ಇಂಡಿ : ನಾಡದೇವಿ ದಸರಾ ಅಂಗವಾಗಿ ಬೆಳ್ಳಿ ಮಹೋತ್ಸವ ಆಚರಣೆಯು ತಾಲ್ಲೂಕಿನ ಶಿರಕನಹಳ್ಳಿ ಗ್ರಾಮದಲ್ಲಿ ನಾಡದೇವಿ ಉತ್ಸವ ಸಮಿತಿಯ ಯುವಕರು ಒಗ್ಗೊಟಿನಿಂದ ವಿಶಿಷ್ಟ ಕೃಷಿ ಗೋಷ್ಠಿ ಕಾರ್ಯಕ್ರಮ ಆಯೋಜಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಎಂದು ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಕೃಷಿ ಗೋಷ್ಠಿಯ ಮುಖ್ಯ ಅತಿಥಿಯಾಗಿ ಮತ್ತು ಗ್ರಾಮದ ಯುವಕ ಈರಣ್ಣ ಡೂಮನಾಳ ಆವಿಷ್ಕಾರ ಮಾಡಿದ ಕಿಟನಾಶಕ ಯಂತ್ರದ ಲೋಕಾರ್ಪಣೆ ಜೆಡಿಎಸ್ ಮುಖಂಡ ಬಿ ಡಿ ಪಾಟೀಲ ಮಾಡಿದರು. ತದನಂತರ ಮಾತಾನಾಡಿದ ಅವರು, ಗ್ರಾಮದ ಯುವಕರು ನಾಡದೇವಿ ಉತ್ಸವದ ಬೆಳ್ಳಿ ಮಹೋತ್ಸವ ಅಂಗವಾಗಿ ವಿಶಿಷ್ಟ ಕಾರ್ಯಕ್ರಮ ಹಾಕಿಕ್ಕೂಳುವ ಮುಖಾಂತರ ತಾಲೂಕಿನ ಇತರರಿಗೆ ಪ್ರೇರಣೆಯಾಗಿದ್ದಾರೆ. ಜೊತೆಗೆ ಮುತ್ತೈದೆಯರಿಗೆ ಉಡಿತುಂಬುವ, ಮಕ್ಕಳಿಗಾಗಿ ಮನರಂಜನೆ , ರೈತರಿಗಾಗಿ ದಾಳಿಂಬೆ, ದ್ರಾಕ್ಷಿ, ಬೆಳೆಗಳ ಮಾಹಿತಿ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ನಮ್ಮಲ್ಲರಿಗೂ ಸಹಕಾರವಾಗುತ್ತೆ ಎಂದು ಹೇಳಿದರು. ಇದೇ ರೀತಿ ಭವಿಷ್ಯದ ದಿನಗಳಲ್ಲಿ ಈ ಸಂಘಟನೆ ನಾಡಿಗೆ ಪ್ರಸಿದ್ದಿವಾಗಲಿ ಎಂದು ಶುಭಹಾರೈಸಿದರು.
ಸಾನಿಧ್ಯ ಪೂಜಪ್ಪ ಮಹಾರಾಜರು ವಹಿಸಿದ್ದರು, ಅಧ್ಯಕ್ಷತೆ ಮಲ್ಲೇಶಪ್ಪಗೌಡ ಪಾಟೀಲ, ಪದ್ಮಣ ವಗ್ಗಿ, ಉಪನ್ಯಾಸಕರಾಗಿ ತೋಟಗಾರಿಕೆ ಅಧಿಕಾರಿ ಸಿದ್ದಣ್ಣ ಕೂಠೆ, ಸಿದ್ದು ಡಂಗಾ, ಶಿವಶಂಕ ಪ್ಯಾಟಿ, ರಾಜಕುಮಾರ ಕನ್ನೂರ, ಅನೀಲ ಗೋರನಾಳ, ಬಸವರಾಜ ಭೂಮ್ಮನಹಳ್ಳಿ, ಶಿವಯೋಗಿ ಡೂಮನಾಳ, ಬಸವರಾಜ ಜಂಬಗಿ, ಸಂಗಪ್ಪ ಕೂಳ್ಳೂರ, ಮಲ್ಲಿಕಾರ್ಜುನ ಕನ್ನೂರ ಸ್ವಾಗತಿಸಿದರು, ಶಿವಕಾಂತ ಲೋಣಿ ನಿರೂಪಿಸಿದರು, ಪ್ರಭುಲಿಂಗ ನಾವಿ ವಂದಿಸಿದರು.