ಮಕ್ಕಳಿಗೆ ಡಿಪಿಟಿ-ಟಿಡಿ ಲಸಿಕೆ ಹಾಕಿಸಿ.. ಮಾರಕ ರೋಗಗಳಿಂದ ಅವರನ್ನ ಕಾಪಾಡಿ..
ಶಾಲಾ ಮಕ್ಕಳ ಲಸಿಕೆ ನೋವು ಊತ ಕಂಡಾಗ ಭಯ ಆತಂಕ. ಬೇಡ ಮಕ್ಕಳು ಮಾರಕ ಖಾಯಿಲೆ ತುತ್ತಾಗದಂತೆ ಲಸಿಕೆ ಹಾಕಿಸಿ ವೈ ಎಂ ಪೂಜಾರ ಬಿ ಎಚ್. ಇ ಓ
ಇಂಡಿ : ಎಲ್ಲಾ ಮಕ್ಕಳು ಲಸಿಕೆ ಹಾಕಿಸಿಕೊಂಡು ಮಾರಕ ರೋಗದಿಂದ ದೂರ ಇರಬೇಕು. ನಾವು ನೀಡುತ್ತಿರುವ ಡಿಪಿಟಿ ಹಾಗೂ ಟಿಡಿ ಲಸಿಕೆಗಳು ಗಂಟಲು ಮಾರಿ, ನಾಯಿ ಕೆಮ್ಮು,ದನುರ್ವಾಯು ರೋಗಗಳು ಬರದಂತೆ ಮಕ್ಕಳನ್ನು ಕಾಪಾಡುತ್ತದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ ಎಂ ಪೂಜಾರ ಹೇಳಿದರು.
ಪಟ್ಟಣದ ಬ್ರಿಲಿಯಂಟ್ ಶಾಲೆಯಲ್ಲಿ ಡಿಪಿಟಿ ಹಾಗೂ ಟಿಡಿ ಲಸಿಕೆ ನೀಡಿ ಆರೋಗ್ಯ ಮಾಹಿತಿ ಶಿಕ್ಷಣ ಕಾರ್ಯಕ್ರಮದಲ್ಲಿ ಮಾತನಾಡತ್ತಿದ್ದರು.
ವಿಶ್ವ ಆರೋಗ್ಯ ಸಂಸ್ಥೆಯ ಉದ್ದೇಶಗಳು ಇಡೀ ವಿಶ್ವದ ಮಾನವ ಜೀವನ ಆರೋಗ್ಯವಂತ ಜೀವನ ಸುಖಕರವಾಗಿರಲು ನಿರ್ದೇಶನ ನೀಡುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇಡೀ ಭಾರತ ದೇಶದ್ಯಾದಂತ ಎಲ್ಲಾ ಮಕ್ಕಳಿಗೆ ಲಸಿಕೆ ನೀಡುವ ಮೂಲಕ ಜೀವಗಳು ಉಳಿಸುವ ಕಾರ್ಯಕ್ರಮ ನಡೆಯುತ್ತೆದೆ. ಇನ್ನೂ ಒಂದನೇ ತರಗತಿಯ ಮಕ್ಕಳಿಗೆ ಡಿಪಿಟಿ ಲಸಿಕೆ 5ನೇ ತರಗತಿ ಮತ್ತು 10ನೇ ತರಗತಿ ಮಕ್ಕಳಿಗೆ ಟಿಡಿ ಲಸಿಕೆ ನೀಡಲಾಗುವುದು.
ಡಿಪ್ತೀರಿಯಾ, ಗಂಟಲು ಮಾರಿ: ಈ ಕಾಯಿಲೆ ಕಣ್ಣಿಗೆ ಕಾಣದ ಅತ್ಯಂತ ಸೂಕ್ಷ್ಮಾಣು ಜೀವಿ ಕೊರ್ನಿ ಬ್ಯಾಕ್ಟೀರಿಯಮ್ ಡಿಪ್ಟೆರಿಯ ಎಂಬ ರೋಗಾಣುನಿಂದ ಹರಡುತ್ತದೆ. ಈ ಕಾಯಿಲೆ ಸಾಂಕ್ರಾಮಿಕ ಗಂಟಲು ಮತ್ತು ಟಾನ್ಸಿಲ್ ಬಾಧಿಸುತ್ತದೆ. ಇವುಗಳ ಮೇಲೆ ಚಿಕ್ಕ ಚಿಕ್ಕ ಬಿಳಿಪೊರೆ ಬರುತ್ತದೆ. ಗಂಟಲು ಬಾವು ಬರುವುದರಿಂದ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಕೊನೆಗೆ ಉಸಿರುಗಟ್ಟಿ ಮಕ್ಕಳು ಸಾವನ್ನಪ್ಪುತ್ತವೆ ತಡೆಗಟ್ಟಲು ಲಸಿಕೆ ನೀಡಲಾಗುತ್ತದೆ.
