ಸ್ವಾಮೀಜಿಯವರ ಪ್ರವಚನಗಳು, ತತ್ವಗಳು, ಮಾತುಗಳು ಈ ಮಣ್ಣಿನ ಕಣ-ಕಣದಲ್ಲಿಯೂ ತುಂಬಿವೆ
ವಿಜಯಪುರ : ವಿಜಯಪುರವನ್ನು ರಾಷ್ಟಾçö್ಯದ್ಯಂತ ಪ್ರಖ್ಯಾತಿ ಪಡೆಯುವಂತೆ ಮಾಡಿದ್ದು ಶ್ರೀ ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪ್ರವಚನಗಳು, ತತ್ವಗಳು ಅವರ ಮಾತುಗಳು ಈ ಮಣ್ಣಿನ ಕಣ-ಕಣದಲ್ಲಿಯೂ ತುಂಬಿವೆ ಎಂದು ಸೇಡಂನ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಸಂರಕ್ಷಕ ಬಸವರಾಜ ಪಾಟೀಲ ಸೇಡಂ ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವ ಕಾರ್ಯಕ್ರಮದ ೩ ನೇ ದಿನದ `ದಯಾ ಮತ್ತು ಧರ್ಮ’ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಇವತ್ತಿನ ವಿಷಯ ದಯಾ-ಧರ್ಮದ ಬಗ್ಗೆ ಶ್ರೀಗಳು ತಮ್ಮ ಜೀವನದೂದ್ದಕ್ಕೂ ಅತ್ಯಂತ ಸುಂದರವಾಗಿ ನಮಗೆಲ್ಲ ತಿಳಿಸಿದ್ದಾರೆ. ನಮ್ಮ ಜೀವನದಲ್ಲಿ ಇರಬೇಕಾದಂತಹ ಅತ್ಯಮೂಲ್ಯ ವಿಷಯಗಳು ಅವು. ನಮ್ಮ ಜೀವನದಲ್ಲಿ ಅಂತಃಕರಣ, ಕರುಣೆ, ಧರ್ಮ ಇರಬೇಕು ನಿಜ ಹೇಳುವುದಾದರೆ ಯಾವುದು ಸರ್ವಕಾಲಿಕ ಸತ್ಯವಾದದ್ದಿದೆ ಅದೇ ನಿಜವಾದ ಧರ್ಮ ಆದರೆ ಇಂದಿನ ದಿನಮಾನದಲ್ಲಿ ಧರ್ಮ ಎಂದರೆ ಕೆಲವು ಕಟ್ಟೆಳೆಗಳಿಗೆ ಸಿಕ್ಕು ನಲುಗುತ್ತಿದೆ ಆದರೆ ಅದು ನಿಜವಾದ ಧರ್ಮ ಅಲ್ಲ ಎಂದರು. ದಯೆ, ವಾತ್ಸಲ್ಯ, ಅಂತ:ಕರಣ ಇವೆಲ್ಲವೂ ನಮ್ಮಲ್ಲಿ ಇದ್ದರೆ ಮಾತ್ರ ನಾವು ನಿಜವಾದ ಮನುಷ್ಯರಾಗಿರಲು ಸಾಧ್ಯ. ದಯೆ ಮತ್ತು ಧರ್ಮದ ಸಂಪರ್ಕ ಸದಾಕಾಲ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದೇ ರೀತಿ ಶ್ರೀಗಳ ಮಾತಿಗೆ ಅರ್ಥ ಕೊಡುವ ರೀತಿಯಲ್ಲಿ ನಾವೆಲ್ಲರು ಬದುಕಬೇಕಿದೆ. ನಾವು ನೀವೆಲ್ಲ ಅವರ ಆಶಯದಂತೆ ದಯೆ-ಧರ್ಮದ ದಾರಿಯಲ್ಲಿ ಸಾಗುವ ಮೂಲಕ ಶ್ರೀಗಳಿಗೆ ನಿಜವಾದ ಗುರುಕಾಣಿಕೆ ಸಲ್ಲಿಸೋಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಾರೂಗೇರಿ ನಿವೃತ್ತ ಪ್ರಾಧ್ಯಾಪಕ ವ್ಹಿ.ಎಸ್.ಮಾಳಿ ಅನುಭಾವ ನುಡಿಗಳನ್ನಾಡಿ, ಮಹಾತ್ಮಾ ಗಾಂಧೀಜಿಯವರ ನಂತರ ಜಗತ್ತಿನಾದ್ಯಂತ ಅವರಷ್ಟು ಜನರನ್ನು ಪ್ರಭಾವಿಸಿದ ಮತ್ತೋರ್ವ ವ್ಯಕ್ತಿ ಎಂದರೆ ಈ ನಾಡಿನ ಶ್ರೇಷ್ಠ ಸಂತ ಶ್ರೀ ಸಿದ್ದೇಶ್ವರ ಶ್ರೀಗಳು ಎಂದು ಹೇಳಿದರು.
