ಪತ್ನಿಯನ್ನು ಮನೆಗೆ ಕಳಿಸದ ಹಿನ್ನೆಲೆ ಮಾವನನ್ನೆ ಕೊಲೆ ಮಾಡಿದ ಅಳಿಯ..!
ವಿಜಯಪುರ: ಅಳಿಯನೋರ್ವ ಮಾವನ್ನೆ ಕೊಲೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ನಡೆದಿದೆ. ಅಳಿಯನ ಮನೆಗೆ ಹೆಂಡತಿ ಕಳಿಸದ ಮಾವನಾದ
ಶಂಕ್ರೆಪ್ಪ ದಾನಪ್ಪ ಕೋಟಿನ್ (60) ಹತ್ಯೆ ಮಾಡಿದ್ದಾನೆ. ಇಂಡಿ ತಾಲೂಕಿನ ಕೆಂಗನಾಳ್ ಗ್ರಾಮದ ಮಲ್ಲಿಕಾರ್ಜುನ ಸೇರಿದಂತೆ ಮೂವರು ಎದೆಗೆ ಹೊಡೆದು ಹತ್ಯೆಗೈದಿದ್ದಾರೆ.
ಮೃತ ವ್ಯಕ್ತಿ ತನ್ನ ಮಗಳನ್ನು ಆರಾಮವಿಲ್ಲದ ಕಾರಣ 8 ದಿನಗಳ ಹಿಂದೆ ಚಿಕಿತ್ಸೆಗಾಗಿ ತವರು ಮನೆಗೆ ಕರೆದುಕೊಂಡು ಬಂದಿದನ್ನು. ಅದಕ್ಕಾಗಿ ಮಾವನ ಹತ್ಯೆಗೈದಿದ್ದಾನೆ. ದೇವರಹಿಪ್ಪರಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.