ಪರಟುಸಿಸ್. ನಾಯಿಕೆಮ್ಮು: ಈ ಕಾಯಿಲೆ ಬರೋಡೆಲ್ಲಾ ಪ್ರೊಟೋಸಿಸ್ ಸಿಸಿ ಎಂಬ ಬ್ಯಾಕ್ಟೀರಿಯಾದಿಂದ ಹರಡುತ್ತದೆ ಸಾಂಕ್ರಾಮಿಕ ರೋಗವಾಗಿದ್ದು ಶಾಶ್ವಕೋಶ ತೊಂದರೆ ಉಂಟು ಮಾಡಿ ಉಸಿರುಗಟ್ಟಿ ಮಕ್ಕಳು ಸಾವನ್ನಪ್ಪುತ್ತವೆ ತಡೆಗಟ್ಟಲು ಲಸಿಕೆ ನೀಡಲಾಗುತ್ತದೆ.
ಟೆಟನಸ, ಧನುರ್ವಾಯು : ಈ ಕಾಯಿಲೆ ಸಾಂಕ್ರಾಮಿಕ ರೋಗವಾಗಿದ್ದು ಕ್ಲೋಸ್ಟ್ರಿಡಿಯಂ ಟೇಟಾನಿಯಂಬ ಬ್ಯಾಕ್ಟೀರಿಯಾ ದಿಂದ ರೋಗ ಹರಡುತ್ತದೆ. ಯಾವ ವಯಸ್ಸಿನಲ್ಲಾದರೂ ಬರಬಹುದು, ಕತ್ತು ಮತ್ತು ದೇಹದ ಇತರೆ ಭಾಗಗಳು ನಡುಕು ಬಂದು ಕೈ ಕಾಲುಗಳು ಅಂಗೈ ಮುಷ್ಟಿ ಕಟ್ಟಿ ಮೈಯನ್ನು ಧನುಷ, ಅಂದರೆ ಬಿಲ್ಲಿನ ಆಕಾರದಲ್ಲಿ ಮೈ ಸೆಟೆ ಹಿಡಿದು ಮಕ್ಕಳು ಸಾವನ್ನಪ್ಪುತ್ತವೆ, ತಡೆಗಟ್ಟಲು ಲಸಿಕೆ ನೀಡಲಾಗುತ್ತದೆ.
ಲಸಿಕೆ ನೀಡಿದ ಸ್ಥಳದಲ್ಲಿ ಬಾವು ನೋವು 2 ರಿಂದ 3 ದಿನಗಳ ಅವಧಿ ಇರುತ್ತದೆ. ಚುಚ್ಚುಮದ್ದು ಲಸಿಕೆ ನೀಡಿದ ಸ್ಥಳದಲ್ಲಿ ಕಾಟನ್ ಬಟ್ಟೆಯ ತಣ್ಣೀರು ಪಟ್ಟಿ ಹಚ್ಚಿರಿ ತೀವ್ರ ಸ್ವರೂಪ ಪಡೆದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಲಹೆ ಪಡೆಯಿರಿ ಎಂದು ಹೇಳಿದರು.
ಪ್ರಸ್ತುತ ಸಂದರ್ಭದಲ್ಲಿ ಬ್ರಿಲಿಯಂಟ್ ಸಂಸ್ಥೆಯ ಅಧ್ಯಕ್ಷ ಎಂ ಎಂ ಎನ್ ನಾಯ್ಕೋಡಿ, ಎಚ.ಕೆ. ನಾಯ್ಕೋಡಿ, ದೈಹಿಕ ಶಿಕ್ಷಕ ಎಂ ಎಸ್ ಕಂಬಾರ್, ಕಿರಣ ಕುಮಾರ, ವಾಣಿ, ಜ್ಯೋತಿ ಪಾಟೀಲ್, ರೂಪಾ ದೊಡ್ಡಮನಿ, ಸುಶ್ರಧಿಕಾರಿ ರಿಯಾನ, ಆರತಿ ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.