ವಿಜಯಪುರ : ಜಿಲ್ಲೆಯ ಕೊಲ್ಹಾರ ಪಟ್ಟಣದ ಸ್ವಾಮಿ ವಿವೇಕಾನಂದ ಸರ್ಕಲ್ ಹತ್ತಿರದ ಬಂಗಾರದ ಅಂಗಡಿಯಲ್ಲಿ ಬೆಂಕಿ ಹೊತ್ತಿಕೊಂಡು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕರಕಲಾದ ಘಟನೆ ನಡೆದಿದೆ.
ಮೌನೇಶ ಬಡಿಗೇರ ಎಂಬುವರಿಗೆ ಸೇರಿದ ಬಂಗಾರದ ಅಂಗಡಿಯಲ್ಲಿ ಗ್ಯಾಸ್ ಚಿಮಣಿಯಿಂದ ಬೆಂಕಿ ತಗುಲಿ ಬೆಂಕಿ ಅವಘಡ ಆಗಿದೆ. ಮಾಜಿ ಸೈನಿಕ ಸದಾಶಿವ ಗಣಿಯವರು ಅಂಗಡಿಯಲ್ಲಿನ 3.50 ಲಕ್ಷ ನಗದು ಹಾಗೂ ಕೆಲ ಚಿನ್ನಾಭರಣವನ್ನು ಹೊರತಂದು ಅಂಗಡಿ ಮಾಲೀಕರಿಗೆ ನೀಡಿದ್ದಾರೆ. ಮಾಜಿ ಸೈನಿಕರ ಕಾರ್ಯವನ್ನು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.