ಕರವೇ ಕಾರ್ಯಕರ್ತರಿಂದ ತೊಗರಿ ಬೆಳೆ ವಿಮೆ ಆಗ್ರಹಿಸಿ ಅಹೋ ರಾತ್ರಿ
ಧರಣಿ ರೈತರ ಬೇಡಿಕೆ ಈಡೆರಿಕೆಗಾಗಿ ಅಹೋ ರಾತ್ರಿ ಧರಣಿ
ಭಾರತ ಜಗತ್ತಿನಲ್ಲಿ ಬಲಿಷ್ಠವಾಗಬೇಕಾದರೆ ರೈತರಿಗೆ ಮನ್ನಣೆ ನೀಡಬೇಕು : ಶಿರಶ್ಯಾಡ ಅಭಿನವ ಮುರಗೇಂದ್ರ ಶ್ರೀಗಳು
ಇಂಡಿ : ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕರವೇ ಕಾರ್ಯಕರ್ತರು ವಿವಿಧ ಸಂಘಟನೆಗಳು ಮತ್ತು ಪ್ರಗತಿಪರ ರೈತರು ಕರವೇ ತಾಲೂಕಾ ಅಧ್ಯಕ್ಷ ಬಾಳು ಮುಳಜಿ ಇವರ ನೇತೃತ್ವದಲ್ಲಿ ತೊಗರಿ ಬೆಳೆಗೆ ವಿಮೆ ನೀಡಬೇಕು ಮತ್ತು ಬೇಸಿಗೆಯಲ್ಲಿ ರೈತ ಕೃಷಿಗೆ ನೀರಿನ ತೊಂದರೆ ಯಾಗುತ್ತಿದ್ದು ಮಹಾರಾಷ್ಟ್ರ ಸರಕಾರದ ಮನವೊಲಿಸಿ ಕೃಷಿ ನೀರು ಬಿಡಬೇಕು ಎಂದು ಆಗ್ರಹಿಸಿ ಹಗಲು ರಾತ್ರಿ ಧರಣಿ ನಡೆಸಿದರು.
ಕರವೇ ತಾಲೂಕಾ ಅಧ್ಯಕ್ಷ ಬಾಳು ಮುಳಜಿ ಮಾತನಾಡಿ ಇಂಡಿ ತಾಲೂಕಿನಲ್ಲಿ ಒಂದು ಲಕ್ಷ ೫ ಸಾವಿರ ಹೇಕ್ಟರ ಪ್ರದೇಶದಲ್ಲಿ ತೊಗರಿ ಬೆಳೆ ಬೆಳೆಯಲಾಗಿದೆ. ಹವಾಮಾನ ವೈಫಲ್ಯ, ಮಂಜು ಕವಿದ ವಾತಾವರಣ ಮತ್ತು ಕೃಷಿ ಇಲಾಖೆಯಿಂದ ಕಳಪೆ ಬೀಜ ಮಾರಾಟ ಇವೆಲ್ಲವೂ ಗಳಿಂದ ತೊಗರಿ ಇಳುವರಿ ಕಡಿಮೆ ಬಂದಿದೆ.
ಅದಲ್ಲದೆ ಇಂಡಿಯ ಶಾಸಕರು ಜಿಲ್ಲಾಧಿಕಾರಿ ಸಿಇಒ ಮತ್ತು ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕರೆಯಿಸಿ ಸರ್ವೇ ಮಾಡಿಸಿದ್ದಾರೆ. ವಿಧಾನ ಸಭೆಯಲ್ಲಿ ಹಲವಾರು ಬಾರಿ ಚರ್ಚೆ ಯಾಗಿದೆ. ಸರ್ವೇ ಮಾಡಿದ ಅಧಿಕಾರಿಗಳು ತೊಗರಿ ಬೆಳೆ ಹಾನಿಯಾಗಿರುವ ವರದಿ ನೀಡಿದ್ದಾರೆ. ಹೀಗಾಗಿ ರೈತರು ತೊಂದರೆಯಲ್ಲಿ ಇದ್ದು ಅವರಿಗೆ ವಿಮೆ ಮಾಡಿದ ರೈತರಿಗೂ ಮತ್ತು ವಿಮೆ ಮಾಡದೇ ಇರುವ ರೈತರಿಗೂ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಸಾಯಯುವ ಕೃಷಿ ರೈತ ಎಸ್.ಟಿ.