ನಿರಾಶ್ರಿತೆಯ ಪಾಲಿನ ದೈವರಾಗಿದ್ದು, ಆಶಾಕಾರ್ಯಕರ್ತೆ ಗೀತಾ
ಇಂಡಿ: ಮನೆಯಲ್ಲಿ ಹೆತ್ತ ತಂದೆ ತಾಯಿಗಳ ಸಂಬಂಧಿಕರು, ಗುರು-ಹಿರಿಯರ ಮಾತು ಕೇಳದೆ ಅವರ ಮನದ ಇಚ್ಛೆಯಂತೆ ಮದುವೆಯಾಗಿದ್ದ ಹೆಣ್ಣು ಮಗಳು ಗರ್ಭಿಣಿ ಯಾದರೂ, ನಮ್ಮ ಮಾತು ಮೀರಿ ಹೋಗಿದ್ದಾರೆ. ಅವರ ಸಹವಾಸವೇ ಬೇಡ ಎಂದು ಅತ್ತ ಗಂಡನ ಮನೆಯವರು ಮತ್ತು ಇತ್ತ ತವರಮನೆಯವರು ಸಹ ಯಾರೂ ಬರದಿದ್ದಾಗ ಆರೋಗ್ಯ ಇಲಾಖೆಯವರು ಆ ನಿರಾಶ್ರಿತೆಯ ಪಾಲಿನ ದೈವವಾಗಿ ಬಂದು ಆಕೆಯನ್ನು ವಿಜಯಪೂರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆರಿಗೆ ಮಾಡಿಸಿದ ಘಟನೆ ಶನಿವಾರ ನಡೆದಿದೆ.
ನಿರಾಶ್ರಿತೆ ರೋಷನ್.ಬಿ. ನದಾಫ್ ಎಂಬ ಹೆಣ್ಣು ಮಗಳೇ ಹೆರಿಗೆ ಆದ ತಾಯಿ. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆ ಗೀತಾ ಹಂಜಗಿ ಸೇರಿ ಗರ್ಭಿಣಿಗೆ ನಿನ್ನ ಜೊತೆ ನಾವಿದ್ದೇವೆ ಎಂಬ ಭರವಸೆ ನೀಡಿ ಆಕೆಗೆ ಧೈರ್ಯ ತುಂಬಿದ್ದರು. ಆ ಒಂದು ದೈರ್ಯದ ಮಾತು ರೋಷನ. ಬಿ ನದಾಫ್ ಜೀವ ಉಳಿಸಿದೆ.
ಹೆರಿಗೆಯ ನಂತರ ರಕ್ತದ ಕೊರತೆಯಿಂದ ಪ್ರಾಣ ಹೋಗುವ ಪರಿಸ್ಥಿತಿ ಎದುರಾಗಿತ್ತು. ರಾತ್ರಿ ವೇಳೆಯಲ್ಲಿ ರಕ್ತಕ್ಕಾಗಿ ಆಶಾ ಕಾರ್ಯಕರ್ತೆ ಗೀತಾ ಹಂಜಗಿ ಹಾಗೂ ಕ್ಷೇತ್ರ ಆರೋಗ್ಯ ಅಧಿಕಾರಿ ವೈ.ಎಂ. ಪೂಜಾರ. ಆ. ೨೪ರಂದು ಮಧ್ಯರಾತ್ರಿ ೨ ಘಂಟೆಗೆÀ ಜಿಲ್ಲಾ ರಕ್ತನಿಧಿಗೆ ಕರೆ ಮಾಡಿ ರಕ್ತದ ಅವಶ್ಯಕತೆಗೆ ಮನವಿ ಮಾಡಿದಾಗ, ಜಿಲ್ಲಾ ರಕ್ತ ನೀಧಿ ಘಟಕ ಸರ್ಕಾರಿ ಆಸ್ಪತ್ರೆ ವಿಜಯಪುರದ ಡಾ. ಮಮದಾಪುರ್ ಹಾಗೂ ರಿಸರ್ವ್ ಅವಧಿ ಮುಗಿದ ನಂತರ ಅಗತ್ಯ ರಕ್ತ ಪೂರೈಕೆ ಮಾಡಿದರು.