ಅಸಮಾನ್ಯರಲ್ಲಿ ಅಸಾಮನ್ಯ ರೂಪ ಶ್ರೀ ಸಿದ್ದೇಶ್ವರ ಶ್ರೀಗಳು ಅಂತಹ ಮಹಾನ್ ಶ್ರೀಗಳಿಗೆ ನುಡಿನಮನ ಸಲ್ಲಿಸುವ ಅವಕಾಶ ಸಿಕ್ಕಿದ್ದು ನಮ್ಮ-ನಿಮ್ಮೆಲ್ಲರ ಜನುಮಾಂತರದ ಪುಣ್ಯ ಎಂದರು.
ಇನ್ನು ದಯೆ-ಧರ್ಮದ ಬಗ್ಗೆ ಮಾತನಾಡುವುದಾದರೆ ಒಂದು ಪ್ರಾಣಿಯನ್ನು ತಿಂದು ಬದುಕುವುದು ಕಾಡಿನ ಧರ್ಮ, ಸಕಲ ಜೀವಿಗಳಿಗೂ ಒಳಿತನ್ನು ಬಯಸಿ ಬದುಕುವುದು ನಾಡಿನ ಧರ್ಮ ಹೀಗಾಗಿ ನಾಡಿನ ಧರ್ಮದಲ್ಲಿ ನಾವು ಬದುಕುತ್ತಿರುವ ಕಾರಣ ದಯೆ-ಧರ್ಮವನ್ನು ಒಳಗೊಂಡ ಜೀವನಶೈಲಿ ನಮ್ಮದಾಗಿರಬೇಕು. ಎಲ್ಲಿ ದಯೆ ಇರುತ್ತದೆ ಅಲ್ಲಿ ಧರ್ಮ ಇರುತ್ತದೆ ಎಂಬುವುದನ್ನು ಮರೆಯಬಾರದು. ತ್ಯಾಗ, ಮಮಕಾರ, ಪ್ರೀತಿ, ಕಾಳಜಿ, ಕರುಣೆ ಇವೆಲ್ಲವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು ಅಂದಾಗ ಮಾತ್ರ ನಮ್ಮ ಬದುಕಿಗೆ ನಿಜವಾದ ಅರ್ಥ ದೊರೆಯುತ್ತದೆ ಎಂದರು.
ಗೋಷ್ಠಿಯಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಶ್ರೀ ಸಿದ್ದೇಶ್ವರ ಅಪ್ಪನವರು ನಡೆದಾಡಿದ ಈ ಪುಣ್ಯ ಭೂಮಿಯಲ್ಲಿ ಜನಸಿದ ನಾವೇ ಪುಣ್ಯವಂತರು. ಅವರ ನೆರಳಿನಲ್ಲಿ ಬದುಕುವ ಸದಾವಕಾಶ ನಮ್ಮೆಲ್ಲರಿಗೂ ಸಿಕ್ಕ ಕೊಡುಗೆ ಈ ಪುಣ್ಯ ಎಲ್ಲರಿಗೂ ಸಿಗುವುದಿಲ್ಲ ಎಂದು ಹೇಳಿದರು.
ಈ ಭೂಮಿ ಅಸ್ತಿತ್ವದಲ್ಲಿ ಇರುವವರೆಗೂ ಹೆಸರುವಾಸಿಯಾಗಿರುವ ಏಕೈಕ ನಾಮವೆಂದರೆ ಅದು ಶ್ರೀ ಸಿದ್ದೇಶ್ವರ ಅಪ್ಪನವರ ಹೆಸರು ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ. ನಮ್ಮೆಲ್ಲರಲ್ಲೂ ಅಪ್ಪನವರು ಬಿತ್ತಿದ ದಯೆ, ವಾತ್ಸಲ್ಯದ ಬೀಜ ನಮ್ಮಲ್ಲಿ ಮೊಳಕೆಯೊಡೆದು ಅವರು ಹಾಕಿ ಕೊಟ್ಟ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ದಯೆ ಇಲ್ಲದ ಧರ್ಮ ಯಾವುದಯ್ಯಾ ಎಂಬ ಅಣ್ಣ ಬಸವಣ್ಣನವರ ವಚನಕ್ಕೆ ಅರ್ಥ ತುಂಬುವ ಹಾಗೆ ಇನ್ನೊಬ್ಬರಿಗೆ ನೂವನ್ನು ಮಾಡದೆ ಯಾರು ಸಾತ್ವಿಕ ಬದುಕನ್ನು ನಡೆಸುತ್ತಾರೋ ಅಂತಹವರ ಹೃದಯದಲ್ಲಿ ಶ್ರೀ ಸಿದ್ದೇಶ್ವರ ಶ್ರೀಗಳು ಸದಾಕಾಲ ನೆಲೆಸಿರುತ್ತಾರೆ ಎಂದರು.
