ಲಿಂಗಸಗೂರ: ಸಮರ್ಪಕ ವಿದ್ಯುತ್ ಸರಬರಾಜು ಮಾಡುತ್ತಿಲ್ಲ ಎಂದು ರೈತರು ನಾಗಲಾಪುರ ಕೆಇಬಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರೈತರ ಪಂಪಸೆಟ್ ಗಳಿಗೆ ರಾತ್ರಿ ವೇಳೆ 3 ಪೀಸ್ ವಿದ್ಯುತ್ ನೀಡುತ್ತಿರುವ ಹಿನ್ನಲೆಯಲ್ಲಿ ರೈತರ ಜಮೀನುಗಳಿಗೆ ನೀರು ಹರಿಸಲು ತೊಂದರೆಯಾಗಿದೆ.
ಇನ್ನು ನಾಗಲಾಪುರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 8 ಗ್ರಾಮಗಳು 6 ತಾಂಡಗಳು ಹಾಗೂ ಹೂನೂರು ಗ್ರಾಮ ಪಂಚಾಯಿತಿಯ 9 ಗ್ರಾಮಗಳು ಮತ್ತು ದೇಸಾಯಿ ಭೋಗಪುರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗ್ರಾಮಗಳು, ತಾಂಡಗಳು ಈ ನಾಗಲಾಪೂರು ಕೆಇಬಿ ವ್ಯಾಪ್ತಿಗೆ ಒಳಪಡುತ್ತವೆ .
ಸರಿಯಾಗಿ ಮಳೆಯಾಗದ ಕಾರಣ, ರಾತ್ರಿ ವೇಳೆ ರೈತರು ನೀರು ಹರಿಸಲು ಆಗದ ಕಾರಣ ಬೆಳೆದ ಬೆಳೆಗಳು ಕೂಡ ಒಣಗಿ ಹೋಗುತ್ತಿವೆ.
ಬೆಳಗಿನ ಸಮಯದಲ್ಲಿ ರೈತರ ಪಂಪಸೆಟ್ ಗಳಿಗೆ 3 ಪೀಸ್ ವಿದ್ಯುತ್ ಸರಬರಾಜು ಮಾಡುವಂತೆ ಅನೇಕ ಬಾರಿ ಜೇಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಕೆಇಬಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.