ಅನಿಧಿಕೃತ ಪಂಪಸೆಟ್ ತೆರವುಗೊಳಿಸಿ, ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಸಿದ್ದತೆ ಮಾಡಿಕೊಳ್ಳಿ : ತಹಶಿಲ್ದಾರ ಕಡಕಬಾವಿ
ಇಂಡಿ : ಬೇಸಿಗೆಯಲ್ಲಿ ಜನ – ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಇನ್ನೂ ಕೆರೆ ಸುತ್ತಮುತ್ತಲೂ ಅನಧಿಕೃತವಾಗಿ ಬಳಸುವ ಪಂಪಸೆಂಟಗಳು ತೆರವುಗೊಳಿಸಿ, ಯಾವುದೇ ಕಾರಣಕ್ಕೂ ಎಲ್ಲಿಯೂ ಅನಗತ್ಯವಾಗಿ ನೀರು ಪೋಲಾಗದಂತೆ ಎಚ್ಚರಿಕೆ ವಹಸಿಬೇಕು. ಕೇವಲ ಪೋಟೊ ಹಾಕಿ ಕೆಲಸ ಮಾಡಿದ್ದೆವೆ ಅನ್ನೊದಕ್ಕಿಂತ, ಪರಿಣಾಮಕಾರಿ ಕೆಲಸ ಮಾಡಬೇಕು ಎಂದು ತಹಶಿಲ್ದಾರ ಬಿ ಎಸ್ ಕಡಕಭಾವಿ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕುಡಿಯುವ ನೀರಿನ ಕುರಿತು ಪಿಡಿಒ ಮತ್ತು ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಈ ಹಿಂದೆ ಬರಗಾಲ ಪರಿಸ್ಥಿತಿಯನ್ನು ಬಹಳ ಗಂಭೀರವಾಗಿ ಅನುಭವಿಸಿದ್ದೆವೆ. ಆದರೆ ಈ ಬಾರಿ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದರು.
ಕಂದಾಯ ಇಲಾಖೆ, ಪೋಲಿಸ ಇಲಾಖೆ, ಹೆಸ್ಕಾಂ ಇಲಾಖೆ ಮತ್ತು ಪಿಡಿಒ ಗಳು ರೈತರು ಕೃಷಿಗೆ ಬಳಸದಂತೆ ನೋಡಿಕೊಂಡರೆ ಕುಡಿಯುವ ನೀರಿನ ತೊಂದರೆ ಯಾಗುವದಿಲ್ಲ.
ಸಂಬಂಧಿಸಿದ ಗ್ರಾ.ಪಂ ಅಭೀವೃದ್ದಿ ಅಧಿಕಾರಿಗಳು, ಕುಡಿಯುವ ನೀರು ಮತ್ತು ನೈರ್ಮಲ್ಯ, ಸಣ್ಣ ನೀರಾವರಿ ಮತ್ತು ಗ್ರಾಮೀಣ ಕುಡಿಯುವ ನೀರಿನ ಅಧಿಕಾರಿಗಳು ಹೆಚ್ಚಿನ ಜಾಗರೂಕತೆ ವಹಿಸಿ ಏಪ್ರೀಲ್ ಮೇ ತಿಂಗಳಲ್ಲಿ ನೀರಿನ ತೊಂದರೆ ಯಾಗದಂತೆ ನೋಡಿಕೊಳ್ಳಲು ಸೂಚಿಸಿದರು.
ಇಒ ನಂದೀಪ ರಾಠೋಡ ಮಾತನಾಡಿ ಈ ಬಾರಿ ತಾಲೂಕು ಬರಗಾಲ ಎಂದು ಘೋಷಿಸಿಲ್ಲ, ಹೀಗಾಗಿ ಸಧ್ಯ ಟ್ಯಾಂಕರ ಮೂಲಕ ನೀರು ಪೂರೈಸಲು ಹಣ ಬರುವದಿಲ್ಲ. ಕಾರಣ ಇದ್ದ ಎಲ್ಲ ಸಂಪನ್ಮೂಲ ಬಳಸಿಕೊಂಡು ನೀರಿನ ತೊಂದರೆ ಯಾಗದಂತೆ ನೋಡಿಕೊಳ್ಳಲು ಸೂಚಿಸಿದರು. ಅವಶ್ಯವೆನಿಸಿದ್ದಲ್ಲಿ ಪಿಡಿಒಗಳು ಗ್ರಾ.ಪಂ ಸಂಪನ್ಮೂಲ ಬಳಕೆ ಮಾಡಿಕೊಳ್ಳಲು ತಿಳಿಸಿದರು.
