ದೇಶ ರಕ್ಷಕರ ಪಡೆಯ ಯುವ ಘಟಕದ ಅಧ್ಯಕ್ಷರಾಗಿ ಆದಿತ್ಯ ಬಡಿಗೇರ ಆಯ್ಕೆ
ವಿಜಯಪುರ : ದೇಶ ರಕ್ಷಕರ ಪಡೆಯ ಕೋರ್ ಕಮಿಟಿ ಸಭೆಯಲ್ಲಿ ಆದಿತ್ಯ ಬಡಿಗೇರ ಅವರನ್ನು ಏಕಮತದಿಂದ ಯುವ ಘಟಕದ ಅಧ್ಯಕ್ಷರಾಗಿ ನೇಮಕಮಾಡಿ ಅಧ್ಯಕ್ಷರಾದ ಆಕಾಶ ಇಂಡಿ ಆದೇಶಹೊರಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದ ಅಭಿವೃದ್ಧಿ ಹಾಗೂ ವಿಕಾಸದಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿದೆ. ಯುವಕರು ತಮ್ಮ ಚಿಕ್ಕ ವಯಸ್ಸಿನಿಂದಲೇ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು. ನನ್ನ ದೇಶ- ನನ್ನ ನೆಲ ಎನ್ನುವ ಭಾವನೆ ಯುವಕರಲ್ಲಿ ಬಂದಾಗ ನಮ್ಮ ದೇಶದ ಅಭಿವೃದ್ಧಿಗೆ ಇನ್ನೂ ಪೂರಕವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ತುಂಬಾ ಆಘಾತಕಾರಿ, ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುತ್ತ ತಮ್ಮ ಮಾತೃಭೂಮಿಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ತಮ್ಮ ನಿತ್ಯ ಜೀವನದ ಚಟುವಟಿಕೆಗಳೊಂದಿಗೆ ವಾರಕ್ಕೊಂದು ದಿನವಾದರೂ ಸಮಾಜಕ್ಕಾಗಿ ಮೀಸಲಿಟ್ಟು ಸಮಾಜದಲ್ಲಿ ತರಬೇಕಾದ ಬದಲಾವಣೆಗಳ ಬಗ್ಗೆ ಚಿಂತಿಸಿ ಅವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ನಾವು ಮಾಡಬಹುದಾದ ಕೆಲಸಗಳನ್ನು ಮಾಡುತ್ತ ನಮ್ಮೊಂದಿಗಿರುವವರನ್ನು ಸಾಮಾಜಿಕ ಕಾರ್ಯಗಳನ್ನು ಮಾಡಲು ಪ್ರೇರೇಪಿಸಬೇಕು ಎಂದು ಹೇಳಿದರು.
ದೇಶ ರಕ್ಷಕರ ಪಡೆಯ ಯುವ ಘಟಕದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡು ಮಾತನಾಡಿದ ಆದಿತ್ಯ ಬಡಿಗೇರ, ನಮ್ಮ ಸಂಘಟನೆಯ ಧ್ಯೇಯ ವಾಕ್ಯವಾದ “ಸ್ವಂತಕ್ಕೆ ಸ್ವಲ್ಪ – ಸಮಾಜಕ್ಕೆ ಸರ್ವಸ್ವ” ಉದ್ದೇಶದೊಂದಿಗೆ ನಾನು ಸಾಮಾಜಿಕ ಕೆಲಸಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತ ಸಮಾಜಕ್ಕೆ ನನ್ನಿಂದಾಗುವ ಸೇವೆ ಸಲ್ಲಿಸುತ್ತೇನೆ ಎಂದರು.
ದೇಶ ರಕ್ಷಕರ ಪಡೆಯ ಸಂಸ್ಥಾಪಕರಾದ ರೋಹನ ಆಪ್ಟೆ ಮಾತನಾಡಿ, ನಮ್ಮ ಸಂಘಟನೆಯ ಉದ್ದೇಶವೇ ಯುವಜನತೆಯಲ್ಲಿ ದೇಶಪ್ರೇಮವನ್ನು ಜಾಗೃತಗೊಳಿಸುವುದು. ನಾವು ನಮ್ಮ ಸಂಘಟನೆಯ ಮೂಲಕ ಸಮಾಜದಲ್ಲಿ ನೂರಾರು ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ಮಾಡುತ್ತ ಬಂದಿದ್ದೇವೆ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿಯುಳ್ಳ ಯುವಕರಿಗೆ ದೇಶ ರಕ್ಷಕರ ಪಡೆಯು ಉತ್ತಮ ವೇದಿಕೆಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ನಮ್ಮ ಸಂಘಟನೆಯನ್ನು ಸೇರಿ ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೋಳ್ಳಬೇಕೇಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ನಮ್ಮ ಸಂಘಟನೆಯ ಅಧ್ಯಕ್ಷರಾದ ಅಗಸ್ತö್ಯ ಫೌಂಡೇಶನ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಕಾಶ ಇಂಡಿ ಅವರಿಗೆ ಉತ್ತಮ ಮಾರ್ಗದರ್ಶಕ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರಾವಣಿ ಆಪ್ಟೆ, ಭಾಗ್ಯಶ್ರೀ ತಾಂಬೇಕರ, ಕವಿತಾ ಕೋಳೂರಗಿ, ಕಸ್ತೂರಿ ಸಂಗೊಳ್ಳಿ, ಜಗದೀಶ ರೂಗಿಮಠ, ವಿವೇಕ ತಾವರಗೇರಿ, ವಿಕ್ರಮ ತಾಂಬೇಕರ, ಸದಾಶಿವ ಅಶೋಕ ಸವದಿ, ಕಿರಣ ಕೋಳೂರಗಿ, ರಾಘವೇಂದ್ರ ಮೀರೇಕರ, ವಿನೋದ ಪತ್ತಾರ, ಸಿದ್ದು ಅಂಬಿಗೇರ, ಉಪಸ್ಥಿದ್ದರು