ಮುದ್ದೇಬಿಹಾಳ:ವಿದ್ಯಾರ್ಥಿ ಜೀವನದಲ್ಲಿ ಯಾರು ಹೆಚ್ಚು ಶ್ರಮವಹಿಸಿ ಅಭ್ಯಾಸ ಮಾಡುತ್ತಾರೆ ಅವರಿಗೆ ಯಶಸ್ಸು ನಿಶ್ಚಿತವಾಗಿ ಸಿಗುತ್ತದೆ ಎಂದು ಆಕ್ಸ್ಫರ್ಡ್ ಮಠ್ಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಜಿ ಮಠ ಹೇಳಿದರು.
ತಾಲೂಕಿನ ನಾಗರಬೆಟ್ಟ ಗ್ರಾಮದ ಬಸ್ ನಿಲ್ದಾಣ ಹತ್ತಿರ ಬರುವ ಆಕ್ಸ್ಫರ್ಡ್ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 2024_25 ನೇ ಸಾಲಿನ ಎಸ್ ಎಸ್ ಎಲ್ ಸಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೂಡುಗೆ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದರು ನಮ್ಮ ಕಾಲೇಜಿನಲ್ಲಿಯ ಲಾಂಗ್ ಟರ್ಮ್ ತರಬೇತಿಯನ್ನು 45 ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಸೇರಿದಂತೆ ಊಟ ವಸತಿ ಸಹಿತ ಉಚಿತವಾಗಿ ನೀಡಲಾಗುತ್ತಿದೆ ಬಡ ಮಧ್ಯಮ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನಮ್ಮ ಸಂಸ್ಥೆ ಈ ಹಿಂದಿನಿಂದಲೂ ಮಾಡುತ್ತಾ ಬಂದಿದೆ ಇಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ ,ವಿದ್ಯಾರ್ಥಿಗಳು ಸಿಇಟಿ ನೀಟ್ ಮಾಡಿ ನಿಮ್ಮ ಪಾಲಕರ ಕನಸಿನಂತೆ ಡಾಕ್ಟರ್ ಇಂಜಿನಿಯರ್ ಆಗಿ ಉತ್ತಮ ಸಂಸ್ಕಾರ ನಡತೆಯಿಂದ ಉತ್ತಮ ಪ್ರಜೆಗಳಾಗಬೇಕು ,ಪಾಲಕರು ಮಕ್ಕಳ ಓದಿನ ಬಗ್ಗೆ ಲಕ್ಷ್ಯ ವಹಿಸಬೇಕು ಮತ್ತು ಅವರಿಗೆ ಶಿಕ್ಷಣದೂಂದಿಗೆ ಉತ್ತಮ ಸಂಸ್ಕಾರವನ್ನು ಸಹ ನೀಡಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿದ ಕಲ್ಯಾಣ ಕರ್ನಾಟಕ ಭಾಗದ ವಾಗ್ಮಿ ಬರಹಗಾರ ಅಮರಯ್ಯ ಜಾಲಿಬೆಂಚಿ ವಿದ್ಯಾರ್ಥಿಗಳಿಗೆ ಪ್ರೇರಣೆ ಸಿನೆಮಾ ನಟರ ಜೀವನವಾಗಬಾರದು ನಮಗೆ ಪ್ರೇರಣೆ ಈ ದೇಶದ ಗಡಿಯನ್ನು ಕಾಯುವ ಸೈನಿಕರಾಗಬೇಕು ಮತ್ತು ನಮಗೆ ಮಾದರಿಯಾಗಿ ನಮ್ಮ ತಂದೆ ತಾಯಿ ಅಕ್ಷರ ಕಲಿಸುವ ಗುರುಗಳು ಆಗಬೇಕು.
