ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಳವಾರ ಸಮಾಜದ ಪಾತ್ರವೇನು..? ಪೂರ್ವಭಾವಿ ಸಭೆಯಲ್ಲಿ ಚರ್ಚೆ
ವಿಜಯಪುರ : ಹಿಂದುಳಿದ ವರ್ಗಗಳ ಆಯೋಗದ ಸಹಯೋಗದಲ್ಲಿ 2025 ನೇ ಸಾಲಿನ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಳವಾರ ಸಮುದಾಯ, ಸಮಾಜದ ಜನರು ಮುಖ್ಯ ಜಾತಿ ಕಾಲಂ ನಲ್ಲಿ ನಾಯಕ/ನಾಯ್ಕಡ ಉಪ ಜಾತಿ ಕಾಲಂ ನಲ್ಲಿ ತಳವಾರ ಎಂದು ಬರೆಸುವುದರ ಜೊತೆಗೆ (ST)ಪರಿಶಿಷ್ಟ ಪಂಗಡದ ಪಟ್ಟಿ ಕ್ರಮ ಸಂಖ್ಯೆ 38 ಕ್ಕೆ ಒತ್ತ ನೀಡಬೇಕು ಎಂದು ವಿಜಯಪುರ ನಗರದಲ್ಲಿ ಚರ್ಚೆ ನಡೆಯಿತು. ನಮ್ಮದಲ್ಲದ ಜಾತಿಯ ಪದಗಳನ್ನು ಕೈ ಬಿಡಬೇಕು. ಯಾವುದೇ ಒಂದೆ ಕುಟುಂಬದಲ್ಲಿ ಎರಡು ಮೂರು ಜಾತಿಗಳನ್ನು ಬರೆಸಬಾರದು. ಅದಲ್ಲದೇ ನಮ್ಮ ಕುಟಂಬದ ತಂದೆಯ ಶಾಲಾ ದಾಖಲಾತಿ, ಸಹೋದರ ಶಾಲಾ ದಾಖಲಾತಿ, ಸಹೋದರಿ ಶಾಲಾ ದಾಖಲಾತಿ ಬೇರೆ ಬೇರೆ ಇದೆ ಎಂದು ಅದಕ್ಕೆ ಮಾರು ಹೋಗದೆ ಗ್ರಾಮಸ್ಥರು ಅಥವಾ ಸ್ಥಾನಿಕವಾಗಿ ನಿಮ್ಮ ಜಾತಿಯನ್ನು ಯಾವ ರೂಡಿಯಲ್ಲಿ ತಳವಾರ ಎಂದು ಕರೆಯುತ್ತಾರೋ..! ಹಾಗೆ ಬರೆಸಿದರೆ ಸೂಕ್ತ ಎಂದು ಶುಕ್ರವಾರ ಚರ್ಚಿಸಲಾಯಿತು.
ರಾಜ್ಯ ಸರಕಾರ ಹಿಂದುಳಿದ ವರ್ಗಗಳ ಆಯೋಗದ ಸಹಯೋಗದಲ್ಲಿ 2025 ನೇ ಸಾಲಿನ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸೆ- 22 ರಿಂದ ಪ್ರಾರಂಭಿಸುತ್ತಿರುವ ಹಿನ್ನೆಲೆಯಲ್ಲಿ ತಳವಾರ ಸಮಾಜ ವತಿಯಿಂದ ಪೂರ್ವಭಾವಿ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ವಿವೇಕ ಡಬ್ಬಿ ಮಾತನಾಡಿದ ಅವರು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಯಾವುದೊಂದು ಕುಟುಂಬ ಹೊರಗೆ ಉಳಿಯದಂತೆ ನೋಡಿಕೊಳ್ಳಬೇಕು. ಭವಿಷ್ಯದಲ್ಲಿ ಸರಕಾರದ ಸವಲತ್ತು ಹಾಗೂ ಮೀಸಲಾತಿ ಸೌಲಭ್ಯ ಪಡೆಯಲು ಈ ವರದಿ ಆಕಾರ ಗ್ರಂಥವಾಗಲಿದೆ.
