ವಿಜಯಪುರ | ಭಯೋತ್ಪಾದನೆ ಇಡೀ ಮಾನವ ಕುಲಕ್ಕೆ ಅವಮಾನ,ಕೈಲಾಗದ ಹೇಡಿಗಳು ಅಮಾಯಕ ಭಾರತೀಯರ ಮೇಲೆ ದಾಳಿ..!
ಇಂಡಿ : ಜಿಲ್ಲಾ ಕಾಂಗ್ರೆಸ್ ಸಮಿತಿ,ವಿಜಯಪುರ ನಗರ ಬ್ಲಾಕ್ ಹಾಗೂ ಜಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ, ಭಯೋತ್ಪಾದನೆ ಮತ್ತು ಉಗ್ರರ ವಿರುದ್ಧ ಭಾರತೀಯ ಸೇನೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಉಗ್ರರಿಗೆ ಮತ್ತು ಪಾಪಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ ಭಾರತೀಯ ವೀರ ಯೋಧರಿಗೆ ಬೆಂಬಲಿಸಿ, ದಿನಾಂಕ:10/05/2025 ರಂದು ಸಾಯಂಕಾಲ 06.30 ಘಂಟೆಗೆ ವಿಜಯಪುರ ನಗರದ ಮಹಾತ್ಮಾಗಾಂಧಿ ವೃತ್ ದಿಂದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವೃತ್ ದವರೆಗೆ ತ್ರಿವರ್ಣ ಧ್ವಜದ ತಿರಂಗಾ ಯಾತ್ರೆ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್, ಭಾರತೀಯ ಸೇನೆ ಇಡೀ ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿಯಾಗಿದ್ದು.ಉಗ್ರರಿಗೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಭಾರತೀಯ ಸೇನೆಯು ಭಾರತದ ಬಲ ಇಡೀ ವಿಶ್ವಕ್ಕೆ ಪ್ರದರ್ಶಿಸಿದೆ.ಅದರಲ್ಲಿವಿಶೇಷವಾಗಿ ಪಾಕಿಸ್ತಾನಕ್ಕೆ, ಭಯೋತ್ಪಾದನೆ ಇಡೀ ಮಾನವ ಕುಲಕ್ಕೆ ಅವಮಾನ,ಕೈಲಾಗದ ಹೇಡಿಗಳು ಅಮಾಯಕ ಭಾರತೀಯರ ಮೇಲೆ ದಾಳಿ ಮಾಡಿ ಪದೇ ಪದೇ ಇಂತಹ ದುಷ್ಕ್ರತ್ಯವೆಸಗಿ ಮಾನವಿಯತೆಗೆ ಮಾರಕವಾಗಿದ್ದಾರೆ, ಆದರೆ ನಮ್ಮ ಭಾರತ ಸರ್ಕಾರ ಈ ಬಾರಿ ಕಠಿಣ ನಿರ್ಣಯ ಕೈಗೊಂಡು ಪಾಪಿ ಉಗ್ರರಿಗೆ ಸರಿಯಾದ ಪಾಠ ಕಲಿಸಿದೆ,ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ, ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಕ್ಕೆ ಬದ್ದವಾಗಿದ್ದೇವೆ, ಹಾಗೂ ಭಾರತೀಯ ಸೇನಾಪಡೆಗಳಿಗೆ ಮತ್ತು ವೀರ ಯೋಧರಿಗೆ ಇಡೀ ಭಾರತ ದೇಶದ ಸಮಸ್ತ ಜನತೆಯ ಸಂಪೂರ್ಣ ಬೆಂಬಲ ಇದೆ.ನಮ್ಮ ಸೇನೆ, ನಮ್ಮ ಹೆಮ್ಮೆ,ನಮ್ಮ ಗರ್ವ, ನೀವು ಯುದ್ಧದಲ್ಲಿ ಮುನ್ನುಗ್ಗಿ ನಾವೆಲ್ಲರೂ ನಿಮ್ಮ ಜೊತೆಯಲ್ಲಿದ್ದೇವೆ ಎಂದು ಬೆಂಬಲ ವ್ಯೆಕ್ತಪಡಿಸಿ ಮಾತನಾಡಿದರು.
