ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಗೌರವಾಧ್ಯಕ್ಷ ಎಚ್.ಎಮ್. ಬಿಳವಾರ ಹಾಗೂ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಹೊಸಮನಿ ಮಾತನಾಡಿ, ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರು ಎಂದು ಪರಿಗಣಿಸುವುದು ಹಾಗೂ ಸಹ ಶಿಕ್ಷಕರಿಗೆ ಸಿಗುವ ಎಲ್ಲಾ ಸೌಲಭ್ಯಗಳು ಕಲ್ಪಿಸಬೇಕು. ಅದಲ್ಲದೆ ಮುಖ್ಯ ಶಿಕ್ಷಕರ ಹುದ್ದೆಗೆ ಮುಂಬಡ್ತಿ ನೀಡಬೇಕು. ಈ ಹಿಂದೆ ಸರ್ಕಾರ ನೇಮಿಸಿದ ಎಲ್. ಆರ್. ವೈದ್ಯನಾಥನ್ ಸಮಿತಿಯ ಶಿಫಾರಸ್ಸು ಯಥಾವತ್ತಾಗಿ ಜಾರಿಗೆ ತರಬೇಕು. ಇಲ್ಲದಿದ್ದರೆ ಪ್ರಸ್ತಕ ಸಾಲಿನ ಎಲ್ಲಾ ಕ್ರೀಡಾಕೂಟಗಳನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಹಲವು ವರ್ಷಗಳಿಂದ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಭರವಸೆ ಪೂರೈಸುವ ಮಾತುಗಳು ಕೇಳಿಬರುತ್ತವೆ. ಆದರೆ ಇಲಾಖೆಯ ಕ್ರೀಡಾಕೂಟಗಳು ಮುಗಿದ ನಂತರ ಭರವಸೆ ಮಾತುಗಳನ್ನು ಮರೆತು ಬಿಡುತ್ತಾರೆ. ಈ ಬಾರಿ ಹೋರಾಟದ ಹಾದಿ ತುಳಿಯುವುದು ಅನಿವಾರ್ಯವಾಗಿದೆ ಎಂದರು.
ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿ ಎಮ್. ಎಮ್. ಮಡಿವಾಳರ, ವಿ.ಎಸ್.ಜಾಧವ, ಪ್ರಕಾಶ ಐರೋಡಗಿ, ಜೆ.ಎಮ್.ಕಡಣಿ, ಸೂರ್ಯಕಾಂತ್ರ ಸಿನಖೇಡ. ದಶರಥ ಕೋರಿ, ಆರ್.ಎಸ್.ದೇವಣಗಾಂವ, ಎಸ್.ಟಿ.ಜೇವೂರ, ಅಶೋಕ ಜಂಬಗಿ, ಆರ್.ಕೆ ಹಳ್ಳಿ, ಎ.ಎನ್. ಕಂಬಾರ, ಎಸ್. ಎಸ್.ರಾಂಪುರ, ಎಸ್.ಎ.ಅಂಬಾರೆ, ಎಸ್.ಬಿ.ಓಂಕಾರಿ, ಶೈಲಾ ಬಿರಾದಾರ, ಎಸ್.ಎಮ್.ಕಾರಕಲ್, ಎಲ್.ಬಿ.ತೋಟದ ಇತರರು ಹಾಜರಿದ್ದರು.