ಆದರೆ ಇಲ್ಲಿಯವರೆಗೆ ಕೆಳ ಪಟ್ಟಿಯಲ್ಲಿ ಹಾಗೂ ಬುಡುಕಟ್ಟು ಜನಾಂಗಕ್ಕೆ ಸಿಗಬೇಕಾದ ಮೀಸಲಾತಿ ಸಿಕ್ಕಿದ್ದು ಪ್ರಭಲರಿಗೆ ಮಾತ್ರ ಎಂಬುದು ಜನಸಾಮಾನ್ಯರಿಗೂ ಇಂದು ಅರ್ಥವಾಗಿದೆ. ಜಾತಿ ಸಂಖ್ಯೆಗೆ ಅನುಗುಣವಾಗಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಸೇರಿದಂತೆ ಯಾವುದೇ ಕ್ಷೇತ್ರದಲ್ಲೂ ಪ್ರಾತಿನಿಧ್ಯ ಇಂದಿಗೂ ಸಿಕ್ಕಿಲ್ಲ ಎಂಬ ಕೊರಗು ನಮ್ಮ ಜನರಲ್ಲಿ ಕಾಣುತ್ತಿದ್ದೆವೆ. ಹಾಗಾಗಿ ಈಗ ನಡೆಯುವ ಸಮೀಕ್ಷೆಯ ಹಿನ್ನೆಲೆಯಾಗಿ ಪ್ರತಿ ಗ್ರಾಮ ತಾಲ್ಲೂಕು ಸೇರಿದಂತೆ ಯುವಕರ ತಂಡಗಳನ್ನು ರಚಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಪ್ರತಿ ಕುಟುಂಬ ಸಮೀಕ್ಷೆಯಲ್ಲಿ ಪಾಲ್ಗೊಳ್ಳವಂತೆ ಮಾಡಬೇಕು. ಆದರೆ 65 ಪ್ರಶ್ನೆಗಳಿಗೂ ಅತೀ ಸೂಕ್ಷ್ಮವಾಗಿ ಉತ್ತರ – ಕೊಡಬೇಕಾದ ಹಿನ್ನೆಲೆ ಅದಕ್ಕೆ ಪೂರಕವಾಗಿರುವ ಉತ್ತರಗಳನ್ನು ತಯಾರಿಸಿ ನಮ್ಮ ಯುವಕರು ಸಮಾಜದ ಜನರಿಗೆ ತಿಳಿಸುವುದು ಅತೀ ಸೂಕ್ತ ಎಂದು ಹೇಳಿದರು.
ಇನ್ನೋರ್ವ ಮುಖಂಡ ಸಾಯಬಣ್ಣ ಬಾಗೇವಾಡಿ ಮಾತನಾಡಿದ ಅವರು, ಜಗತ್ತಿನ ವೇಗಕ್ಕೆ ತಕ್ಕಹಾಗೆ ನಾವು ನಮ್ಮ ಸಮಾಜ ಬದಲಾವಣೆಯಾಗಬೇಕು. ಇಲ್ಲದಿದ್ದರೆ ನಮ್ಮ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿರುತ್ತದೆ. ಇಂದು ಸಮಾಜದಲ್ಲಿ ಅತ್ಯಂತ ಬುದ್ದಿವಂತರು, ಮೇಧಾವಿಗಳು ಅರ್ಹ ನಾಯಕರು, ಮುಖಂಡರು ಇದ್ದರೂ ಸಮಾಜದ ಪರಿಸ್ಥಿತಿ ಗಂಭೀರವಾಗುತ್ತಿದೆ. ಕಾರಣ ಈಗೀನ ಕಾಲಕ್ಕೆ ತಕ್ಕೆಹಾಗೆ ಅಪಡೆಟ್ ಆಗದ ಹಿನ್ನಲೆಯಲ್ಲಿ ಶತಮೂರ್ಖರಾಗುತ್ತಿವೆ. ಇವತ್ತು 2A ಮೀಸಲಾತಿ ಹಿನ್ನೆಲೆಯಲ್ಲಿ ಪಂಚಮಸಾಲಿ ಸಮುದಾಯದಲ್ಲಿ ಅನೇಕ ರೀತಿಯ ಬೆಳವಣಿಗೆ ಕಾಣುತ್ತಿದ್ದೆವೆ. ಇವತ್ತು ಕೆಚ್ಚದೆಯ ಹೋರಾಟಗಾರ್ತಿ ರಾಣಿ ಚೆನ್ನಮ್ಮ ವೃತಗಳು