ಹೊರ್ತಿ ಭಾಗದ ಮೋಟಾರು ಕೆಟ್ಟಿರುವದರಿಂದ ಅನೇಕ ಗ್ರಮಗಳಿಗೆ ನೀರಿನ ತೊಂದರೆ ಯಾಗುತ್ತದೆ. ಕಾರಣ ಸಾದ್ಯವಾದಷ್ಟು ಬೇಗ ಹೊಸ ಮೋಟಾರು ಅಳವಡಿಸಲು ಮತ್ತು ಇದ್ದ ಮೋಟಾರು ರಿಪೇರಿ ಮಾಡಲು ಪಿಡಿಒ ಗಳು ತಮ್ಮ ಅಭಿಪ್ರಾಯ ಸೂಚಿಸಿದರು.
ಹೆಸ್ಕಾಂ ಎಇಇ ಎಸ್.ಆರ್.ಮೆಂಡೆಗಾರ, ಹಿರಿಯ ಪಶು ವೈದ್ಯಾಧಿಕಾರಿ ಡಾ. ರಾಜಕುಮಾರ ಅಡಕಿ, ಎಇಇ ಗ್ರಾಮೀಣ ನೀರು ಸರಬರಾಜು ಎಸ್.ಬಿ.ಪಾಟೀಲ ಮಾತನಾಡಿದರು.
ಪಿಡಿಒ ಗಳಾದ ಸಿ.ಜಿ.ಪಾರೆ, ಜಬ್ಬಾರ ಹಳ್ಳಿ, ಬಿ.ಎಂ ಬಬಲಾದ, ಮಹೇಶ ನಾಯಕ, ಎಸ್.ಎಸ್.ಶಿವಣಗಿ, ಎಸ್.ಆರ್. ಮುಜಗೊಂಡ, ವೀಣಾ ಕೊಳುರಗಿ, ಎಚ್.ಎಚ್.ಗುನ್ನಾಪುರ, ಜಿ.ಎಂ.ಬಿರಾದಾರ, ಯಲ್ಲಪ್ಪ ಪೂಜಾರಿ, ಸಿದ್ದು ಪೂಜಾರಿ ಮತ್ತಿತರಿದ್ದರು.
ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಯಾಗದಂತೆ ಕ್ರಮವಹಿಸಬೇಕು. ತಾಲೂಕಿನಲ್ಲಿರುವ ಸಂಗೋಗಿ, ಹಂಜಗಿ, ಅರ್ಜನಾಳ ಮತ್ತು ಲೋಣಿ ಕೆರೆಗಳನ್ನು ತುಂಬಿದ್ದು ಬರುವ ದಿನಗಳಲ್ಲಿ ಆ ನೀರನ್ನು ಕೆರೆಗಳ ಮೂಲಕ ಗ್ರಾಮಗಳ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗೆ ಪೂರೈಸಲಾಗುವದೆಂದು ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಕ್ಷಕ ಅಭಿಯಂತರ ಮನೋಜಕುಮಾರ ಹೇಳಿದರು.
ಇಂಡಿ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕುಡಿಯುವ ನೀರಿನ ಕುರಿತು ಪಿಡಿಒ ಮತ್ತು ಇಲಾಖಾ ಅಧಿಕಾರಿಗಳ ಸಭೆಯಲ್ಲಿ ತಹಶಿಲ್ದಾರ ಬಿ ಎಸ್ ಕಡಕಭಾವಿ ಮಾತನಾಡಿದರು.