ಮೇ 29 ರಿಂದ ಜೂನ 12 ಇಂಡಿಯಲ್ಲಿ ಕೃಷಿ ಅಭಿಯಾನ
ಇಂಡಿ : ಪೂರ್ವ ಮುಂಗಾರಿನಲ್ಲಿ ರೈತ ಬಾಂದವರಿಗೆ ಕೃಷಿ ಚಟುವಟಿಕೆಗಳ ಕುರಿತು ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಸದುಪಯೋಗ ಪಡೆಯಲು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಉಮರ ಫಾರುಕ ಮೋಮಿನ್ ಹೇಳಿದರು. ಕೃಷಿ ವಿಜ್ಞಾನ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರಿಗೆ ಪೂರ್ವ ಮುಂಗಾರು ಹಂಗಾಮಿನಲ್ಲಿ ನಡೆಸಬೇಕಾದ ಕೃಷಿ ಚಟುವಟಿಕೆಗಳಿಗೆ ಬೇಕಾಗಿರುವ ಅತ್ಯಾವಶ್ಯಕ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ಒದಗಿಸುವ ಉದ್ದೇಶದಿಂದ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೇ ೨೯ ರಿಂದ ಜೂನ ೧೨ ರ ವರೆಗೆ ಕೃಷಿ, ತೋಟಗಾರಿಕೆ ಪಶು ಸಂಗೋಪನೆ ರೇಷ್ಮೆ ಮೀನುಗಾರಿಕೆ ಅರಣ್ಯ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ ಇಲಾಖೆಗಳ ಸಹಯೋಗದೊಂದಿಗೆ ಚಾಲನೆಗೊಳಿಸಲಾಗುತ್ತಿದೆ. ಎರಡು ತಂಡಗಳಾಗಿ ಸತತ ೧೫ ದಿನಗಳ ಕಾಲ ಒಟ್ಟು ೯೦ ಗ್ರಾಮಗಳು ಸೇರಿ ಸುಮಾರು ೯೭೫೦ ರೈತ ಬಾಂಧವರಿಗೆ ಪೂರ್ವ ಮುಂಗಾರಿನಲ್ಲಿ ಹಮ್ಮಿಕೊಳ್ಳಬೇಕಾದ ಕೃಷಿ ಚಟುವಟಿಕೆಗಳಿಗೆ ಅತ್ಯಾವಶ್ಯಕವಾದ ಆಧುನಿಕ ಬೇಸಾಯ ಉತ್ತಮ ಕೃಷಿ ತಂತ್ರಜ್ಞಾನ ಹಾಗೂ ವಿವಿಧ ಕೃಷಿ ಪೂರಕ ಇಲಾಖೆಗಳಲ್ಲಿ ರೈತ ಬಾಂಧವರಿಗೆ ಸರಕಾರದಿಂದ ಲಭ್ಯವಿರುವ ಯೋಜನೆಗಳ ಕುರಿತು ಮಾಹಿತಿಯನ್ನು ಪ್ರಚಾರ ಮಾಡುತ್ತಿದ್ದಾರೆ. ಸಂವಾದ ಮತ್ತು ಚರ್ಚೆಗೆ ಅವಕಾಶವಿದೆ. ತಂಡ ಗ್ರಾಮಕ್ಕೆ ಭೇಟಿ ನೀಡಿದಾಗ ಸಹಕರಿಸಿ ಸೂಕ್ತ ಮಾಹಿತಿ ಪಡೆಯಲು ಡಾ. ಉಮರ ತಿಳಿಸಿದ್ದಾರೆ.
ಇಂಡಿ : ಡಾ.ಉಮರ