರ ನಿವೃತ್ತ ಧಾರವಾಡ ವಿವಿ ಕುಲಪತಿಗಳು
ಮುದ್ದೇಬಿಹಾಳ ಪಟ್ಟಣದ ಎಂಜಿವಿಸಿ ಕಾಲೇಜು ವಿಬಿಸಿ ಹೈಸ್ಕೂಲ್ ಶಿಕ್ಷಣದಿಂದ ನನ್ನನ್ನು ಸೇರಿದಂತೆ ಅನೇಕರು ವಿದ್ಯಾವಂತರಾಗಿದ್ದಾರೆ ನಾನು ಇಲ್ಲಿ ಶಿಕ್ಷಣ ಕಲಿಯುವಾಗಿನ ಪರಿಸರ ವಾತಾವರಣ ಗಿಡಿದ ಕೆಳಗೆ ಕುಳಿತು ಓದಿದ ಹಾಗೂ ಕಾಲೇಜಿನ ಓದಿಗೆ ಲೈಬ್ರರಿ ಅವಕಾಶ ನೀಡಿದ ಪರಿಯ ಪ್ರೇರಣೆಯಿಂದ ಧಾರವಾಡ ವಿಶ್ವವಿದ್ಯಾಲಯದಲ್ಲಿ 24×7 ಲೈಬ್ರರಿ ಹಾಗೂ ೬ ಎಕರೆಯಲ್ಲಿ ಗ್ರೀನ್ ಲ್ಯಾಬರಿ ಮಾಡಲು ಸಾಧ್ಯವಾಯಿತು ಮುದ್ದೇಬಿಹಾಳ ಮೆರೆಯಲು ಸಾಧ್ಯವಿಲ್ಲ; ಡಾ.ಹೆಚ್ ಬಿ ವಾಲಿಕಾರ ನಿವೃತ್ತ ಕುಲಪತಿಗಳು