ಸಮಾಜಕ್ಕೆ ಸರ್ನ್ಮಾಕ್ಕೆ ದಾರಿ ತೋರಿದ ಪೂಜ್ಯರು
ಇಂಡಿ : ನಶ್ವರವಾದ ಈ ಜೀವನದಲ್ಲಿ ಮಾನವನು ಭವಸಾಗರ ದಾಟಲು ಪೂಜ್ಯರಲ್ಲಿ ಶರಣಾಗುವ ಮೂಲಕ ಜೀವನವನ್ನು ಸಾರ್ಥಕಗೊಳಿಸಬಹುದು ಎಂಬ ಸಂದೇಶ ಸಾರಿದವರು ಪೂಜ್ಯ ಶ್ರೀ ಸಂಗಮೇಶ್ವರರವರು ಎಂದು ಸಿಂದಗಿಯ ಪರಮಪೂಜ್ಯ ಶ್ರೀ ಡಾ, ಪ್ರಭು ಸಾರಂಗದೇವ ಶಿವಾಚಾರ್ಯರರು ಹೇಳಿದರು.
ತಾಲೂಕಿನ ನಾದ ಕೆ.ಡಿ ಗ್ರಾಮದಲ್ಲಿ ಶ್ರೀಸಂಗಮೇಶ್ವ ರ ಪಠಾಧೀಕ್ಷ ೪೫ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಮುತೈದಿಯವರಿಗೆ ಉಡಿತುಂಬವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಮಾತನಾಡಿ ಭಾರತ ದೇಶ ದೇವಾಲಯಗಳ ತೊಟ್ಟಿಲು ಬಹುಸಂಖ್ಯಾತ ಜನರು ದೇವರ ಆರಾಧಕರಾಗಿದ್ದು ನಮ್ಮ ಪೂರ್ವಜರಿಂದ ಹಿಡಿದು ಇಲ್ಲಿಯವರೆಗೆ ನಿಸರ್ಗದ ಪ್ರತಿಯೊಂದು ಚರಾಚರ ವಸ್ತುಗಳನ್ನು ಪೂಜಿಸುವ ಸಂಸ್ಕೃತಿ ನಮ್ಮದಾಗಿದೆ. ಇಂದು ಈ ಭಾಗದಲ್ಲಿ ಅನೇಕ ದೇವಾಲಯಗಳು ಮಠ ಮಾನ್ಯಗಳು ಧಾರ್ಮಿಕ ಕ್ಷೇತ್ರಗಳು ತನ್ನದೆಯಾದ ವಿಧದಲ್ಲಿ ಜನರಿಗೆ ಸಹಾಯ ಸಹಕಾರ ಮಾಡುತ್ತಿವೆ, ಹಿಂದೆ ಅಡಂಬರ ಮದುವೆಗಳು ನಡೆಯುತ್ತಿದ್ದವು ಇಂದು ಅನೇಕ ಶರಣರು ತಮ್ಮ ಮಠ ಮಾನ್ಯಗಳಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಸಾಮೂಹಿಕ ವಿವಾಹಗಳನ್ನು ಮಾಡಿಸುವ ಮೂಲಕ ಆರ್ಥಿಕ ಸದೃಢರನ್ನಾಗಿಸಿದ್ದಾರೆ ಎಂದರು.
ನಿವೃತ್ತ ಕೃಷಿ ಅಧಿಕಾರಿ ಧರ್ಮರಾಜ ಅವುಜಿ , ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ , ಬಾಲ್ಯ ಯೋಗಿ ವೀರೂಪಾಕ್ಷಿ ಮಹಾಸ್ವಾಮಿಗಳು, ನಾದ ಶಿವಾನಂದ ಶಿವಾಚಾರ್ಯರು ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗೇಪ್ಪ ಚನ್ನಗೊಂಡ , ಶಿವಯೋಗೆಪ್ಪ ಜೋತಗೊಂಡ, ಮಂಜುನಾಥ ವಂದಾಲ , ಸಂಗನಗೌಡ ಹಚ್ಚಡದ, ಶರಣುಗೌಡ ಬಂಡಿ, ಸುಭಾಸ ಕರೂಟಿ ಮತ್ತಿತರಿದ್ದರು.
ಇಂಡಿ ತಾಲೂಕಿನ ನಾದ ಕೆ.ಡಿ ಗ್ರಾಮದಲ್ಲಿ ಶ್ರೀಸಂಗಮೇಶ್ವ ರ ಪಠಾಧೀಕ್ಷರ ೪೫ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಮುತೈದಿಯವರಿಗೆ ಉಡಿತುಂಬವ ಕಾರ್ಯಕ್ರಮದಲ್ಲಿ ಡಾ. ಸಾರಂಗಶ್ರೀಗಳು ಮಾತನಾಡಿದರು.



















