ತಾಳಿಕೋಟಿ ದೇವರಹಿಪ್ಪರಗಿ ಸೇತುವೆ ಕುಸಿತ: ದುರಸ್ತಿಗೆ ಆಗ್ರಹ
ದೇವರಹಿಪ್ಪರಗಿ: ಪಟ್ಟಣದಿಂದ ತಾಳಿಕೋಟಿಗೆ ಹೋಗುವ ರಸ್ತೆ ಮಧ್ಯೆ ದೇವೂರ ಗ್ರಾಮದ(23.36) ಹತ್ತಿರ ಇರುವ ಹಳೆಯದಾದ ಕಲ್ಲಿನ ಸೇತುವೆ ಅರ್ಧ ಕುಸಿತ ಕಂಡ ಪರಿಣಾಮ ರಸ್ತೆಯಲ್ಲಿ ಪ್ರಯಾಣಿಸುವ ವಾಹನ ಸವಾ ರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪ್ರತಿದಿನ ಈ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು, ದ್ವಿಚಕ್ರ ವಾಹನ ಹಾಗೇ ಇತರೆ ವಾಹನಗಳು ಸಂಚರಿಸುತ್ತವೆ. ಏಕಾಏಕಿ ರಸ್ತೆ ಸೇತುವೆ ಕುಸಿತ ಕಂಡ ಪರಿಣಾಮ ರಸ್ತೆ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸಲು ವಾಹನ ಸವಾರರ ಆಗ್ರಹಿಸಿದ್ದಾರೆ. ದೇವರಹಿಪ್ಪರಗಿ- ಬಿ.ಬಿ. ಇಂಗಳಗಿ ರಸ್ತೆ, ಸುಮಾರು 30ವರ್ಷಗಳ ಹಳೆಯದಾದ ಕಲ್ಲಿನ ಸೇತುವೆ ಮರು
ನಿರ್ಮಾಣ ಮಾಡದೆ ಇರುವುದು ಇಂದಿನ ಸ್ಥಿತಿಗೆ ಕಾರಣವಾಗಿದೆ. ರಸ್ತೆ ಮಧ್ಯೆ ಹಲ ವಾರು ಸಿಮೆಂಟ್ ಸೇತುವೆಗಳನ್ನು ನೂತನ ವಾಗಿ ನಿರ್ಮಿಸಲಾಗಿದೆ. ಆದರೆ ಈ ಹಳೆಯ ದಾದ ಕಲ್ಲಿನ ಸೇತುವೆ ಮರು ನಿರ್ಮಾಣ ಮಾಡದೆ ಇರುವುದಕ್ಕೆ ಅಧಿಕಾರಿಗಳು ಮೇಲೆ ಸಹಜವಾಗಿಯೇ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ಪರಿಶೀಲನೆ ಶುಕ್ರವಾರದಂದು ಹಳೆಯದಾದ ಕಲ್ಲಿನ ಸೇತುವೆ ಕುಸಿತದಿಂದಾಗಿ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ಪಿಎಸ್ಐ ಬಸವರಾಜ ತಿಪರಡಿ, ಪಿಡಬ್ಲ್ಯೂಡಿ ಅಧಿಕಾರಿಗಳು ಭೇಟಿ ನೀಡಿ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಪರಿಶೀಲನೆ ನಡೆಸಿದ್ದಾರೆ.