ವೈದ್ಯರ ದಿನಾಚರಣೆ ಯು.ಬಿ.ಎಮ್.ಪಿ.ಎಸ್ ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಣೆ
ಇಂಡಿ: ಪಟ್ಟಣದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ (ಯು.ಬಿ.ಎಮ್.ಪಿ.ಎಸ್) ನಲ್ಲಿ ವೈದ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರದ ಗಣ್ಯ ವೈದ್ಯರು ಹಾಗೂ ಶಿಕ್ಷಕರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ವಿಫಲ ಕೊಳೇಕರ್ ಉಪಸ್ಥಿತರಿದ್ದು, ಮಕ್ಕಳಿಗೆ ಆರೋಗ್ಯ, ಸ್ವಚ್ಛತೆ ಹಾಗೂ ದೈನಂದಿನ ಜೀವನಶೈಲಿಗೆ ಸಂಬಂಧಿಸಿದಂತೆ ಅನೇಕ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು. ಅವರು ಮಕ್ಕಳಲ್ಲಿ ಆರೋಗ್ಯ ಅರಿವು ಹೆಚ್ಚಿಸಬೇಕು ಎಂಬ ಹಂಬಲ ವ್ಯಕ್ತಪಡಿಸಿದರು.
ಸ್ತ್ರೀ ರೋಗ್ ತಜ್ಞರಾದ ಡಾ. ಶೀರಿನ ಜಮಾದಾರ ಅವರು ವಿಶೇಷವಾಗಿ ಹೆಣ್ಣುಮಕ್ಕಳ ಆರೋಗ್ಯ ಸಮಸ್ಯೆಗಳ ಕುರಿತು ಸ್ಪಷ್ಟವಾದ ಮಾಹಿತಿಯನ್ನು ನೀಡುತ್ತ, ಹೈಸ್ಜಿನ್, ಪೋಷಣಾ ತತ್ವಗಳು ಮತ್ತು ಅಗತ್ಯ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿದರು.
ಸಮಾಜ ಸೇವಕ ಹಾಗೂ ಬಿ.ಎಲ್.ಈ ಸಂಸ್ಥೆಯ ಉಪಾಧ್ಯಕ್ಷರಾದ ಹಸನ ಮುಜಾವರ ಮಾತನಾಡಿ ವೈದ್ಯರನ್ನು ದೇವರ ನಂತರದ ಸ್ಥಾನದಲ್ಲಿ ಪರಿಗಣಿಸಲಾಗುತ್ತದೆ, ಅವರು ರಕ್ಷಕರು ಅಥವಾ ರಕ್ಷಕ ದೇವತೆಗಳು ಎಂದು ನಾವು ಹೇಳಬಹುದು. ಭಾರತದಲ್ಲಿ ಪ್ರತಿ ವರ್ಷ ಜುಲೈ 1 ರಂದು ಅವರ ಕೊಡುಗೆ ಮತ್ತು ಉದಾತ್ತ ಕೆಲಸವನ್ನು ಗೌರವಿಸಲು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ನಮ್ಮ ಉತ್ತಮ ಆರೋಗ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹಗಲಿರುಳು 24×7 ಕೆಲಸ ಮಾಡುವ ಎಲ್ಲಾ ವೈದ್ಯರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಈ ದಿನವನ್ನು ಸ್ಮರಿಸಲಾಗುತ್ತದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರು ಯಾಸಿನ್ ತುರ್ಕಿ ವಹಿಸಿದರು.
ಈ ಸಂದರ್ಭದಲ್ಲಿ ಡಾ. ಅಂಜುಮ್, ಹಾಗೂ ಶಾಲೆಯ ಶಿಕ್ಷಕಯರಾದ ಶಕೀರಾ ನಾಗೂರ್, ಬಿದರೇಕಾರ್ ಮೇಡಂ, ಗುಲಾಮ ಭಗವಾನ್, ಖತೀಬ್ ಸರ್, ಅಥಿತಿ ಶಿಕ್ಚಕರಾದ ಜಾಸ್ಮಿನ್ ಅರಬ, ರುಬಿನಾ ಮಕಾಂದಾರ್, ಮಿಸ್ಬಾ ನಾಗಠಾಣ್ ಹಾಗೂ ಮಿಸ್ಬಾ ಇಂಡಿ ಆಫತಾಬ ತುರ್ಕಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಕ್ಕಳು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ವೈದ್ಯರೊಂದಿಗೆ ಸಂವಾದ ನಡೆಸಿದರು.