ನೀರಿನ ಮಟ್ಟ ಪರೀಕ್ಷೆ ಅಭಿಯಾನ | ಪಿಡಿಒಗಳಿಗೆ ಫೀಲ್ಡ ಟೆಸ್ಟ ಕುರಿತು ತರಬೇತಿ ಕಲುಷಿತ ನೀರು ಪೂರೈಕೆಯಾಗದಂತೆ ಕ್ರಮ ಕೈಕೊಳ್ಳಿ
ಇಂಡಿ : ಗ್ರಾಮೀಣ ಪ್ರದೇಶದಲ್ಲಿ ಕಲುಷಿತ ನೀರು ಸೇವನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಪ್ರಮಾಣಗಳು ಕಂಡು ಬಂದಿದ್ದು ಇಂತಹ ಪ್ರಕರಣಗಳು ಪುನರಾವರ್ತನೆ ಯಾಗದಂತೆ ಮುನ್ನಚ್ಛರಿಕೆ ವಹಿಸಬೇಕು ಎಂದು ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಸ್.ಆರ್.ರುದ್ರವಾಡಿ ಹೇಳಿದರು.
ಪಟ್ಟಣದ ತಾ.ಪಂ ಸಬಾಭವನದಲ್ಲಿ ತಾ.ಪಂ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ ನೀರಿನ ಗುಣಮಟ್ಟ ಪರೀಕ್ಷೆ ಸಂಬAಧ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲುಷಿತ ನೀರು ಎಂದು ಕಂಡು ಬಂದಿರುವ ನೀರಿನ ಮೂಲಗಳಿಂದ ಕುಡಿಯಲು ನೀರನ್ನು ಸರಬರಾಜು ಮಾಡದೇ ಅಂತಹ ಮೂಲಗಳ ಹತ್ತಿರ ಈ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ನಾಮಫಲಕವನ್ನು ಅಳವಡಿಸಿ ಇಂತಹ ನೀರಿನ ಮೂಲಗಳ ವಿವರಗಳನ್ನು ಹಾಗೂ ಪರೀಕ್ಷಿಸುವ ಎಲ್ಲ ನೀರಿನ ಮೂಲಗಳ ಪರೀಕ್ಷಾ ವರದಿಗಳನ್ನು ಜಲಜೀವನ ಮಿಷನ್ ಡಬ್ಲೂಕ್ಯೂಎಂಇಎಸ್ ನಲ್ಲಿ ಟ್ಯಾಗಿಂಗ ಮಾಡಲು ಸೂಚಿಸಿದರು.
ತಾ.ಪಂ ಸಹಾಯಕ ನಿರ್ದೇಶಕ ಪ್ರಕಾಶ ರಾಠೋಡ ಮಾತನಾಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಜನರಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವದು ಮತ್ತು ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಹಾಗೂ ನೀರಿನ ಪರೀಕ್ಷೆಯನ್ನು ಸ್ಥಳದಲ್ಲೇ ಪರೀಕ್ಷಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತರ ನಿರ್ದೇಶಕರ ಮೇರೆಗೆ ಜೂನ ೨೭ ರಿಂದ ಜು. ೨ ರ ವರೆಗೆ ಕೈ ಕೊಳ್ಳಲಾಗಿದೆ ಎಂದರು. ಇದೇ ವೇಳೆ ಗ್ರಾಮೀಣ ಪ್ರದೇಶದಲ್ಲಿ ಕಲುಷಿತ ನೀರಿನಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಪೊಸ್ಟರ್ ವಿತರಿಸಿದರು. ನಂದೀಪ ರಾಠೋಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಿಡಿಒಗಳಾದ ಜಬ್ಬಾರ ಹಿಳ್ಳಿ, ಸಿದರಾಯ ಬಿರಾದಾರ, ವಿರೇಶ ಹಿಟ್ಟಿನಹಳ್ಳಿ, ಸುರೇಶ ಲೋಣ ಮತ್ತಿತರಿದ್ದರು.
ಇಂಡಿ ಪಟ್ಟಣದ ತಾ.ಪಂ ಸಬಾಭವನದಲ್ಲಿ ಆಯೋಜಿಸಿದ ನೀರಿನ ಗುಣಮಟ್ಟ ಪರೀಕ್ಷೆ ಸಂಬAಧ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ರುದ್ರವಾಡಿ ಮಾತನಾಡಿದರು.