ದಶಕಗಳ ಬೇಡಿಕೆಯಾಗಿದ್ದ ಆಲಮಟ್ಟಿ-ಮುದ್ದೇಬಿಹಾಳ-ತಾಳಿಕೋಟೆ-ಹುಣಚಗಿ-ಸುರಪೂರ-ಯಾದಗಿರಿ ನೂತನ ರೈಲು ಮಾರ್ಗ ಅನುಷ್ಠಾನಕ್ಕಾಗಿ ಅಂತಿಮ ಸಮೀಕ್ಷೆ..!
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಈ ಭಾಗದ ದಶಕಗಳ ಬೇಡಿಕೆಯಾಗಿದ್ದ ಆಲಮಟ್ಟಿ-ಮುದ್ದೇಬಿಹಾಳ-ತಾಳಿಕೋಟೆ-ಹುಣಚಗಿ-ಸುರಪೂರ-ಯಾದಗಿರಿ ನೂತನ ರೈಲು ಮಾರ್ಗ ಅನುಷ್ಠಾನಕ್ಕಾಗಿ ಅಂತಿಮ ಸಮೀಕ್ಷೆಗೆ ಆದೇಶ ಹೊರಡಿಸಿದ್ದನ್ನು ಶ್ಲಾಘಿಸಿ ಇಲ್ಲಿನ ರೈಲ್ವೆ ಹೋರಾಟಗಾರರ ಪ್ರತಿನಿಧಿಗಳು ಗುರುವಾರ ಕೊಪ್ಪಳ ಜಿಲ್ಲೆ ಕುಷ್ಟಗಿಗೆ ತೆರಳಿ ಹೊಸ ರೈಲು ಮಾರ್ಗ ಉದ್ಘಾಟನೆಗೆ ಆಗಮಿಸಿದ್ದ ಕೇಂದ್ರ ರೈಲ್ವೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಪ್ರತಿನಿಧಿಗಳ ತಂಡದ ನೇತೃತ್ವ ವಹಿಸಿದ್ದ ಕಿರಣರಾಜ್ ಪಾಟೀಲ ಅವರು ಕುಷ್ಟಗಿಯಿಂದಲೇ ಮೋಬೈಲ್ ಮೂಲಕ ಪತ್ರಿಕೆಯೊಂದಿಗೆ ಮಾತನಾಡಿ, ನಮ್ಮ ಹೋರಾಟಕ್ಕೆ ಸ್ಪಂಧಿಸಿ ಆಲಮಟ್ಟಿ-ಯಾದಗಿರಿ ಮಾರ್ಗದ ಅಂತಿಮ ಸಮೀಕ್ಷೆ ಶೀಘ್ರ ಪೂರ್ಣಗೊಳಿಸಿ ಹೊಸ ಮಾರ್ಗ ಅನುಷ್ಠಾನ ಕಾಮಗಾರಿ ಪ್ರಾರಂಭಿಸುವAತೆ ಸಚಿವರಿಗೆ ಮನವಿ ಮಾಡಲಾಯಿತು. ಸ್ಪಂಧಿಸಿದ ಸಚಿವರು ನಿಮ್ಮ ಬೇಡಿಕೆಯಂತೆ ಈಗ ಸಮೀಕ್ಷೆ ಪ್ರಾರಂಭಗೊಳ್ಳಲಿದೆ. ಸಮೀಕ್ಷೆಯ ವರದಿ ಬಂದ ನಂತರ ಶೀಘ್ರ ಅನುಷ್ಠಾನಕ್ಕೆ ಯೋಜನೆ ರೂಪಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾಗಿ ತಿಳಿಸಿದರು. ಅರವಿಂದ ಲದ್ದಿಮಠ, ಶಿವನಗೌಡ ಪಾಟೀಲ, ಪುಂಡಲೀಕ ಹಡಲಗೇರಿ, ಜಯಪ್ರಕಾಶ ಉಪನಾಳ ಇನ್ನಿತರರು ಇದ್ದರು.
ಮುದ್ದೇಬಿಹಾಳ: ಆಲಮಟ್ಟಿ-ಮುದ್ದೇಬಿಹಾಳ-ಯಾದಗಿರಿ ರೈಲ್ವೆ ಹೋರಾಟಗಾರ ಪ್ರತಿನಿಧಿಗಳಾದ ಕಿರಣರಾಜ ಪಾಟೀಲ, ಅರವಿಂದ ಲದ್ದಿಮಠ ಇತರರು ಸಚಿವ ವಿ.ಸೋಮಣ್ಣ ಅವರನ್ನು ಕುಷ್ಟಗಿಯಲ್ಲಿ ಸನ್ಮಾನಿಸಿದರು.