ತಿರಂಗಾ ಯಾತ್ರೆಯಲ್ಲಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ವೈಜನಾಥ ಕರ್ಪೂರಮಠ, ಆಜಾದ್ ಪಟೇಲ್, ಮಹಾದೇವಿ ಗೋಕಾಕ, ಡಾ ಗಂಗಾಧರ ಸಂಬಣ್ಣಿ,ಅಫ್ಜಲ್ ಜಾನವೇಕರ, ಡಾಕ್ಟರ್ ಅರುಣ್ ಸಿಂಗ್ ಪರದೇಶಿ,ಕನ್ನಾನ ಮುಶ್ರೀಫ್,ಜಮೀರ್ ಅಹ್ಮದ್ ಬಕ್ಷಿ, ಆರತಿ ಶಹಾಪುರ,ಶಬ್ಬೀರ್ ಜಾಗೀರದಾರ,ಶಕೀಲ್ ಬಾಗಮಾರೆ,
ಎಮ್ ಸಿ ಮುಲ್ಲಾ, ವಸಂತ ಹೊನಮೊಡೆ, ಶರಣಪ್ಪ ಯಕ್ಕುಂಡಿ, ಫಯಾಜ್ ಕಲಾದಗಿ, ಮೈನೋದ್ದಿನ ಬಿಳಗಿ, ಅಶ್ಫಾಕ್ ಮನಗೂಳಿ,ಅಬ್ದುಲ್ ಪೀರಾ ಜಮಖಂಡಿ, ಶಫೀಕ್ ಬಗದಾದಿ,ಮಿರಾಸಾಬ ಮುಲ್ಲಾ, ಬಡೇಘರ, ಹಾಜಿ ಪಿಂಜಾರ, ಲಾಲಸಾಬ ಕೋರಬು, ಬೀರಪ್ಪ ಜುಮನಾಳ, ಸಂತೋಷ್ ಬಾಲಗಾಂವಿ,ಭಾರತಿ ಹೊಸಮನಿ, ಹಮೀದಾ ಪಟೇಲ್, ಕಾಶಿಬಾಯಿ ಹಡಪದ, ಸರಿತಾ ಧನರಾಜ್, ರುಬೀನಾ ಹಳ್ಳೂರ,ಆಸ್ಮಾ ಕಾಲೇಬಾಗ, ಸುಜಾತಾ ಸಿಂಧೆ ,ಕಲ್ಲಪ್ಪ ಪಾರಶೇಟ್ಟಿ,ಮೈನೂದ್ದಿನ ಅಗಸಬಾಳ, ತಾಜೋದ್ದೀನ ಖಲೀಫಾ,ಅಕ್ರಂ ಮಾಶಾಳಕರ, ಸಲೀಂ ಕಲಾದಗಿ, ಮಹಾದೇವ ರಾವಜಿ, ಅಬುಬಕರ ಕಂಬಾಗಿ, ಗಿರೀಶ್ ಇಟ್ಟಂಗಿ,ಸತೀಶ್ ಅಡವಿ, ಭಜಂತ್ರಿ, ಶಕೀಲ್ ಗಡೆದ್, ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು. ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ಬ್ಲಾಕ್ ಅಧ್ಯಕ್ಷರು ಬ್ಲಾಕ್ ಮುಖಂಡರುಗಳು ರಾಜಕೀಯ ಮುಖಂಡರುಗಳು. ಸಾಹಿತಿಗಳು.ಚಿಂತಕರು. ಸಂಘ ಸಂಸ್ಥೆಗಳ ಪ್ರತಿನಿಧಿಗಳು ವಿವಿಧ ಧಾರ್ಮಿಕ ಗುರುಗಳು ಮಠಾಧೀಶರು ಕಾರ್ಯಕರ್ತರುಗಳು ಹೇಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು


















