ಸಾಹಿತ್ಯ ಸಿರಿ ಪ್ರಶಸ್ತಿಗೆ ಜನಪದ ತಜ್ಞ ಸಿಂದಗಿಯ ಡಾ.ಎಂ.ಎಂ ಪಡಶೆಟ್ಟಿ ಹಾಗೂ ವಚನ ಸಿರಿ ಪ್ರಶಸ್ತಿಗೆ ಡಾ. ದಾನಮ್ಮ ಝಳಕಿ
ಇಂಡಿ : ಕಲಬುರ್ಗಿ ಫೌಂಡೆಷನ್ ಸಮಾಜೋಧಾರ್ಮಿಕ ಶೈಕ್ಷಣ ಕ ವೈಚಾರಿಕ ಚಟುವಟಿಕೆಗಳನ್ನು ಮಾಡುತ್ತಶರಣ ತತ್ವಗಳನ್ನು ಸಿದ್ದಾಂತಗಳನ್ನು ಜನ ಸಾಮಾನ್ಯರಿಗೆ ತಲುಪಿಸುತ್ತ ಪ್ರತಿಭಾವಂತರಿಗೆ ಬಡ ವಿದ್ಯಾರ್ಥಿಗಳಿಗೆ ಅರ್ಥಿಕ ಸಹಾಯ ಮಾಡುತ್ತ ಗ್ರಾಮೀಣ ವಿದ್ಯಾರ್ಥಿಗಳಿಗೆ ಪಠ್ಯಕ್ಕೆ ಪೂರಕವಾದ ಗ್ರಂಥಗಳನ್ನು ನೀಡುತ್ತ ಬಂದಿದೆ.ಜೊತೆಗೆ ಕಳೆದ ವರ್ಷದಿಂದ ಫೌಂಡೇಷನ್ ಮಹಿಳಾ ಸಾದಕಿಯರಿಗೆ ವಚನ ಸಿರಿ ಪುರುಷ ಸಾದಕರಿಗೆ ಸಾಹಿತ್ಯ ಸಿರಿ ಪುರಸ್ಕಾರ ನೀಡಲು ಪ್ರಾರಂಭಿಸಿದೆ ಎಂದು ಕಲಬುರ್ಗಿ ಫೌಂಡೇಷನ್ ಅಧ್ಯಕ್ಷ ಶಿವಲಿಂಗ ಕಲಬುರ್ಗಿ ಅವರು ಹೇಳಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಡಾ. ಎಂ.ಎಂ.ಕಲಬುರ್ಗಿ ಯವರ ಕುಟುಂಬದ ಸದಸ್ಯರಿಂದ ಸ್ಥಾಪನೆಗೊಂಡ ಕಲಬುರ್ಗಿ ಫೌಂಡೇಷನ್ ವತಿಯಿಂದ ಕೊಡಮಾಡುವ ರಾಜ್ಯ ಮಟ್ಟದ ಸಾಹಿತ್ಯ ಸಿರಿ ಪ್ರಶಸ್ತಿಗೆ ಜನಪದ ತಜ್ಞ ಸಿಂದಗಿಯ ಡಾ.ಎಂ.ಎಂ ಪಡಶೆಟ್ಟಿ ಅವರನ್ನು ಹಾಗೂ ವಚನ ಸಿರಿ ಪ್ರಶಸ್ತಿಗೆ ಕೆ.ಕೆ.ಕೊಪ್ಪದ ಕರ್ನಾಟಕ ಪಬ್ಲಿಕ ಶಾಲೆಯ ಉಪ ಪ್ರಾಚಾರ್ಯ ಡಾ. ದಾನಮ್ಮ ಝಳಕಿ ಅವರನ್ನು ಆಯ್ಕೆ ಮಾಡಿದೆ.
ತಲಾ ಹತ್ತು ಸಾವಿರ ರೂ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.ಜೂ.೨೮ ರಂದು ಬೆಳಗ್ಗೆ ೧೧ ಗಂಟೆಗೆ ಇಂಡಿಯ ಗುರುಭವನದಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದ್ದು ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರು ಹಾಗೂ ಭೀಮಾಂತರAಗ ಸಾಹಿತ್ಯಿಕ ಸಾಂಸ್ಕೃತಿಕ ಜಗುಲಿ ಸಹಯೋಗದಲ್ಲಿ ಜರುಗಲಿದೆ ಎಂದರು.
ಶಿವಪಣ್ಣ ಗವಸಾನಿ, ಬಿ.ಎಸ್.ಹಣಮಶೆಟ್ಟಿ ಹಾಗೂ ಭೀಮಾಂತರಂಗ ವೇದಿಕೆಯ ಚಿದಂಬರ ಬಂಡಗರ, ಗೀತಯೋಗಿ, ವಾಯ್,ಜಿ,ಬಿರಾದಾರ ಮತ್ತಿತರಿದ್ದರು.