ಈಶ್ವರಿಯ ವಿವಿಯಲ್ಲಿ ದೀಪಾವಳಿ
ಇಂಡಿ : ಮೌಂಟ ಅಬುದಲ್ಲಿಯ ಮದುಬನ ಭೂಮಿಯ ಮೇಲಿನ ಸ್ವರ್ಗದ ಜೊತೆಗೆ ತ್ಯಾಗ ತಪಸ್ಸಿನ ತಾಣವಾಗಿದೆ ಅಲ್ಲಿರುವ ತಪಸ್ಸಿನ ಶಕ್ತಿಗೆ ಎಂತಹ ಕೆಟ್ಟ ಸಂಸ್ಕಾರವುಳ್ಳವರು ಉತ್ತಮರಾಗಿ ಪರಿವರ್ತನೆ ಯಾಗುತ್ತಾರೆಂದು ಈಶ್ವರಿ ಪರಿವಾರದ ಬಿ.ಕೆ.ಯನುನಾ ಅಕ್ಕಾ ಹೇಳಿದರು.
ಪಟ್ಟಣದ ಈಶ್ವರೀಯ ವಿವಿಯಲ್ಲಿ ದೀಪಾವಳಿ ಆಚರಣೆ ಅಂಗವಾಗಿ ನಡೆದ ಆಧ್ಯಾತ್ಮ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಲ್ಲಿ ಯಾವದೇ ಜಾತಿ, ಧರ್ಮ, ಕುಲ ಗೋತ್ರ ಕೇಳುವದಿಲ್ಲ ಎಲ್ಲರೂ ಪರಮಾತ್ನನ ಸಾನಿದ್ಯದಲ್ಲಿ ಒಂದೇ ಆಗಿದ್ದಾರೆ ಎಂದರು.
ಬಿ.ಕೆ ಶ್ರೀದೇವಿ ಅಕ್ಕನವರು ಮಾತನಾಡಿ ಮೌಂಟ್ ಅಬುವುನಲ್ಲಿ ಮಧುಬನ ದಲ್ಲಿ ಒಂದು ಅದ್ಭುತ ಶಕ್ತಿ ಅಡಗಿದೆ. ೯೦ ವರ್ಷಗಳ ಪರ್ಯಂತ ಈಶ್ವರಿಯ ವಿ ವಿ ಆಧ್ಯಾತ್ಮಿಕ ಅನುಭವ ಹಂಚಿಕೊಳ್ಳುವ ಕಾರ್ಯ ಮಾಡುತ್ತಿದೆ. ಶಿವಬಾಬಾ ಇಲ್ಲಿ ಮಹಿಳೆರನ್ನು ಮುಂದಿಟ್ಟು ಈಶ್ವರಿಯ ಕಾರ್ಯ ಮಾಡುತ್ತಿದ್ದಾರೆ. ಮಹಿಳೆಯರ ತ್ಯಾಗ ತಪಸ್ಸು ಸಹನೆ ಇಂತಹ ಒಂದು ಆಘಾಧವಾದ ಆಧ್ಮಾತಿಕ ಅನುಭವದ ಸಂಸ್ಥೆ ಕಟ್ಟಲು ನೆರವಾಯಿತು ಎಂದರು.
ನಿವೃತ್ತ ಪ್ರಾಚಾರ್ಯ ಎ.ಎಸ್.ಗಾಣಿಗೇರ ಮಾತನಾಡಿ ದೀಪಾವಳಿ ಹಬ್ಬ ನಮ್ಮೆಲ್ಲರನ್ನು ಒಂದುಗೂಡಿಸಿದೆ. ಪ್ರತಿಯೊಬ್ಬರು ಮನಸ್ಸಿನ ಮೂಲೆ ಮೂಲೆ ಯನ್ನು ಸ್ವಚ್ಛಗೊಳಿಸಿಕೊಂಡು ದ್ವೇಷ ಅಸೂಯೆ ದುರ್ಬಲತೆ ಆಲಸ್ಯ ಎಂಬ ಹಳೆಯ ಖಾತೆ ಸಮಾಪ್ತಿ ಮಾಡಿಕೊಂಡು ಎಲ್ಲರ ಬಗ್ಗೆ ಶುಭಕಾಮನೆ ಹಂಚಬೇಕಾಗಿದೆ ವ್ಯರ್ಥ ಚಿಂತೆಗಳಿAದ ಹಳೆಯ ಬಟ್ಟೆ ತ್ಯಜಿಸಿ ಶ್ರೇಷ್ಠ ವಿಚಾರ ಎಂಬ ಹೊಸ ಬಟ್ಟೆ ಧರಿಸಿಕೊಳ್ಳುವದು ನಿಜವಾದ ದೀಪಾವಳಿ ಎಂದರು.
ನಿವೃತ್ತ ಶಿಕ್ಷಕ ಜಿ.ಬಿ.ಬಿರಾದಾರ, ಅರವಿಂದ ಕಠಾರೆ,ಶಿವಲಿಂಗಪ್ಪ ಪಟ್ಟದಕಲ್ಲ, ಸುಮಂಗಲಾ ಪಾತಂಗೆ, ಉಮಾ ಪಟ್ಟದಕಲ್ಲ, ಗಿರಿಜಾ ಪೂಜಾರಿ, ರಾಜಶ್ರೀ ಕೋಳೆಕರ, ಬಸಮ್ಮ ಪೋಲಿಸ ಪಾಟೀಲ, ಬಿ.ಕೆ ಪಲ್ಲವಿ ಮತ್ತಿತರಿದ್ದರು.