ಶಿವರಾತ್ರಿ ರಾಜೇಂದ್ರ ಸ್ವಾಮೀಜಿ, ಶಿಕ್ಷಣ ಕ್ರಾಂತಿಯ ಹರಿಕಾರ : ಎಚ್ ಎಸ್ ಗೊಟ್ಯಾಳ
ಇಂಡಿ : ಬಡವರ್ಗದ ಮಕ್ಕಳನ್ನು ಗುರುತಿಸಿ ಶಿಕ್ಷಣ, ಆರೋಗ್ಯ ಹಾಗೂ ವಸತಿನಿಲಯಗಳನ್ನು ಕಲ್ಪಿಸಿ ಅವರ ಬದುಕಿನಲ್ಲಿ ಮಹತ್ವದ ಬದಲಾವಣೆ ತಂದಿರುವ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಎಲ್ಲರ ಮನ ಮನೆಯಲ್ಲಿ ನಿರಂತರವಾಗಿ ಬೆಳಗುವ ಮಹಾಜ್ಯೊತಿ ಎಂದು ಉಪನ್ಯಾಸಕ ಎಚ್ ಎಸ್ ಗೋಟ್ಯಾಳ ಬಣ್ಣಿಸಿದರು.
ತಾಲ್ಲೂಕಿನ ಅಂಜುಟಗಿ ಗ್ರಾಮದ ಪ್ರೇಮ ನಿಕೇತನ ಪ್ರೌಢಶಾಲೆಯಲ್ಲಿ ತಾಲೂಕ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳೀ ವೇದಿಕೆ ಸಹಯೋಗ ಯುವ ಘಟಕ ಇಂಡಿ ವತಿಯಿಂದ ಪರಿಷತ್ತಿನ ಸಂಸ್ಥಾಪನಾ ದಿನ ಹಾಗೂ ಡಾ.ಲಿಂ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 109ನೇ ಜಯಂತೋತ್ಸವ ನಿಮಿತ್ಯ ವಚನ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತಾವಿಕವಾಗಿ ಶಸಾಪ ಅಧ್ಯಕ್ಷ ಬಿ ಎಸ್ ಪಾಟೀಲ ಮಾತನಾಡಿ, ಸಾಹಿತ್ಯದ ಧ್ಯೇಯ, ಉದ್ದೇಶಗಳನ್ನು ಕುರಿತು ಪರಿಷತ್ತು ಪ್ರತಿ ತಿಂಗಳು ದತ್ತಿ ಉಪನ್ಯಾಸ ಮಾಡುವುದು ಹಾಗೂ ಅವರ ಸ್ಮರಣೆ ಮಾಡುವುದು ಪರಿಷತ್ತಿನ ಮುಖ್ಯ ಗುರಿಯಾಗಿದೆ.
ಇದೇ ಸಂದರ್ಭದಲ್ಲಿ ಕದಳಿ ವೇದಿಕೆಯ ಅಧ್ಯಕ್ಷೆ ಗಂಗಾ ಗಲಗಲಿ, ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷ ಹಾಗೂ ಉಪನ್ಯಾಸಕ ಸದಾನಂದ ಈರನಕೇರಿ ಮಾತನಾಡಿದ ಅವರು, ಮಕ್ಕಳ ಸಾಹಿತ್ಯವು ಮಕ್ಕಳಲ್ಲಿರುವ ಕಲೆ ಸಾಹಿತ್ಯವನ್ನು ಗುರುತಿಸಿ ಹೊರ ತರುವ ಕೆಲಸವನ್ನು ಮಾಡುತ್ತದೆ. ಆದ್ದರಿಂದ ಮಕ್ಕಳು ಚುಟುಕು ಬರೆಯುವುದು ಕಾವ್ಯ ಬರೆಯುವುದು ರೂಡಿಸಿಕೊಂಡು ಒಳ್ಳೆಯ ಲೇಖಕರು ಆಗಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ಜೋಗುರ್ ವಹಿಸಿದ್ದರು. ಇನ್ನೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಕದಳಿ ವೇದಿಕೆಯ ಪದಾಧಿಕಾರಿಗಳು, ಶಾಲೆಯ ವಿಧ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸ್ವಾಗತ ಶಿಕ್ಷಕ ಮಠಪತಿ, ಸನ್ಮಾನ ಸತೀಶ್ ಈಶ್ವರ್ ಗೊಂಡ ಹಾಗೂ ವಂದನಾರ್ಪಣೆಯ ಭವಾನಿ ನೆರಿವೆರಿಸಿದರು.