ಇಂಡಿಯಲ್ಲಿ ಅರ್ಥಪೂರ್ಣವಾಗಿ, ಅದ್ದೂರಿಯಾಗಿ ಸ್ವತಂತ್ರೋತ್ಸ ಆಚರಣೆಗೆ ನಿರ್ಧಾರ..: ಎಸಿ ಅನುರಾಧ ವಸ್ತ್ರದ
ಇಂಡಿ : ತಾಲ್ಲೂಕಿನಲ್ಲಿ ಸ್ವತಂತ್ರೋತ್ಸ ಅರ್ಥಪೂರ್ಣವಾಗಿ ಅದ್ದೂರಿಯಾಗಿ ಆಚರಿಸಲು ಕ್ರಮ ವಹಿಸಬೇಕೆಂದು ಕಂದಾಯ ಉಪವಿಭಾಗ ಅಧಿಕಾರಿ
ಅನುರಾಧ ವಸ್ತ್ರದ ಹೇಳಿದರು.
ಮಂಗಳವಾರ ತಾಲ್ಲೂಕು ಆಡಳಿತ ಸೌಧದ ಸಭಾಭವನದಲ್ಲಿ ನಡೆದ ಸ್ವತಂತ್ರೋತ್ಸ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಸಿ ಮಾತಾನಾಡಿ ತಿಳಿಸಿದರು.
ಸ್ವತಂತ್ರೋತ್ಸ ಕಾರ್ಯಕ್ರಮವನ್ನು ಯಾವುದೇ ಲೋಪವಿಲ್ಲದೆ, ವಿಶೇಷ ಕಾಳಜಿಯಿಂದ ವಿವಿಧ ಸಮತಿಗಳು ಕಾರ್ಯನಿರ್ವಹಿಸಬೇಕು ಎಂದರು.
ಪ್ರತಿವರ್ಷದಂತೆ ಈ ವರ್ಷವೂ ಸರಕಾರಿ ಕಚೇರಿ ಮತ್ತು ಪಟ್ಟಣದ ವಿವಿಧ ವೃತ್ ಗಳಲ್ಲಿ ಸ್ವಚ್ಚತೆಯೊಂದಿಗೆ ದ್ವೀಪದ ಅಲಂಕಾರಕ್ಕೆ ಕ್ರಮಕೈಗೊಳ್ಳಬೇಕು. ಕಚೇರಿ ಮತ್ತು ಶಾಲಾ ಕಾಲೇಜು ಸಿಬ್ಬಂದಿ ತಮ್ಮ ಧ್ವಜಾರೋಹಣವನ್ನು ೭:೩೦ ರೊಳಗೆ ಮುಗಿಸಿಕೊಂಡು ೮:೩೦ ಘಂಟೆಗೆ ತಾಲ್ಲೂಕು ಕ್ರೀಡಾಂಗಣಕ್ಕೆ ಹಾಜರಿರಬೇಕು. ತದನಂತರ ಸಾರ್ವಜನಿಕ ಧ್ವಜಾರೋಹಣ ಜರುಗಲಿದ್ದು ಎಲ್ಲ ಅಧಿಕಾರಿ ಸಿಬ್ಬಂದಿ ಕಡ್ಡಾಯವಾಗಿ ಹಾಜರಿರಬೇಕು. ನಂತರ ಪೋಲಿಸ್ ಪಡೆ, ಹೋಮ್ ಗಾರ್ಡ,ಭಾರತ ಸೇವಾದಳಗಳಿಂದ ಪಥ ಸಂಚಲನ ಜರುಗಲಿವೆ. ಕಾರ್ಯಕ್ರಮದ ಸ್ಥಳದ ಸ್ವಚ್ಚತೆ, ಆಸನ ವ್ಯವಸ್ಥೆ, ಉಪಹಾರದ ವ್ಯವಸ್ಥೆ ಕುರಿತು ಕ್ರಮ ಕೈಗೊಳ್ಳಬೇಕು ಎಂದರು. ಇನ್ನೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪರಿಣಿತರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಸಭೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ತಹಶಿಲ್ದಾರ ಬಿಎಸ್ ಕಡಕಭಾವಿ, ಮುಖಂಡ ಜಟ್ಟಪ್ಪ ರವಳಿ, ಪ್ರಶಾಂತ ಕಾಳೆ, ಡಿಎಸ್ಎಸ್ ಮುಖಂಡ ಬಾಬು ಗುಡಮಿ, ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಹೊಸಮನಿ ಸೇರಿದಂತೆ ತಾಲ್ಲೂಕು ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.