ಯೋಗದಿಂದ ದೇಹ ಮತ್ತು ಮನಸ್ಸಿಗೆ ತರಬೇತಿ
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಯೋಗ ವಿದ್ಯೆ ವಿಷದಾದ್ಯಂತ ಜನಪ್ರಿಯವಾಗಿ ಬೆಳೆಯಲು ಮುಖ್ಯ ಕಾರಣ, ಆಧುನಿಕ ಜೀವನದ ಜಂಜಾಟ ಕಳೆದು, ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ವೈಜ್ಞಾನಿಕ ಜ್ಞಾನ ಎಂಬುದು ಸತ್ಯವಾದ ಮಾತು ಎಂದು ಶಿಕ್ಷಕ, ಯೋಗ ತರಬೇತಿದಾರ ರವೀಂದ್ರ ನಂದೆಪ್ಪನವರ ಹೇಳಿದರು.
ಶಾ ಸೋಗಮಲ್ ಪಿರಾಜಿ ಓಸ್ವಾಲ್ ಸರಕಾರಿ ಪದವಿ ಕಾಲೇಜಿನ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಡೆದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗ ಕೇವಲ ಧಾರ್ಮಿಕ ಆಚರಣೆ ಅಲ್ಲ ಅದೊಂದು ಮನೋವೈಜ್ಞಾನಿಕ ತರಬೇತಿ, ದೇಹವನ್ನು ದಂಡಿಸುವ ವಿಧಾನವಲ್ಲ, ಬದಲಿಗೆ ದೇಹವನ್ನು ಅರಳಿಸುವ ಕಲೆ ಎಂದು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಎಚ್.ಎಸ್ ಕಟಗೂರು ಅವರು ಮಾತನಾಡಿ, ಯೋಗ ಪದ್ಧತಿಯನ್ನು ಮನುಕುಲದ ಉಪಯೋಗಕ್ಕಾಗಿ ನಾವು ಬಳಸಿಕೊಳ್ಳಬೇಕಾಗಿದೆ. ಇದರಿಂದ ವಿಶ್ವ ಬಂದುತ್ವ ಮತ್ತು ಪ್ರೀತಿ ಹೆಚ್ಚುತ್ತದೆ. ಜಗತ್ತು ಇಂದು ಭಾರತದ ಕಡೆ ಹೊರಳಲು ಮುಖ್ಯ ಕಾರಣ kಯೋಗ ಎಂದು ಮಾತನಾಡಿದರು.
ಯೋಗ ದಿನದ ಅಂಗವಾಗಿ ಸ್ಕೌಟ್ಸ್ ಗೈಡ್ ಹಾಗೂ ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನು ಏರ್ಪಡಿಸಲಾಗಿತ್ತು. ಹಿರಿಯ ಉಪನ್ಯಾಸಕರಾದ ಪ್ರೊ. ಎಲ್ ಎಚ್ ಮಮದಾಪುರ. ಹಂಪಣ್ಣ ಹಡಪದ, ಮೌನೇಶ ಎಂ, ದಾನೇಶ್ವರಿ ಪಾಟೀಲ್ ಸೇರಿದಂತೆ ವಿದ್ಯಾರ್ಥಿಗಳಾದ ರೇವಣಸಿದ್ಧ ಹರಿಂದ್ರಾಳ, ಪ್ರಶಾಂತ ಸಾಲಿ, ರಮೇಶ ವಡ್ಡರ, ಚಂದ್ರು ದನ್ನೂರು ಮುಂತಾದವರು ಭಾಗವಹಿಸಿದ್ದರು., ಪ್ರತಿನಿತ್ಯ ಯೋಗಾಸನ ಮಾಡುವ ಕುರಿತು ತರಬೇತಿಯನ್ನು ನೀಡಲಾಯಿತು.
ಯೋಗ ಕುರಿತು ತರಬೇತಿ ಮಾಡಿದ ಶಿಕ್ಷಕ ತರಬೇತಿದಾರ ರವೀಂದ್ರ ನಂದಪ್ಪನವರ ಅವರಿಗೆ ಕಾರ್ಯಕ್ರಮದ ನಂತರ ಆತ್ಮೀಯವಾಗಿ ಸನ್ಮಾನಿಸಲಾಯಿತು