ಗ್ರಾಮ ಪಂಚಾಯತ್ ಅನೀರಿಕ್ಷೀತ ಬೇಟಿ, ಗ್ಯಾರೆಂಟಿ ಯೋಜನೆ ಹಣ ಪಡೆದರೆ ಶಿಸ್ತು ಕ್ರಮ : ಡಿಸಿ ಟಿ ಭೂಬಾಲನ್..
ಮಾದರಿ ಗ್ರಾಮ ಪಂಚಾಯತ ಬಬಲಾದ ಗ್ರಾಮಕ್ಕೆ ಮಂಗಳವಾರ ಮಾನ್ಶ ಜಿಲ್ಲಾಧಿಕಾರಿಗಳು ಬೇಟಿ.
ಇಂಡಿ : ಗೃಹಲಕ್ಷ್ಮೀ ಹಾಗೂ ಸರಕಾರದ ಗ್ಯಾರೆಂಟಿ ಯೋಜನೆಗಳಿಗೆ ಸಾರ್ವಜನಿಕರಿಂದ ಹಣ ತೆಗೆದುಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಟಿ ಭೂಬಾಲನ್ ಖಡಕಾಗಿ ತಿಳಿಸಿದರು.
ತಾಲ್ಲೂಕಿನ ಬಬಲಾದ ಗ್ರಾಮದ ಮಾದರಿ ಗ್ರಾಮ ಪಂಚಾಯತ್, ಸರಕಾರಿ ಪ್ರಾಥಮಿಕ ಶಾಲೆ, ಕ್ರೀಂಡಾಂಗಣ ಹಾಗೂ ಗ್ರಾಮ ಒನ್ ಕೇಂದ್ರಕ್ಕೆ ಅನಿರೀಕ್ಷಿತ ಬೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಶಕ್ತಪಡಿಸಿದರು.
ಇನ್ನೂ ಗೃಹಲಕ್ಷ್ಮಿ ಯೋಜನೆಯ ಹಾಗೂ ಸರಕಾರದ ಗ್ಯಾರೆಂಟಿ ಯೋಜನೆಗಳಿಗೆ ಯಾವುದೇ ಶುಲ್ಕ ತೆಗೆದುಕೊಳ್ಳಬಾರದು ಖಡಕ್ ಆಗಿ ಸೂಚಿಸಿದರುˌ. ಗ್ರಾಮ ಪಂಚಾಯತ್ ಸಭಾಭವನ ವಿಕ್ಷಿಸಿ ಅತ್ಶಂತ ಶ್ರೀಮಂತ ಗ್ರಾಮ ಪಂಚಾಯತ ಇದೆ ಎಂದು ನಗೆ ಚಟಾಕಿ ಹಾರಿಸಿದರುˌ.ಇನ್ನೂ ಕೂಡಲೇ ಅಲೆಮಾರಿ ಜನರ ವಸತಿ ನಿವೇಶನ ಮಂಜೂರಿಕರಿಸಲು ಅಧಿಕಾರಿಗಳಿಗೆ ಸೂಚಿಸಿದರು. ವಿಜಯಪುರ ಜಿಲ್ಲೆಯಲ್ಲಿಯ ಒಟ್ಟು 290 ಗ್ರಾಮ ಒನ್ ಕೇಂದ್ರಗಳ ಪೈಕಿ ಬಬಲಾದ ಗ್ರಾಮ ಒನ್ ಕೇಂದ್ರವು ಅತಿ ಹೆಚ್ಚು ನಾಗರಿಕ ಸೇವೆಗಳನ್ನು ನೀಡಿ ಸರ್ಕಾರದಿಂದ ಪ್ರಶಸ್ತಿ ಪಡೆದುಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ ಸುನೀಲಕುಮಾರ ಬಿರಾದಾರˌ ಉಪಾಧ್ಶಕ್ಷ ನೀಲಾವತಿ ದಶವಂತ, ಗ್ರಾಪಂ ಲೆಕ್ಕಾಧಿಕಾರಿ ಮಹಾಂತೇಶ ಗುರುಬೆಟ್ಟಿ, ಗ್ರಾಮ ಒನ್ ಕೇಂದ್ರದ ಮುಖ್ಯ ಕಾರ್ಯ ನಿರ್ವಾಹಕ ಮಹೇಶ ಸುತಾರ, ಹಣಮಂತ ಬಿರಾದಾರ ಹಾಗೂ ಕಾಂಗ್ರೇಸ್ ಯುವಧುರಿಣ ಬಾಪುರಾಯಗೌಡ ಬಿರಾದಾರ್, ಮಲ್ಲಿಕಾರ್ಜುನ ದಶವಂತ, ದೀಪಾ ಬಿರಾದಾರ, ಕೀರ್ತಿ ಬಿರಾದಾರ, ಶ್ರೀನಾಥ್ ವಾಲೀಕಾರ ಹಾಗೂ ಹಣಮಂತ ಕಟ್ಟಿಮನಿ, ಆಶಾ ಕಾರ್ಯಕರ್ತೆ ಗೌರಾಬಾಯಿ ಬಿರಾದಾರ ಉಪಸ್ಥಿತ ಇದ್ದರು.