ಅಫಜಲಪುರ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹನುಮಾಪುರ ಗ್ರಾಮದ ಸಿದ್ದಶ್ರೀ ಸಂಸ್ಥೆಯ ವತಿಯಿಂದ ಪ್ರತಿವರ್ಷ ಭಾರೀತಯ ಪರಂಪರೆ ಹಾಗೂ ಸಂಸ್ಕೃತಿ ಸಮ್ಮೇಳನ ಆಯೋಜಿಸಿ ಪಾಲ್ಗೊಂಡವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಬಾರಿ ಸಂಸ್ಥೆಯಿಂದ ನೀಡುವ ಸಿದ್ದರತ್ನ ಮುದಗೊಂಡೇಶ್ವರ ಸದ್ಭಾವನಾ ರಾಜ್ಯ ಪ್ರಶಸ್ತಿಗೆ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದ ಡೊಳ್ಳಿನ ಗಾಯನ ತಂಡದ ಚನ್ನಮಲ್ಲಪ್ಪ ಸಿದ್ರಾಮ ಡೆಬ್ಬಿ ಅವರು ಆಯ್ಕೆಯಾಗಿ ಪ್ರಶಸ್ತಿ ಸ್ವಿಕರಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು ನಾವು ಡೊಳ್ಳಿನ ಗಾಯನ ತಂಡ ಕಟ್ಟಿಕೊಂಡು ರಾಜ್ಯದಾದ್ಯಂತ ಸಂಚರಿಸಿ ಡೊಳ್ಳಿನ ಗಾಯನವನ್ನು ಮಾಡುತ್ತೇವೆ. ಅನೇಕ ಕಡೆಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದೇವೆ. ಈ ರೀತಿ ಪ್ರಶಸ್ತಿಗಳು ಸಿಕ್ಕಾಗ ನಮ್ಮ ಮೇಲೆ ಇನ್ನಷ್ಟು ಜವಬ್ದಾರಿ ಹೆಚ್ಚಾಗುತ್ತದೆ. ನಾವು ಇನ್ನಷ್ಟು ಶ್ರಮ ವಹಿಸಿ ಇನ್ನೂ ಹೆಚ್ಚಿನ ಸಾಹಿತ್ಯದ ಮೂಲಕ ಡೊಳ್ಳಿನ ಪದಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದ ಅವರು ಪ್ರಶಸ್ತಿ ಸಿಕ್ಕಿದ್ದು ಕೇವಲ ನನಗೊಬ್ಬನಿಗಲ್ಲ ನನ್ನ ತಂಡದ ಎಲ್ಲರಿಗೂ ಈ ಪ್ರಶಸ್ತಿ ಸಲ್ಲುತ್ತದೆ ಎಂದರು.
ಈ ಸಂದರ್ಭದಲ್ಲಿ ಹನುಗುಡಿ ಹಿಂಚಗೇರಿ, ಯಮನಪ್ಪ ಮಾಸ್ತರ ಕೊರಳ್ಳಿ, ಯಲ್ಲಪ್ಪ ಬಂದರವಾಡ, ಮಾಳಪ್ಪ ಪೂಜಾರಿ, ಖಾಜಣ್ಣ ಕರ್ಜಗಿ, ನಾಗರಾಜ ಪಡಗಾನೂರ, ಪರಶುರಾಮ ಕೊಕಟನೂರ ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.