ಕಟ್ಟುವ ಮೂಲಕ ಸಮಾಜದಲ್ಲಿ ಹೊಸದೊಂದು ಮುನ್ನುಡಿ ಬರೆಯುತ್ತಿದ್ದಾರೆ. ಇನ್ನೂ ಹಾಲುಮತ ಸಮಾಜದವರು ಸಂಗೊಳ್ಳಿ ರಾಯಣ್ಣ ವೃತ್ ಜೊತೆಗೆ ಸಮಾಜಕ್ಕೆ ಪ್ರೇರಣೆ ನೀಡುವ ಹಲವಾರು ಕಾರ್ಯಕ್ರಮ ಮಾಡುತ್ತಿದ್ದಾರೆ. ಆದರೆ ನಾವು ಇನ್ನೂ ಹಳೆಯ ಚಾಳಿ ಬಿಡದೆ, ಯಾರದ್ದೊ ಕೈ ಗೊಂಬೆಯಾಗಿ ಸಮಾಜದಲ್ಲಿ ಜವಾಬ್ದಾರಿ ಹೊತ್ತೀರುವ ನಾವು ಕೆಲವು ವಿಚಾರ, ಸಂಗತಿ ಮರೆತ್ತಿದ್ದೆವೆ ಅನ್ಸುತ್ತಿದೆ. ಹಾಗಿದ್ದಲ್ಲಿ ಸಮಾಜಕ್ಕೆ ಬಲಿಕೊಡುವುದು, ಅಥವಾ ಮೊಸ ಮಾಡುವುದು ಒಳ್ಳೆಯದಲ್ಲ. ಅದು ಆಗುತ್ತಿದೆ ಎಂಬ ಆತಂಕ ಹಲವಾರು ಜನರ ಮಾತಿನಲ್ಲಿ ಆಲಿಸುತ್ತಿದ್ದೆವೆ. ಅಂತೆನಾದರೂ ತಪ್ಪು ನಡೆದಿದ್ದಲ್ಲಿ, ಭವಿಷ್ಯದಲ್ಲಿ ಸಮಾಜಕ್ಕೆ ತೆಲೆದಂಡ ಹೊರಬೇಕಾಗುತ್ತದೆ.
ಇನ್ನೂ ಸಮೀಕ್ಷೆಯಲ್ಲಿ ರಾಜಕೀಯ ಮಾಡದೆ, ಸಮೀಕ್ಷೆ ಕಾರ್ಯವನ್ನು ವ್ಯವಸ್ಥಿತವಾಗಿ, ವೈಜ್ಞಾನಿಕವಾಗಿ ಹಾಗೂ ನಿಖರವಾಗಿ ಕಾರ್ಯಗತಗೊಳಿಸಲು ನಮ್ಮ ಸಮಾಜ ಅನುಕೂಲ ಮಾಡಿಕೊಡಬೇಕು. ಮೊದಲನೇ ಹಂತದ ಕಾರ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ಯಾವುದೇ ಲೋಪಗಳಿಗೆ ಆಸ್ಪದ ನೀಡಬಾರದು ಎಂದು ಹೇಳಿದರು.
ಇನ್ನೂ ಯುವ ಮುಖಂಡ ಆನಂದ ಗೊರಗುಂಡಗಿ ಮಾತನಾಡಿದ ಅವರು, ಬುಡಕಟ್ಟು ಜನಾಂಗದವರು ತಮ್ಮ ಹಕ್ಕನ್ನು ಕೇಳದಿದ್ದರೆ ಭವಿಷ್ಯದಲ್ಲಿ ಯಾವುದೇ ಸೌಲಭ್ಯ ಸಿಗುವುದಿಲ್ಲ. ಧ್ವನಿ ಇಲ್ಲದವರ ಪರ ಸರ್ಕಾರ ನಿಲ್ಲಬೇಕು. ಆದರೆ ನಮ್ಮ ಸಮಾಜ ಸಂಘಟನೆಯಾಗಬೇಕು. ವಿಧ್ಯಾವಂತರು, ವಿಚಾರವಂತರು, ನೌಕರಸ್ಥರು ಹಾಗೂ ಮುಖಂಡರು ಎಲ್ಲರೂ ಒಂದೇ ವಿಚಾರದ ಅಡಿಯಲ್ಲಿ ಕಾರ್ಯಪ್ರವೃತ್ತರಾಗಬೇಕು. ನಮ್ಮ ಸಮಾಜಕ್ಕೆ ಶೈಕ್ಷಣಿಕ, ಆರ್ಥಿಕ, ರಾಜಕೀಯ ಕೊರತೆಯಿರುವುದರಿಂದ ಅಂತಹ ಕಷ್ಟದಿಂದ ಹೊರಬರಲು ಈ ಸಮೀಕ್ಷೆ ಸೂಕ್ತ ವೇದಿಕೆ ಎಂದು ಹೇಳಿದರು.