ಶಿಕ್ಷಣ ಕಲಿಯುವ ವೇಳೆ ಶಿಕ್ಷಣದತ್ತ ಲಕ್ಷ್ಯ ವಹಿಸಬೇಕು ನಮಗಾಗಿ ನಮ್ಮ ತಂದೆ ತಾಯಿಗಳು ಹಗಲಿರುಳು ಶ್ರಮಿಸಿ ನಮಗೆ ದುಡಿಯುತ್ತಿದ್ದಾರೆಂಬ ಪ್ರಜ್ಞೆ ಇರಬೇಕು , ದುಷ್ಟ ಜನರ ಸಹವಾಸ ಮಾಡದೆ ಪ್ರಾಮಾಣಿಕ ಸ್ನೇಹಿತರ ಸ್ನೇಹ ಮಾಡಬೇಕು, ಈ ವಯಸ್ಸು ಮಂಗನಂತೆ ಮನಸ್ಸು ನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಾಗ ಯಶಸ್ಸು ಸಾಧನೆ ಮಾಡಲು ಸಾಧ್ಯವಿದೆ ಎಂದರು.
ಪ್ರತಿಭಾ ಪುರಸ್ಕಾರ ;2023_24 ನೇ ಸಾಲಿನ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಾದ ಸಂತೋಷ ಹಂಗರಗಿ, ಅಶ್ವನಿ ರುದ್ರಗಂಟಿ, ವಿರೇಶ ಛಟ್ಟಿ, ಸಂಗೀತ ಪತ್ತಾರ, ಭಾಗ್ಯಶ್ರೀ ಬಂಟನೂರ, ಸಂಗೀತ ಬಪ್ಪರಗಿ, ಪಿಯುಸಿ ವಿಭಾಗದಲ್ಲಿ ಸಿದ್ದಾರ್ಥ ಹಂಪನಗೌಡರ, ಸೌಭಾಗ್ಯ ಭಂಡಾರಿಮಠ, ಸುಮಿತ್ ಭಗೇತ್, ಧರೆಪ್ಪ ಬಿರಾದಾರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು , ಹತ್ತನೇ ತರಗತಿಯ ವಿದ್ಯಾರ್ಥಿಗಳು ಅನಿಸಿಕೆಗಳನ್ನು ಹಂಚಿಕೊಂಡರು
ವೇದಿಕೆಯಲ್ಲಿ ಪ್ರಾಚಾರ್ಯ ಇರ್ಪಾನ್ ಬಾಗವಾನ, ಶಿವಯ್ಯ ಮಠ, ಹೀರೂ ನಾಯಕ, ಮಲ್ಲಿಕಾರ್ಜುನ ಗುತ್ತಿದಾರ, ಎಲ್ ಹೆಚ್ ನಧಾಪ , ಗುರುಸ್ವಾಮಿ ಹಿರೇಮಠ, ಪ್ರಶಾಂತ ಕಾಳೆ,ಇನ್ನಿತರರು ಇದ್ದರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲಕರು ಉಪಸ್ಥಿತರಿದ್ದರು, ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಮಹಾಲಿಂಗಯ್ಯ ಶಿವಗಣಾಚಾರಿ ಪ್ರಾರ್ಥಿಸಿದರು , ಹಣಮಂತ ಮಾದರ ಸ್ವಾಗತಿಸಿದರು ಮಲ್ಲಿಕಾರ್ಜುನ ಕಂಬಳಿ ನಿರೂಪಿಸಿದರು ರವಿ ಪೂಜಾರಿ ವಂದಿಸಿದರು.
ಈ ಬಾರಿಯ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ೮ ರಿಂದ ,೧೦ ವಿದ್ಯಾರ್ಥಿಗಳು ರ್ಯಾಂಕ್ ಬರುವ ಭರವಸೆ ಇದೆ ಮತ್ತು ಈ ಬಾರಿ ನಮ್ಮ ಕಾಲೇಜಿನ 10 ರಿಂದ 15 ವಿದ್ಯಾರ್ಥಿಗಳು ಮೆಡಿಕಲ್ ಸಿಟ್ ಗಿಟ್ಟಿಸಿಕೊಳ್ಳಲಿದ್ದಾರೆ ಎಂಬ ನಂಬಿಕೆ ಇದೆ.
ಬಿ ಜಿ ಮಠ ಅಧ್ಯಕ್ಷರು ಆಕ್ಸ್ಫರ್ಡ್ ಮಠ್ಸ್ ಶಿಕ್ಷಣ ಸಂಸ್ಥೆ