ಮುದ್ದೇಬಿಹಾಳ : ನಿಜವಾದ ಕ್ರೀಡಾಪಟುಗಳನ್ನು ಜಿಲ್ಲಾ ವಿಭಾಗ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭಾಗವಹಿಸುವಂತೆ ಮಾಡುವ ಕರ್ತವ್ಯ ದೈಹಿಕ ಶಿಕ್ಷಣ ಶಿಕ್ಷಕರು, ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ ಎನ್ನುವಂತೆ ಒಳ್ಳೆಯ ಮತ್ತು ನಿಜವಾದ ಕ್ರೀಡಾಪಟುವಿಗೆ ನ್ಯಾಯ ಸಿಗುವಂತೆ ಮಾಡಬೇಕು ಎಂದು ಸರ್ಕಾರಿ ಆದರ್ಶ ವಿದ್ಯಾಲಯ ಬಿದರಕುಂದಿಯಲ್ಲಿ ನಡೆದ ಪ್ರಥಮ ಕ್ರೀಡಾಕೂಟದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಬಿ ಎಸ್.ಸಾವಳಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿದರು. ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ ತಾಲೂಕ ದೈಹಿಕ ಶಿಕ್ಷಣ ಪರೀಕ್ಷಕರಾದ ಬಿ.ವೈ.ಕವಡಿ ವಲಯ ಮತ್ತು ಕ್ಲಸ್ಟರ್ ಅಂತದಲ್ಲಿ ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುವಿನ ಅರ್ಹತೆ ಫಾರ್ಮ್ ಎಸ್ ಎ ಟಿ ಎಸ್ ನಂಬರ್ ,ತರಗತಿ, ದಾಖಲಾತಿ ಸಂಖ್ಯೆ ಮುಖ್ಯ ಶಿಕ್ಷಕರ ಸಹಿಯೊಂದಿಗೆ ಫೋಟೋ ಲಗತಿಸಿಕೊಂಡು ಕ್ರೀಡಾಕೂಟಕ್ಕೆ ಕರೆದುಕೊಂಡು ಬರುವುದರಿಂದ ಕ್ರೀಡೆಗೆ ಒಂದು ಬೆಲೆ ಸಿಗುವುದು ಹಾಗೂ ಕ್ರೀಡೆಯಲ್ಲಿ ಯಾವುದೇ ತಂಟೆ ತಕರಾರುಗಳು ಕಡಿಮೆಯಾಗುತ್ತವೆ.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಸಿಯನ್ನು ನೆಟ್ಟು, ನೀರನ್ನು ಹಾಕಿ, ಈಗಿರುವ ತಾಪಮಾನ ತುಂಬಾ ಹೆಚ್ಚಿಗೆ ಇರುವುದರಿಂದ ಸಾಕಷ್ಟು ಗಿಡಗಳನ್ನು ನೀಡುವುದರಿಂದ ಒಳ್ಳೆಯ ಶುದ್ಧ ಗಾಳಿ ಮತ್ತು ಮಳೆಯನ್ನು ಪಡೆಯುತ್ತೇವೆ. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಬಿಸಿಲು ತಾಪ ಹೆಚ್ಚಾಗಿದೆ ಇದರಿಂದ ಆರೋಗ್ಯದ ಸಮಸ್ಯೆ ಹೆಚ್ಚಾಗುವುದು ಮಳೆಯ ಕೊರತೆಯಿಂದ ಅನಾವೃಷ್ಟಿಯಿಂದ ಬಳಳಬೇಕಾಗುವುದು, ಸಾಕಷ್ಟು ಗಿಡವನ್ನು ನೆಟ್ಟು ಪರಿಸರವನ್ನು ಸಂರಕ್ಷಿಸೋಣ ಎಂದರು .
ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕಿಯವರಾದ ಶೋಭಾ ಸೋಂಪುರ್, ಯುವಜನ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಸುರೇಶ್ ಆಲೂರು, ಕರ್ನಾಟಕ ರಾಜ್ಯ ನೌಕರರ ಸಂಘ ಜಿಲ್ಲಾ ಖಜಾಂಚಿ ಬಿ.ಎಸ್. ಹೊಳಿ, ಮುದ್ದೇಬಿಹಾಳ ಘಟಕದ ಸರಕಾರಿ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರು ಸಂಘದ ಅಧ್ಯಕ್ಷರಾದ ಎ.ಸಿ.ಕೆರೂರ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ.ಬಿ.ಸಜ್ಜನ ವೇದಿಕೆ ಮೇಲಿದ್ದರು ಎನ್. ಎಸ್. ಬಿರಾದರ ನಿರೂಪಿಸಿದರು, ಕಾರ್ಯಗಾರದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಶಾಂತಪ್ಪ ಹವಾಲ್ದಾರ , ಇಂಡಿ ಪಣದ ಕಟ್ಟಿ ಎನ್ .ಡಿ. ಪನದಕಟ್ಟಿ , ಬಿ.ಎಸ್.ಕೊಂಡಗೋಳಿ ಎಂ.ಎಸ್.ಕೊಣ್ಣೂರ, ಪಿ.ಎಸ್. ಚಿಂತಾಮಣಿ, ಆರ್. ಬಿ.ಮಠಪತಿ, ಶ್ರೀಮತಿ ವಿಜಯಲಕ್ಷ್ಮಿ ಮಾಲಿಪಾಟೀಲ, ಶ್ರೀಮತಿ. ಕೆ.ಬಿ.ಹೊಸಮನಿ , ಎಸ್. ಕೆ.ಅಸ್ಕಿ, ಬಿ .ಜಿ.ಬಳವಾಟ , ಎಸ್.ಬಿ. ಸಜ್ಜನ್ ಸಿ.ಪಿ. ಓಲೆಕಾರ, ಬಿ.ಕೆ. ಭಾಗವಾನ್, ಸಿ ಐ ಮಠ, ವೆಂಕಟೇಶ್ , ಕಾರ್ಯಗಾರದಲ್ಲಿ ಭಾಗವಹಿಸಿದ್ದರು ಬಾಲಾಜಿ ಸುಧಾಕರ್ ಸ್ವಾಗತಿಸಿದರು, ಎಸ್.ಆರ್ .ಪಾಟೀಲ್ ವಂದನಾರ್ಪಣೆಯನ್ನು ನಿರ್ವಹಿಸಿದರು.