ತಳವಾರ ಸಮಾಜ ನಡೆದು ಬಂದ ದಾರಿ ಅಥವಾ ಇತಿಹಾಸ
ಇನ್ನೂ ತಳವಾರ ಸಮುದಾಯಕ್ಕೆ, ಸಮಾಜಕ್ಕೆ ತನ್ನದೇ ಇತಿಹಾಸವಿದೆ. ಅದನ್ನು ನಮ್ಮ ಜನರಿಗೆ ತಲುಪಿಸುವಲ್ಲಿ ಜಾಗೃತಿಮೂಡಿಸುವಲ್ಲಿ ಎಡೆಯುದ್ದಿವೆ. ತಳವಾರರು ಸಾಹಸ, ಶೌರ್ಯಕ್ಕೆ ಹೆಸರುವಾಸಿ. ತಳವಾರ ಅನ್ನೋದು ಮೂಲ ತಲ್ವಾರ್.ಆದರೆ ಅದು ಬಾಯಿ ರೂಡಿಯಿಂದ ತಳವಾರ ಎಂದು ಬಂದಿದ. ಇನ್ನೂ ಹಿಂದಿನ ಕಾಲದಲ್ಲಿ ಯಾರು ರಾಜ್ಯವನ್ನು ಕಟ್ಟಿ ರಾಜರಾಗಿ ರಾಜ್ಯಭಾರ ಮಾಡಿದರೂ ಅವರನ್ನೇ ಇಂದು ಮೀಸಲಾತಿ ನೀಡಿ ಹಿಂದಿನ ಕಾಲದ ರಾಜರಿಗೆ ಇಂದಿನ ಕಾಲದ ಶಾಸಕ ,ಸಂಸದ ಹಾಗೂ ಸಚಿವರನ್ನ ಮಾಡಿದ್ದೇವೆ. ಆ ಕಾಲದಲ್ಲಿ ರಾಜರನ್ನು ಒಳಗೊಂಡು ಇಡೀ ರಾಜವನ್ನೇ ಕಾಯಿದಿರುವ ಸೈನಿಕರೇ ತಳವಾರರು. ನಿಜವಾಗಿಯು ನೋವಿನ ಸಂಗತಿ ಅಂದರೇ ರಾಜರಿಗೆ ಮತ್ತು ರಾಜಮನೆತನದವರಿಗೆ ಮೀಸಲಾತಿ ಸಿಕ್ಕಿದೆ ಹೊರತು, ರಾಜರನ್ನು ರಕ್ಷಣೆ ಮಾಡಿದ ತಳವಾರರರಿಗೆ ಮೀಸಲಾತಿ ಇಂದಿಗೂ ದೊರೆತ್ತಿಲ್ಲ ಎಂದರೆ ನಾಗರಿಕ ಸಮಾಜಕ್ಕೆ ಮುಜಗುರ ಪಡವಂತದ್ದು. ಇನ್ನೊಂದು ಕಡೆ ನಮ್ಮಲೇ ಇರುವ ಕೆಲವೊಬ್ಬರು ಸಮಾಜ ದ್ರೋಹಿಗಳು, ಸ್ವಾರ್ಥಿಗಳು, ಸಮಾಜಕ್ಕೆ ದಾರಿ ತಪ್ಪಿಸಿ ನಮ್ಮ ಮಕ್ಕಳ ಭವಿಷ್ಯದ ಜೊತೆಗೆ ಚಲ್ಲಾಟ ಆಡುತ್ತಿದ್ದಾರೆ.
