ಮುದ್ದೇಬಿಹಾಳ:ತಾಲ್ಲೂಕಿನಲ್ಲಿ ಹೊಸದಾಗಿ 9 ಗ್ರಾಮಗಳನ್ನಾಗಿ ಪರಿವರ್ತಿಸಲಾ ಗಿದ್ದು, ಜನರು ಅರ್ಥ ಮಾಡಿಕೊಳ್ಳಬೇಕು. ಒಟ್ಟು 32 ಜನರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಈ ಗ್ರಾಮಗಳ ನಿವಾಸಿಗಳಿಗೆ ತಮ್ಮ ಮನೆಯಿರುವ ಜಾಗದ ಹಕ್ಕುಪತ್ರ ದೊರೆಯದೆ ಅಭದ್ರತೆ ಕಾಡುತ್ತಿತ್ತು. ಈಗ ಅವರಿಗೆ ಹಕ್ಕು ಪತ್ರ ವಿತರಣೆಯಾಗಿರುವುದು ನೆಮ್ಮದಿ ಮೂಡಿಸಿದ್ದು, ಉಳಿದ ಗ್ರಾಮಗಳಲ್ಲಿಯೂ ಶೀಘ್ರ ಹಕ್ಕುಪತ್ರ ವಿತರಣೆ ಮಾಡುವುದಾಗಿ ಶಾಸಕ ಹಾಗೂ ಕೆಎಸ್ಡಿಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ತಾಲೂಕಿನ ಕೋಳೂರ ತಾಂಡಾ ನಿವಾಸಿಗಳು ನಿವೇಶನ ಹಕ್ಕು ಪತ್ರಗಳ ನ್ನು ಅವರು ಮಾತನಾಡಿ, ತಾ ಲ್ಲೂಕಿನ 17 ದಾಖಲೆ ಗ್ರಾಮಗಳನ್ನು ಕಂದಾ ಯ ಗ್ರಾಮವನ್ನಾಗಿ ಪರಿವರ್ತಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಅದರಲ್ಲಿ 9 ಗ್ರಾಮಗಳಿಗೆ ಕಂದಾಯ ಗ್ರಾಮದ ಮಾನ್ಯತೆ ದೊರೆತಿದೆ.
ಈಗಾಗಲೇ ಒಟ್ಟು 204 ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಕಳೆದ ಅವಧಿಯಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಂಡಾಗಳ ಅಭಿವೃದ್ಧಿಗಾಗಿ ಕಂದಾಯ ಗ್ರಾಮವನ್ನಾಗಿ ಮಾಡುವ ಮೂಲಕ ನಿವಾಸಿಗಳ ಸಂಕಷ್ಟಕ್ಕೆ ಸರಕಾರ ನಿಂತುಕೊಂಡಿದೆ ಎಂದರು.
ಕಂದಾಯ ಗ್ರಾಮಗಳೆಂದು ಘೋಷಣೆ ಯಾದ ಅರ್ಹ ಫಲಾನುಭವಿಗಳು ಕೇವಲ ಪಾವತಿಸಿಬೇಕಾದ ಹಣವನ್ನು ಬಿಟ್ಟು ಹೆಚ್ಚಿನ ಹಣವನ್ನು ಅಧಿಕಾರಿಗಳಿಗಾಗಲಿ ಅಥವಾ ಮಧ್ಯವರ್ತಿಗಳಿಗಾಗಲಿ ಕೊಟ್ಟು ಕೈ ಸುಟ್ಟುಕೊಳ್ಳಬಾರದು. ಅದಕ್ಕೆ ನಾನಾಗಲಿ ಅಥವಾ ನಮ್ಮ ಸರ್ಕಾರವಾಗಲಿ ಜವಾಬ್ದಾರರಲ್ಲ, ಕಾಂಗ್ರೆಸ್ ಸರ್ಕಾರದ ಹೆಸರಿಗೆ ಧಕ್ಕೆ ತರುವ ಉದ್ದೇಶದಿಂದ ಕೆಲವರು ಕಾಂಗ್ರೆಸ್ ಸರ್ಕಾರ ಹಣ ಪಡೆಯುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ಬಗ್ಗೆ ಜನರು ಜಾಗೃತರಾಗಬೇಕು, ಯಾವುದಕ್ಕೆ ಹಣ ಎಷ್ಟು ಖರ್ಚಾಗುತ್ತದೆ, ಯಾವುದಕ್ಕೆ ಇಲ್ಲ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಯಾವಾಗಲೂ ಕಾಂಗ್ರೆಸ್ ಸರ್ಕಾರ ಬಡವರ ದೀನ ದಲಿತ, ಹಿಂದುಳಿದ ವರ್ಗಗಳ, ಅಲ್ಪ ಸಂಖ್ಯಾತರ, ಮಹಿಳೆಯರ, ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಲೇ ಬಂದಿದೆ. ಮಾತ್ರವಲ್ಲದೇ ಚುನಾವಣೆ ಪೂರ್ವ ಘೋಷಣೆಯಂತೆ ಗ್ಯಾರಂಟಿಗಳನ್ನು ಅನುಷ್ಠಾನ ತರುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ಸರ್ಕಾರ ಜನಪರ ಆಡಳಿತ ನೀಡುತ್ತಿದೆ. ಆದರೆ, ಬಿಜೆಪಿಯವರು ಬರಿ ಸುಳ್ಳು ಹೇಳಿ ನಮ್ಮ ಯೋಜನೆಯನ್ನು ತಾವು ಮಾಡಿದ್ದೇವೆಂದು ಹೇಳಿ ಜನರ ದಾರಿ ತಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಬಲರಾಮ ಕಟ್ಟಿಮನಿ, ತಾಪಂ ಇಒ ನಿಂಗಪ್ಪ ಮಸಳಿ, ಗ್ಯಾರಂಟಿ ಯೋಜನೆಯ ತಾಲೂಕು ಸಮಿತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಪಿಡಿಒ ವಿಜಯಾ ಮುದುಗಲ್ಲ, ತಾಂಡಾ ಅಭಿವೃದ್ಧಿ ನಿಗಮದ ಸದಸ್ಯ ಲಕ್ಷ್ಮಣ ಲಮಾಣಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ಉಪಸ್ಥಿತರಿದ್ದರು