ರೈತರಿಗೆ ಜೂನ ೧ ರಿಂದ ೫೩ ಸಾವಿರ ಸಸಿ ವಿತರಣೆ
ಇಂಡಿ ಪ್ರಾದೇಶಿಕ ಅರಣ್ಯದಿಂದ ೯ ಸಾವಿರ ಮತ್ತು ಸಾಮಾಜಿಕ ಅರಣ್ಯ ವಿಭಾಗದಿಂದ ೪೪ ಸಾವಿರ ಸಸಿ ರೈತರಿಗೆ ವಿತರಿಸುವ ಗುರಿ ಹೊಂದಲಾಗಿದೆ ಎಂದು ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಎಸ್.ಜಿ.ಸಂಗಾಲಕ ತಿಳಿಸಿದರು.
ಇಲಾಖೆಯ ಆವರಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಹತ್ತು ಸಾವಿರ ಸಸಿಗಳನ್ನು ಇಂಡಿ ಪಟ್ಟಣ, ಹೋರ್ತಿ ವಲಯ, ದೆಗಿನಾಳ, ತಡವಲಗಾ, ಬೆನಕನಹಳ್ಳಿ, ಗೋರನಾಳ, ತಾಂಬಾ, ಕಾತ್ರಾಳಗಿಂದ ಬಾಲಗಾಂವ ವರೆಗೆ ಸಸಿ ನೇಡುವ ಗುರಿ ಹೊಂದಲಾಗಿದೆ.
ಸಿದ್ದೇಶ್ವರ ಸ್ವಾಮೀಜಿ ಸಸ್ಯಧಾಮ ಸಾವಳಸಂಗದಲ್ಲಿ ಜೂನ ೫ ರಂದು ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರು ಮತ್ತು ಯಶವಂತರಾಯಗೌಡ ಪಾಟೀಲ ಫೌಂಡೆಷನ್ ಪಡನೂರ ಇವರ ಸಹಯೋಗದಲ್ಲಿ ೩೩೦೦ ಸಸಿ ನೆಡುವ ಕಾರ್ಯಕ್ರಮವಿದೆ. ಮತ್ತು ಶಾಲಾ ಮಕ್ಕಳಿಗೆ ಬೀಜದ ಉಂಡೆ ಬಿತ್ತನೆ ಕಾರ್ಯಕ್ರಮವಿದೆ.
ಹತ್ತು ಸಾವಿರ ಬಾರೆ, ಏಳು ಸಾವಿರ ನಿಂಬೆ ಸೀತಾಫಲ, ಹೊಂಗೆ, ಪೇರು, ಕರಿಬೇವು, ಶಿವನೆ ಮುತ್ತುಗ ನೆಲ್ಲಿ ಗಿಡಗಳನ್ನು ವಿತರಿಸಲಾಗುವದು. ಕೆಲವು ಪ್ರತಿ ಸಸಿಗೆ ೩ ರೂ ಮತ್ತು ಕೆಲವು ಪ್ರತಿ ಸಸಿಗೆ ೬ ರೂ ಬೆಲೆ ನಿಗದಿಪಡಿಸಲಾಗಿದೆ.
ಪ್ರತಿ ರೈತರಿಗೆ ೧೨೫ ರೂ ಗಿಡ ಬೆಳೆಸುವ ಖರ್ಚು ಮೂರು ವರ್ಷಕ್ಕಾಗಿ ನೀಡಲಾಗುವದು. ರೈತರು ಸದುಪಯೋಗ ಪಡೆದುಕೊಳ್ಳಲು ಸಂಗಾಲಕ ತಿಳಿಸಿದರು.
ತಾಲೂಕಿನ ಬಬಲಾದ ಮತ್ತು ಜೇವೂರ ನರ್ಸರಿಯಲ್ಲಿ ಜೂನ್ ೧ ರಂದು ರೈತರಿಗೆ ವಿತರಣೆಗೆ ಸಿದ್ದ ಇವೆ.
ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಮಂಜುನಾಥ ಧುಳೆ, ಎಸ್.ಎ.ರಾಗಣ್ಣವರ, ಪಿ.ಎ ಅಲ್ದಿ, ಹಣಮಂತ ಲೋಣ , ಲೋಕೇಶ ಪಾಟೀಲ, ಪ್ರವೀಣ ಹಚ್ಯಾಳ,ಗೌಡಪ್ಪ ಸೊನಕನಹಳ್ಳಿ ಮತ್ತಿತರಿದ್ದರು.
ಇಂಡಿಯ ಬಬಲಾದ ಮತ್ತು ಜೇವೂರ ನರ್ಸರಿಯಲ್ಲಿರಯವ ಸಸಿಗಳು