ವಿಜಯಪುರ ಮೂಲದ ವ್ಯಕ್ತಿಯ ಸಾವು ಆಕಸ್ಮಿಕವಲ್ಲ..! ಕೊಲೆ
Desk news : ದಿನಾಂಕ 10.01.2026 ರಾತ್ರಿ ವಿಜಯಪುರ ಜಿಲ್ಲೆ ಮೂಲದ ವಿಠ್ಠಲ ರಾಥೋಡ್ ಎಂಬ ವ್ಯಕ್ತಿ ಕಾನೂನು ವಿಶ್ವವಿದ್ಯಾಲಯ ಹತ್ತಿರದ ಕಟ್ಟಡದ ಮೇಲಿಂದ ಬಿದ್ದು ತೀವ್ರ ಗಾಯಗೊಂಡಿರುವ ಬಗ್ಗೆ ಆಸ್ಪತ್ರೆಯಿಂದ MLC ಬಂದಿದ್ದು, ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಅಲ್ಲಿದ್ದವರನ್ನು ವಿಚಾರಣೆ ನಡೆಸಿದ ವೇಳೆ ಸದರಿ ಘಟನೆಯು ಆಕಸ್ಮಿಕವಾಗಿರದೇ, ಕೊಲೆ ಎಂಬುದು ತಿಳಿದುಬಂದಿದ್ದು, ಪ್ರಮುಖ ಆರೋಪಿತರಾದ ಛತ್ತಿಸಘಡ ಮೂಲದ
1. ಮೇಘವ್ ಸತನಾಮಿ 50 ವರ್ಷ,
2. ಭಗವಾನ್ ದಾಸ್ ಶತನಾಮಿ 21 ವರ್ಷ,
3. ವಿಮಲಾ ಸತನಾಮಿ 4 ವರ್ಷ
ಎಂಬ ಮೂವರು ಆರೋಪಿತರನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಜರುಗಿಸಿದ್ದು, ತನಿಖೆ ಮುಂದುವರಿಸಲಾಗಿರುತ್ತದೆ.
X Hubbali Dharawad police



















