ಬಾಲಗಂಗಾಧರ ತಿಲಕರ ದೂರದೃಷ್ಟಿ, ಯುಕರಿಗೆ ಪ್ರೇರಣೆ ನೀಡಲಿ ; ಬಿ.ಡಿ.ಪಾಟೀಲ
ಇಂಡಿ: ಇಂದಿನ ಆಧುನಿಕ ಕಾಲದ ಜಲ್ವಂತ ಸಮಸ್ಯೆಗಳಾದ ಬ್ರಷ್ಟಾಚಾರದ, ಜಾತಿಯತೆ, ಮೂಡನಂಬಿಕೆ, ಮುಂತಾದ ಸಮಾಜದ ಅನಿಷ್ಟ ಪದ್ಧತಿ ವಿರುದ್ಧ ಹೋರಾಡುವ ಶಕ್ತಿಯನ್ನು ಗಜಾನನ ಹಾಗೂ ತಿಲಕ್ ರು ಯುವಜನಾಂಗಕ್ಕೆ ಪ್ರೇರಣೆ ನೀಡಲಿ ಎಂದು ಜೆಡಿಎಸ್ ಪಾರಭವ ಅಭ್ಯರ್ಥಿ ಬಿ.ಡಿ. ಪಾಟೀಲ ಮಾತಾನಾಡಿದರು.
ತಾಲೂಕಿನ ಸೋನಕನಹಳ್ಳಿ ಬಲಭೀಮ ಗಜಾನನ ಯುವಕ ಮಂಡಳಿ ಹಮ್ಮಿಕೊಂಡ ರಸಮಂಜರಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಮಾತನಾಡಿದರು. 1893 ರಲ್ಲಿ ಮಹಾರಾಷ್ಟ್ರದಲ್ಲಿ ಪ್ರಧಮ ಬಾರಿಗೆ ಗಣೇಶನನ್ನು ಮನೆಗಳಿಂದ ಯಿಂದ ಬಹಿರಂಗವಾಗಿ ಸ್ಥಾಪಿಸಲು ಪ್ರಾರಂಭಿಸಿದರು.ಅವರ ಉದ್ದೇಶ ಅಂದಿನ ಕಾಲಘಟ್ಟದಲ್ಲಿ ಬ್ರಿಟಿಷರ ದಾಸ್ಯ ದಿಂದ ಭಾರತ ಮಾತೆಯನ್ನು ಮುಕ್ತಗೊಳಿಸುವ ಉದ್ದೇಶ ಹೂಂದಿದ್ದರು. ಮನೆ ಮನೆಯಲ್ಲಿ ಆಚರಿಸಲ್ಪಡುವ ಗಣೇಶನನ್ನು ಸಾರ್ವಜನಿಕವಾಗಿ ಸ್ಥಾಪಿಸಿ ಯುವಕರು ಒಂದೆಡೆ ಸೇರಿ ಸಂಘಟನಾತ್ಮಕ ವ್ಯೂಹ ರಚನೆ ಮಾಡುವ ಚಿಂತನೆ ತಿಲಕ್ ರದ್ದಾಗಿತ್ತು. ಹಿಂತಾ ಚಿಂತನೆಗಳು ಇಂದಿನ ಯುವಕರಿಗೆ ಪ್ರೇರಣೆನೀಡಲಿ, ಇಂದಿನ ಆದುನಿಕ ಕಾಲದ ಜಲ್ವಂತ ಸಮಸ್ಯೆಗಳಾದ ಬ್ರಷ್ಟಾಚಾರದ, ಜಾತಿಯತೆ, ಮೂಡನಂಬಿಕೆ, ಮುಂತಾದ ಸಮಾಜದ ಅನಿಷ್ಟ ಪದ್ಧತಿ ವಿರುದ್ಧ ಹೋರಾಡುವ ಶಕ್ತಿಯನ್ನು ಗಜಾನನ ಹಾಗೂ ತಿಲಕ್ ರು ನಮ್ಮ ಯುವಜನಾಂಗಕ್ಕೆ ಪ್ರೇರಣೆ ನೀಡಲಿ ಇಂದಿನ ನಮ್ಮ ಯುವಕರು ಗಜಾನನ ಉತ್ಸವ ಮನರಂಜನೆ ಸಾಧನವಾಗಿ ಬಳಸದೆ ತಿಲಕರ ದೂರದೃಷ್ಟಿ ನಮ್ಮ ಯವಕರದಾಗಲಿ ಎಂದು ಮಾತನಾಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಮಕಣಾಪೂರದ ಶ್ರೀ ಸೋಮನಿಂಗಮಾಹಾರಾಜರು ವಹಿಸಿದ್ದರು, ಕಾರ್ಯಕ್ರಮದ ನೇತೃತ್ವವನ್ನು ರೇವಣಸಿದ್ದ ಗೋಡಕೆ, ಮಹಾದೇವಗೌಡ, ಪಾಟೀಲ, ಮುತ್ತುಗೌಡ ಪೊಲೀಸ್ ಪಾಟೀಲ, ಗಂಗಾದರಗೌಡ ಬಿರಾದಾರ, ಮಲ್ಲಿಕಾರ್ಜುನ ಬೃಂಗಿಮಠ, ಗಣಪತಿ ಬಾಣಿಕೋಲ, ಮಲ್ಲುಸಾವುಕಾರ, ವಸಂತಗೌಡ ಉಮರಾಣಿ ಮುಂತವರು ಉಪಸ್ಥಿತರಿದ್ದರು.