ಅತ್ತ ಹೆರಿಗೆಯಾದರು ಕೂಡ ಆಶಾ ಕಾರ್ಯಕರ್ತೆ ಗೀತಾ ಹಂಜಗಿ ತಮ್ಮ ಮನೆಗೆ ಬರುವಂತಿರಲಿಲ್ಲ. ಹೆರಿಗೆಯಾದ ಮಹಿಳೆಯ ತಾಯಿಯ ತವರು ಮನೆ ಗಂಡನ ಮನೆ ಸಂಬAಧಿಕರು ಪಾಲಕ ಪೋಷಕರು ಬರುವತನಕ ಹೆರಿಗೆ ತಾಯಿಯ ಜೊತೆ ಆರೈಕೆ ಮಾಡಲು ತಾಯಿ ಮಗುವಿನ ಆರೈಕೆ ಸೇವೆಗಳ ಮುಖ್ಯಸ್ಥ ಡಾ. ಸುರೇಶ್ ಚೌಹಾಣ ಮತ್ತು ಶ್ರೀಮತಿ ಭಾರತಿ ಸಖೀ ಸಂಸ್ಥೆ ಮುಖ್ಯಸ್ಥರು ಮಾನವೀಯ ಮೌಲ್ಯಗಳ ಜೊತೆಗೆ ಕಾನೂನಿನ ಪ್ರಕಾರ ಸೇವೆಗೆ ಮುಂದಾಗಲು ಗೀತಾ ಆಶಾ ಕಾರ್ಯಕರ್ತೆಗೆ ಸೂಚಿಸಿದಾಗ ವೃತಿ ಪವಿತ್ರತೆಯನ್ನು ಕಾಪಾಡಿದರು.
ಗರ್ಭಿಣ ತಾಯಿಗೆ ೬.೨ಗ್ರಾಂ ತೀವ್ರ ರಕ್ತದ ಹೀನತೆಯಿಂದ ಬಳಲುತ್ತಿದ್ದ ಹೆರಿಗೆಯಾದ ಮಹಿಳೆಗೆ ಸ್ತಿçà ರೋಗ ತಜ್ಞೆ ಡಾ.ಶೃತಿ ಹಾಗೂ ಸಹಾಯಕ ಸಿಬ್ಬಂದಿ ವಿಜಯಲಕ್ಷ್ಮಿ ಬಿರಾದಾರ, ವಿನೋದ್ ಮಠ ಮತ್ತು ಚಿಕ್ಕಬೆವನೂರ ಆರೋಗ್ಯ ಕೇಂದ್ರ ವೈದ್ಯರು ಮತ್ತು ಸಿಬ್ಬಂದಿ ಗರ್ಭಿಣ ತಾಯಿಗೆ ರಕ್ತ ಹಾಕುವ ಮೂಲಕ ರಕ್ತದ ಕೊರತೆಯಿಂದ ಹೋಗುವ ಜೀವ ಉಳಿಸುವಲ್ಲಿ ಮೊದಲ ಪ್ರಯತ್ನ ಮಾಡಿದ್ದಾರೆ.
ಕೊನೆಗೆ ಆಶಾ ಕಾರ್ಯಕರ್ತೆ ಗೀತಾ ಹಂಜಗಿ ಹೆರಿಗೆಯಾದ ಮಹಿಳೆಯ ಗಂಡನಿಗೆ ಕರೆ ಮಾಡಿ ಆತನಿಗೆ ಹೆಣ್ಣು ಮಗು ಜನನವಾಗಿದೆ ಎನ್ನುವ ವಿಚಾರ ತಿಳಿಸಿ, ಆತನ ಮನವೊಲಿಸಿ ಕೊನೆಗೂ ಆತನನ್ನು ಆಸ್ಪತ್ರೆಗೆ ಕರೆಯಿಸಿಕೊಂಡು ಗಂಡ-ಹೆAಡತಿನ್ನು ಕೂಡಿಸುವ ಕಾರ್ಯ ಮಾಡಿದ್ದಾರೆ. ಆಶಾ ಕಾರ್ಯಕರ್ತೆಯ ಕಳಕಳಿಯ ಸೇವೆಗೆ ಸಾರ್ವಜನಿಕ ವಲಯದಲ್ಲಿ ಬಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇಂಡಿ: ನಿರಾಶ್ರಿತೆ ರೋಷನ್.ಬಿ. ನದಾಫ್ ಅವರ ಹೆರಿಗೆಯನ್ನು ವಿಜಯಪೂರದ ಸರಕಾರಿ ಆಸ್ಪತ್ರೆಯಲ್ಲಿ ಮಾಡಿಸಿದ ಆಶಾ ಕಾರ್ಯಕರ್ತೆ ಗೀತಾ ಹಂಜಗಿ.