ಸಮುದಾಯ ಭವನ ಸದ್ಬಳಕೆ ಮಾಡಿಕೊಳ್ಳಿ – ಶಾಸಕ ಮನಗೂಳಿ
ಇಂಡಿ : ಮದುವೆ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಮುದಾಯಭವನಗಳು ನೆರವಾಗಲಿವೆ ಜನರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಿಂದಗಿಯ ಶಾಸಕ ಅಶೋಕ ಮನಗೂಳಿ ಹೇಳಿದರು. ಅವರು ತಾಲೂಕಿನ ನಾರಾಯಣಹಟ್ಟಿ ಗ್ರಾಮದಲ್ಲಿ ಸೇವಾಲಾಲ ಸಮುದಾಯ ಭವನಕ್ಕೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು.
ಮಹಾ ಸಂತ, ಭಾರತದ ಧಾರ್ಮಿಕ ರಾಯಭಾರಿ, ಮತ್ತು ಲಂಬಾಣ ಸಮುದಾಯದ ಆರಾಧ್ಯದೈವ ಸೇವಾಲಾಲರ ಸಮುದಾಯ ಭವನ ನಿರ್ಮಾಣಕ್ಕೆ ತಾನು ೨೦ ಲಕ್ಷ ಅನುದಾನ ನೀಡಿದ್ದೇನೆ. ಶೀಘ್ರದಲ್ಲಿಯೇ ಸೇವಾಲಾಲ ಭವನ ಕಟ್ಟಡ ನಿರ್ಮಾಣ ಆಗಲಿದೆ ಎಂದರು. ಅದಲ್ಲದೆ ಗ್ರಾಮದ ಸಿಸಿ ರಸ್ತೆಗೂ ಕೂಡ ೨೫ ಲಕ್ಷ ಅನುದಾನ ನೀಡಿದ್ದೇನೆ ಎಂದರು.
ಜಗದAಬ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ರವಿಕುಮಾರ ಚೌಹಾಣ, ಲಾಲ ಬಹಾದ್ದೂರ ಚೌಹಾಣ, ವಿಜಯಕುಮಾರ ದೊಡಮನಿ, ರಜಾಕ ಚಿಕ್ಕಗಸಿ, ರಾಚಪ್ಪ ಗಳೇದ, ಅಪ್ಪಣ್ಣ ಕಲ್ಲೂರ, ಎಫ್.ಎಂ.ಉಜನಿ, ವಿಶ್ವನಾಥ ಅವಟಿ, ಕಿರಣ ಕಿಣಗಿ, ಮಹಮ್ಮದ ವಾಲಿಕಾರ ಮುನ್ನಾ ನಾಗಠಾಣ, ಮಾಸಿನ ವಾಲಿಕಾರ ಮತ್ತಿತರಿದ್ದರು.
ಇಂಡಿ ತಾಲೂಕಿನ ನಾರಾಯಣಹಟ್ಟಿ ಗ್ರಾಮದಲ್ಲಿ ಸೇವಾಲಾಲ ಸಮುದಾಯ ಭವನಕ್ಕೆ ಭೂಮಿ ಪೂಜೆ ನೇರವೇರಿಸಿ ಶಾಸಕ ಅಶೋಕ ಮನಗುಳಿ ಮಾತನಾಡಿದರು.