ಪಾಟೀಲ ಮಾತನಾಡಿ ರೈತರು ಬೇಸಿಗೆ ಬೆಳೆ ಬೆಳೆದಿದ್ದು ಮತ್ತು ತಾಲೂಕಿನಲ್ಲಿ ನಿಂಬೆ ಮತ್ತು ಕಬ್ಬು ಬೆಳೆ ಇದ್ದು ರೈತರು ನೀರಿಲ್ಲದೆ ಬೆಳೆ ಒಣಗುತ್ತಿದೆ. ಕಾರಣ ಕೃಷ್ಣಾ ಕಾಲುವೆ ನೀರಿನ ಮೇಲೆ ಅವಲಂಬಿತರಾಗಿದ್ದು ಮಹಾರಾಷ್ಟçದ ಸರಕಾರಕ್ಕೆ ಇಲ್ಲಿಯ ಪರಿಸ್ಥಿತಿ ಮನವರಿಕೆ ಮಾಡಿ ನೀರು ಬಿಡಲು ಆಗ್ರಹಿಸಿದರು. ಅದಲ್ಲದೆ ಶಿರಶ್ಯಾಡ ಗ್ರಾಮದಿಂದ ಕೃಷ್ಣಾ ಕಾಲುವೆಗೆ ಕಾಲುವೆ ನಿರ್ಮಾಣ ಮಾಡುವ ವೇಳೆ ಎಡವಟ್ಟಿನಿಂದ ೪೦ ವರ್ಷವಾದರೂ ವಿತರಣಾ ಕಾಲುವೆಗೆ ನೀರು ಹರಿದಿಲ್ಲ. ನೀರು ಹರಿದಿದ್ದರೆ ಶಿರಶ್ಯಾಡ, ನಾದ, ಗೋಳಸಾರ ಸೇರಿದಂತೆ ನಾನಾ ಗ್ರಾಮಗಳು ಸೇರಿದಂತೆ ಅಂದಾಜು ೨೦೦೦ ಹೇಕ್ಟರ ಪ್ರದೇಶ ನೀರಾವರಿಗೆ ಒಳ ಪಡುತ್ತಿತ್ತು ಎಂದರು.
ಶಿರಶ್ಯಾಡ ಅಭಿನವ ಮುರಗೇಂದ್ರ ಶ್ರೀ ಗಳು ತಾಲೂಕಿನ ಸಮಸ್ತ ಪೂಜ್ಯರ ಪರವಾಗಿ ಬೆಂಬಲ ವ್ಯಕ್ತ ಪಡಿಸಿ, ಜಿಲ್ಲಾ ನಿವೃತ ನೌಕರರ ಸಂಘದ ಸಂಚಾಲಕ ಅಂಬಣ್ಣ ಸುಣಗಾರ, ತಾಲೂಕಾ ಅಧ್ಯಕ್ಷ ಎಸ್.ಆರ್.ಪೋಳ ಬೆಂಬಲ ಸೂಚಿಸಿ ಮಾತನಾಡಿದರು.
ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಮುಖಂಡ ದಯಾಸಾಗರ ಪಾಟೀಲ, ಜೆಡಿ ಎಸ್ ಮುಖಂಡ ಬಿ.ಡಿ.ಪಾಟೀಲ, ಜಿ.ಪಂ ಮಾಜಿ ಅಧ್ಯಕ್ಷ ಶಿವಯೋಗಪ್ಪ ನೇದಲಗಿ, ಅಯೂಬ ನಾಟಿಕಾರ, ಅನೀಲಗೌಡ ಬಿರಾದಾರ, ಸಿದ್ದು ವಾಲಿಕಾರ, ನಿವೃತ ಶಿಕ್ಷಕ ಕೆ.ವಿ.ಪಾಟೀಲ, ಪ್ರೊ ವಿಜಯ ರಾಠೋಡ ಮತ್ತಿತರರು ಮಾತನಾಡಿ ತೊಗರಿ ಬೆಳೆಗೆ ಬೆಂಬಲ ನೀಡಿ ರೈತರ ಸಂಕಷ್ಟಕ್ಕೆ ಸರಕಾರ ನೆರವಾಗಬೇಕು ಎಂದರು.
ಕರವೇ ಮುಖಂಡರಾದ ಮಹೇಶ ಹೂಗಾರ, ಧನರಾಜ ಸಾಲೋಟಗಿ, ಮಂಜು ದೇವರ, ಅರವಿಂದ ಪಾಟೀಲ, ಸಚೀನ ನಾವಿ, ಬಿ.ಎ.ಮೆಂಡೆದಾರ ಮತ್ತಿತರಿದ್ದರು.
ಇಂಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತೊಗರಿ ಬೆಳೆಗೆ ಪರಿಹಾರ ಆಗ್ರಹಿಸಿ ಅಹೋ ರಾತ್ರಿ ನಡೆದ ಧರಣ ಸಭೆಯಲ್ಲಿ ಶಿರಶ್ಯಾಡ ಪೂಜ್ಯ ಮುರಗೇಂದ್ರ ಶಿವಾಚಾರ್ಯರರು ಮಾತನಾಡಿದರು.



















