ಎಳ್ಳು ಬೆಲ್ಲ ತಿಂದು, ಸಿಹಿಯಾಗಿ ಮಾತಾಡಿ. ಮಕರ ಸಂಕ್ರಮಣ ಹಬ್ಬದ ಹಾರ್ದೀಕ ಶುಭಾಶಯಗಳು
Voice Of Janata :Edior : ಕರ್ನಾಟಕದಲ್ಲಿಎಳ್ಳು, ಸಕ್ಕರೆ ಅಚ್ಚು, ಬೆಲ್ಲ, ಕಬ್ಬು, ಬಾಳೆಹಣ್ಣನ್ನು ಬಂಧು ಮಿತ್ರರಿಗೆ ಹಂಚುವ ಸಂಪ್ರದಾಯ ಈ ಹಬ್ಬದ ಒಂದು ವಿಶೇಷ.
ದನ ಕರುಗಳಿಗೆ ಮೈತೊಳೆದು ಭೂತ ಪೀಡೆಗಳಿಂದ ಅವುಗಳನ್ನು ರಕ್ಷಿಸುವ ಸಲುವಾಗಿ ಬೀದಿಗಳಲ್ಲಿ ಹೊತ್ತಿಸಿದ ಬೆಂಕಿಯನ್ನು ದಾಟಿಸುವುದರ ಉಂಟು. ಸಂಕ್ರಮಣ ಕರ್ನಾಟಕದ ಆಹಾರ ವೈವಿಧ್ಯ ಗಳನ್ನು ಅನಾವರಣಗೊಳಿಸುತ್ತದೆ. ಆ ವರ್ಷದಲ್ಲಿ ಬೆಳೆದ ಬೆಳೆಗಳನ್ನು ಬಳಸಿ ವಿಭಿನ್ನ ಅಡುಗೆಯನ್ನು ತಯಾರಿಸುತ್ತಾರೆ.
ಒಟ್ಟಾರೆ ಸಂಕ್ರಾಂತಿ ಬದಲಾವಣೆ ಯನ್ನು ಅಳವಡಿಸಿ ಕೊಳ್ಳಲು ಹೇಳಿ ಮಾಡಿಸಿದ ಹಬ್ಬ. ಏಕೆಂದರೆ ಇದು ಕಾಲದ ಚಲನೆಯನ್ನು ತನ್ಮೂಲಕ ಬದಲಾವಣೆಯನ್ನೇ ಆಶಯವಾಗಿರಿಸಿ ಕೊಂಡಿದೆ. ಇದರ ವಿಶೇಷವೆಂದರೆ ಸಿಹಿಯಾದ ಮಾತು.ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಎಂಬ ಸಿಹಿ ಮಾತಿನ ಹಬ್ಬ.
ಈ ಸಂಕ್ರಮಣ ಎಲ್ಲರಲ್ಲಿಯೂ ಸಿಹಿ ಮಾತಿಗೆ, ಮಧುರಭಾವನೆಗೆ ಮೂಲವಾಗಲಿ. ಎಲ್ಲೆಡೆಯು ಆರೋಗ್ಯ, ಸಮೃದ್ಧಿ, ಸಂತಸವಿರಲಿ. ಎಲ್ಲರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು