ಭಾರತ ದೇಶದ ಸಂವಿಧಾನ ಇಡೀ ಜಗತ್ತಿಗೆ ಶ್ರೇಷ್ಠವಾಗಿದ್ದು : ತಹಶಿಲ್ದಾರರ ಕೀರ್ತಿ ಚಾಲಕ
ಮಹಾನ್ ವ್ಯಕ್ತಿಗಳು ದೇಶಕ್ಕಾಗಿ ಹೋರಾಟ ಮಾಡಿ ಬಲಿದಾನ ತ್ಯಾಗದಿಂದ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ.
ತಾಲೂಕು ಅಡಳಿತದಿಂದ ೭೭ ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಆಚರಣೆ.
ಮುದ್ದೇಬಿಹಾಳ: ಸಂವಿಧಾನದ ರಚನೆ ಮಾಡಿದ್ದು ಡಾ ಬಿ ಅರ್ ಅಂಬೇಡ್ಕರ್ ಸಂವಿಧಾನದ ಬರೆದವರು ಮಹಾನ್ ವ್ಯಕ್ತಿಗಳು ದೇಶಕ್ಕಾಗಿ ಹೋರಾಟ ಬಲಿದಾನ ತ್ಯಾಗ, ಮಾಡಿ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂದು ತಹಶಿಲ್ದಾರರ ಕೀರ್ತಿ ಚಾಲಕ ಹೇಳಿದರು.
ಪಟ್ಟಣದ ತಾಲೂಕು ಅಡಳಿತದಿಂದ ತಹಶಿಲ್ದಾರರ ಕಚೇರಿ ಆವರಣದಲ್ಲಿ ೭೭ ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಮಾತನಾಡಿದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹಾನ್ ಹೋರಾಟಕ್ಕಾಗಿ ಮಹಾತ್ಮಾ ಗಾಂಧಿ,ಡಾ ಬಿ ಅರ್ ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಬಾಸಚಂದ್ರಬೊಸ್, ಭಗತಸಿಂಗ್, ಕಿತ್ತೂರು ಚೆನ್ನಮ್ಮ,ಸಂಗೊಳ್ಳಿ ರಾಯಣ್ಣ ಅನೇಕ ನಾಯಕರು ಹೋರಾಟ ಮಾಡಿ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ.
ಇವತ್ತಿನ ಮಕ್ಕಳ ಕೈಯಲ್ಲಿ ಮೊಬೈಲ್ ದಿಂದ ದೂರ ಇಡಬೇಕೆಂದು ಪಾಲಕರಲ್ಲಿ ವಿನಂತಿಸಿದರು.
ಭಾರತವು ಅನೇಕ ಭಾಷೆಗಳು, ಸಂಸ್ಕೃತಿಗಳು ಮತ್ತು ಸಂಪ್ರದಾಯಗಳನ್ನು ಹೊಂದಿರುವ ದೇಶ. ಗಣರಾಜ್ಯೋತ್ಸವವು ಏಕತೆ, ಸಾಂವಿಧಾನಿಕ ಮೌಲ್ಯಗಳು ಮತ್ತು ದೇಶಭಕ್ತಿಯನ್ನು ಒತ್ತಿಹೇಳುತ್ತದೆ,ವೈವಿಧ್ಯತೆಯಲ್ಲಿ ಏಕತೆ ನಮ್ಮ ಶಕ್ತಿ ನಮ್ಮ ಸ್ವಾತಂತ್ರ್ಯವನ್ನು ಗೌರವಿಸಿ, ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಿ ಮತ್ತು ಒಂದು ಸಂವಿಧಾನ, ಒಂದು ರಾಷ್ಟ್ರ, ಒಂದು ಭವಿಷ್ಯ. ಈ ಪ್ರಬಲ ಸಂದೇಶಗಳು ಭಾರತದ ಪ್ರಜಾಪ್ರಭುತ್ವದ ಚೈತನ್ಯವನ್ನು ಆಚರಿಸುತ್ತವೆ, ದೇಶದ ಸಮಗ್ರತೆ ಮತ್ತು ಪರಂಪರೆಯನ್ನು ಎತ್ತಿಹಿಡಿಯುವ ಕರ್ತವ್ಯವನ್ನು ನಾಗರಿಕರಿಗೆ ನೆನಪಿಸುತ್ತವೆ ಎಂದರು.
ಈ ಕುರಿತು ವಾಯ್ ಹೆಚ್ ವಿಜಯಕರ ಮಾತನಾಡಿದ ಭಾರತದ ಸಂವಿಧಾನದ ರಚನೆ ಮಾಡುವಲ್ಲಿ ಡಾ ಬಿ ಅರ್ ಅಂಬೇಡ್ಕರ್ ರಚನೆ ಮಾಡಿದ್ದರಿಂದ ನಮಗೆ ಎಲ್ಲಾ ಹಕ್ಕು ನೀಡಿದ್ದಾರೆ ಎಂದರು.
ಇದಕ್ಕೂ ಮುನ್ನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಇಬ್ಬರಿಗೂ ತಲಾ 50,000 ಸಾವಿರ ಚೆಕ್ ವಿತರಣೆ ಮಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸರಕಾರಿ ಉರ್ದು ಶಾಲೆ ಪ್ರಥಮ ಸ್ಥಾನ ಬಹುಮಾನ, ದ್ವಿತೀಯ ಸ್ಥಾನ ಬಹುಮಾನ ಚೇತನ ಪಬ್ಲಿಕ್ ಸ್ಕೂಲ್,ತೃತೀಯ ಸ್ಥಾನ ಸರಕಾರಿ ಪ್ರಾಥಮಿಕ ಶಾಲೆ ನಂ2 ಬಹುಮಾನ
ಪಡೆದುಕೊಂಡಿವೆ.
ಪಥಚಂಚಲನದಲ್ಲಿ ಪೋಲಿಸ್ ಇಲಾಖೆ, ಗ್ರಹರಕ್ಷಕಧಳ, ಸ್ಕೌಟ್ಸ್ ಗೈಡ್ಸ್, ಎನ್ಎಸ್ಎಸ್,ವಿವಿಧ ಶಾಲೆಯ ಮಕ್ಕಳು ಭಾಗವಹಿಸಿದ್ದವರಿಗೆ ಸಮದಾನಕರ ಬಹುಮಾನ ವಿತರಣೆ ಮಾಡಲಾಯಿತು.
ಇದೇ ವೇಳೆ ಬಸವ ಇಂಟರ್ ನ್ಯಾಶನಲ್ ಶಾಲೆಯ ಮಕ್ಕಳು,ಬಾಲಕ,ಬಾಲಕಿಯರು ಕಬಡ್ಡಿ,ಓಟದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಯಲ್ಲಿ ಅಯ್ಕೆ ಹಿನ್ನೆಲೆ ಪ್ರಥಮ ದ್ವಿತೀಯ ತೃತೀಯ ಸ್ಥಾನ ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚ ಗ್ಯಾರಂಟಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ,ಕಸಾಪ ಮಾಜಿ ತಾಲೂಕು ಅಧ್ಯಕ್ಷ ಎಂ ಬಿ ನಾವದಗಿ,ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಿ ಕೆ ಬಿರಾದಾರ,ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ,ತಾಪಂ ಇಒ ವೆಂಕಟೇಶ್ ವಂದಾಲ,ಬಿಇಓ ಬಿ ಎಸ್ ಸಾವಳಗಿ, ಸಿಪಿಐ ಮೊಹಮ್ಮದ್ ಪಸಿವುದ್ದೀನ್,ಪಿಎಸ್ ಐ ಸಂಜಯ್ ತಿಪ್ಪಾರಡ್ಡಿ,ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ,ವಿವಿಧ ಇಲಾಖೆ ಅಧಿಕಾರಿಗಳಾದ ಎಸ್ ಡಿ ಬಾವಿಕಟ್ಟಿ,ಡಾ ಎಸ್ ಬಿ ತಿವಾರಿ,ಎಂ ಎಂ ಬೆಳಗಲ್ಲ, ಡಾ ಶಿವಾನಂದ ಮೇಟಿ,ವಿರೇಶ ಹುಗಾರ,ಬಸಂತಿ ಮಠ,ಸಿಡಿಪಿಒ ಶಿವಮೂರ್ತಿ ಕುಂಬಾರ,ವಿವಿಧ ಇಲಾಖೆ ಅಧಿಕಾರಿಗಳು,ಗಣ್ಯರು ಶಾಲೆಯ ಮಕ್ಕಳು ಭಾಗವಹಿಸಿದ್ದರು ಬಿಇಒ ಬಿ ಎಸ್ ಸಾವಳಗಿ ಸ್ವಾಗತಿಸಿದರು ,ಶಿಕ್ಷಕ ಟಿ ಡಿ ಲಮಾಣಿ ನಿರೂಪಿಸಿ, ವಂದಿಸಿದರು.