ಅನ್ನ ದಾಸೋಹಿ ಟಿ.ಕೃಷ್ಣ ಮೂರ್ತಿ ಗೆ ಸನ್ಮಾನ
ಮುದ್ದೇಬಿಹಾಳ :ಪಟ್ಟಣದ ಲಯನ್ಸ್ ಕ್ಲಬ್ ಮುದ್ದೇಬಿಹಾಳ ವತಿಯಿಂದ ತಾಲೂಕಾ ಆಸ್ಪತ್ರೆ ಯಲ್ಲಿ 114 ನೇ ಅನ್ನ ದಾಸೋಹ ಕಾರ್ಯಕ್ರಮದಲ್ಲಿ ದಾಸೋಹಿಗಳಾದ ಟಿ. ಕೃಷ್ಣ ಮೂರ್ತಿ ಅವರನ್ನು ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಈ ವೇಳೆ ಲಯನ್ಸ್ ಕ್ಲಬ್ ಹಿರಿಯ ಸದಸ್ಯರಾದ ಶರಣಯ್ಯ ಹಿರೇಮಠ್, ರಂಜನಾ ಹಿರೇಮಠ್, ವೆಂಕನಗೌಡ ಪಾಟೀಲ್, ಸೋಮಶೇಖರ ಆಣೆಪ್ಪನವರ, ಸಿದ್ಧರಾಜ ಹೊಳಿ ಹಾಗೂ ಟಿ. ವಿಜಯ ಭಾಸ್ಕರ್ ಸೇರಿದಂತೆ ಉಪಸ್ಥಿತರಿದ್ದರು.