ಮೊದಲು ಅರ್ಥಮಾಡಿಕೊಳ್ಳಬೇಕಾಗಿದ್ದು, ತಳವಾರ ಪದ ಅಂದರೇನು..? ಅದು ಏನು ಸೂಚಿಸುತ್ತದೆ..! ತಳವಾರ/ ತಲ್ವಾರ, ಕತ್ತಿ. ತಳವಾರ ಅಂದರೆ ಊರು ಕಾಯುವ ಕಾವಲುಗಾರ, ಊರು ರಕ್ಷಣೆ ಮಾಡುವ ಪೋಲಿಸ್, ಸೈನಿಕ ಎಂದರ್ಥ.
ಇನ್ನೂ ಜಮಾದಾರ ಎಂದರೆ ಒಂದು ಗುಂಪಿನ ಮೇಲಿನ ನಾಯಕ. ಇಂದಿನ ಪೊಲೀಸ್ ಠಾಣೆಗಳಲ್ಲಿ ಇರುವ ಹೆಡ್ ಕಾಣ್ಸಟೇಬಲ ಸಮಾನಾರ್ಥಕ ಪದವಾಗಿದೆ. ವಾಲಿಕಾರ/ಓಲೇಕಾರ್ ಪತ್ರಗಳನ್ನು ರವಾನೆ ಮಾಡಿ ಗ್ರಾಮದಲ್ಲಿ ನಡೆಯುವ ಬೆಳವಣಿಗೆ ಕುರಿತು ಸರಕಾರಕ್ಕೆ ಪೂರ್ಣ ಮಾಹಿತಿ ಒದಗಿಸುವ ಓಲೇಕಾರ. ನಾಟಿಕಾರ/ಲಾಟಿಕಾರ್ ಅಂದರೆ ಪೋಲಿಸ್ ಲಾಠಿ ಎಂದರ್ಥ. ದಳಪತಿ,(ದಳವಾಯಿ) ಸೈನೆದ ಮುಖ್ಯಸ್ಥರು ಗ್ರಾಮದ ಮುಖಂಡತ್ವ ವಹಿಸಿಕೊಂಡವರು.
ಚೋರಗಸ್ತಿ ಕಳ್ಳರಿಂದ ಗ್ರಾಮ ರಕ್ಷಣೆ ಮಾಡುವರು. ಕೊಟರಗಸ್ತಿ ಅಂದರೆ ವಠಾರಗಳನ್ನು ಕಾಯುವವರು.
ಹೀಗೆ ಹಲವಾರು ಪದಗಳನ್ನು ಸಮಾಜದಲ್ಲಿ ನಾವು ಕಾಣುತ್ತೇವೆ. ಇವುಲ್ಲವೂ ನಮ್ಮ ಸಮಾಜದ ಇತಿಹಾಸ ಪರಂಪರೆಯ ಸೂಚಿಸುತ್ತೆವೆ. ಇವುಗಳ ಬಗ್ಗೆ ಇನ್ನೂ ಸಂಪೂರ್ಣವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಈ ಒಂದು ಕಾರ್ಯಕ್ರಮದಲ್ಲಿ ಶಂಕರ್ ವಾಲಿಕಾರ, ಸೋಮು ಜಮಾದಾರ, ಸಂಜೀವ ತಳವಾರ, ರಮೇಶ್ ದಳವಾಯಿ, ಶ್ರೀಶೈಲ ತಳವಾರ್, ರೇವಣ್ಣ ಹತ್ತಳ್ಳಿ, ಸಂತೋಷ ಸಂಗೋಗಿ, ಸಂತೋಷ ವಾಲಿಕಾರ, ನಿಂಗಣ್ಣ ತಿಳಗೋಳ, ಆನಂದ ಗೊರಗುಂಡಗಿ, ಸಂತೋಷ ಕೋಳಿ, ಈಶ್ವರ ಮಣಗಿರಿ, ಸುರೇಶ ಡೊಂಗ್ರೊಜ್, ಅಭಿಶೇಕ ಜಮಾದಾರ, ಅರ್ಜುನ ಆಲಮೇಲ, ನವೀನ ರೂಗಿ,ಆನಂದ ತಳವಾರ, ಹುಲೆಪ್ಪ ಆಲಗೂರ, ಈರಣ್ಣ ಹಡಲಸಂಗ, ಭೀಮರಾಯ ಬಿಲ್ಕರ, ಚಂದ್ರಾಮ ತಳವಾರ, ಬಿ.ಟಿ ನಾಯ್ಕೊಡಿ, ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.


