ಗೋಷ್ಠಿಯಲ್ಲಿ ವಿಜಯಪುರ ಡಿ.ಎಸ್.ಪಿ ಡಾ. ಬಸವರಾಜ ಯಲಿಗಾರ ಮಾತನಾಡಿ, ಈ ನಾಡಿಗೆ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಆಗಮನವೇ ಒಂದು ಪುಣ್ಯ. ಅಂತಹುದ್ದರಲ್ಲಿ ಅವರ ಕಾಲಘಟ್ಟದಲ್ಲಿ ಬುದುಕಿದ ನಾವೆಲ್ಲರೇ ಪುಣ್ಯವಂತರು ಎಂದು ಹೇಳಿದರು.
ಯಾವಾಗ ಯಾವಾಗ ಭೂಮಿ ಮೇಲೆ ಆಪತ್ತಿನ ಕಾಲ ಬರುತ್ತೆದೆಯೋ ಅವಾಗ ದೈವದ ರೂಪ ಭೂಮಿಗೆ ಬರುತ್ತಿದ್ದವಂತೆ ಶ್ರೀ ಕೃಷ್ಣ ಪರಮಾತ್ಮ ಕೂಡ ಇದಕ್ಕೆ ಉದಾಹರಣೆ ಅದರಂತೆ ಈ ಭೂಮಿಗೆ ಶ್ರೀ ಸಿದ್ದೇಶ್ವರ ಶ್ರೀಗಳು ಸಹ ದೈವ ಮಾನವರಾಗಿ ಬಂದಿದ್ದರು ನಮ್ಮನ್ನು ತಿದ್ದಲು, ನಮ್ಮ ಬದುಕಿಗೆ ಅರ್ಥ ನೀಡಲು ತಮ್ಮ ತತ್ವಗಳ ಮೂಲಕ ನಮ್ಮ ಬದುಕಿನ ಶೈಲಿಯನ್ನು ಬದಲಿಸಲು ಬಂದAತವರು ಶ್ರೀಗಳು. ಹೀಗಾಗಿ ಪ್ರತಿ ವರ್ಷ ಅವರಿಗೆ ನುಡಿ ನಮನ ಸಲ್ಲಿಸಿ ನಾವು ಕೃತಜ್ಞರಾಗುವುದಲ್ಲ ಬದಲಿಗೆ ಅವರ ನುಡಿಗಳನ್ನು ಪಾಲಿಸಿ ಅವರ ಮಾತಿನಂತೆ ನಡೆಯುವ ಮೂಲಕ ನಾವೆಲ್ಲರೂ ನಿಜವಾದ ಭಕ್ತರಾಗಬೇಕಿದೆ ಈ ಮೂಲಕ ಸಿದ್ದೇಶ್ವರ ಶ್ರೀಗಳಿಂದ ಬಂದAತಹ ನುಡಿಗಳನ್ನು ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಬದುಕೋಣ ಎಂದು ಆಶಯ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ಪೂಜ್ಯ ಶ್ರೀ ನಿಜಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶ್ರೀ ಸಿದ್ದೇಶ್ವರ ಶ್ರೀಗಳು ಯಾವಾಗಲೂ ಒಂದು ಮಾತು ಹೇಳುತ್ತಿದ್ದರೂ ಹೇಳುವುದೆಲ್ಲವೂ ಹೇಳಿ ಆಗಿದೆ ಇನ್ನೇನಿದ್ದರೂ ಹೇಳಿದಂತೆ ನಡೆಯಬೇಕಿದೆ ಎಂದು ಹೇಳುತ್ತಿದ್ದರು ಹೀಗಾಗಿ ಈಗ ಅವರ ಮಾತಿನಂತೆ ನಾವೆಲ್ಲರೂ ನಡೆದು ತೋರಿಸಬೇಕಿದೆ ಎಂದರು.
ದಯೆ ಮತ್ತು ಧರ್ಮದ ಬಗ್ಗೆ ಮಾತನಾಡಬೇಕಾದರೆ ದಯೆ ಇಲ್ಲದ ಧರ್ಮ ಯಾವುದಯ್ಯ ಎಂಬ ಮಾತುಗಳನ್ನು ನಾವೆಲ್ಲರೂ ಕೇಳಿದ್ದೇವೆ. ದಯೆ ಎನ್ನುವುದು ನಮ್ಮೆಲ್ಲರಲ್ಲೂ ಇರಬೇಕಾದ ಪ್ರಮುಖ ಅಂಶ. ಧರ್ಮಕ್ಕೆ ದಯಯೇ ಮೂಲ. ಪರೋಪಕಾರ, ಉಪಕಾರ, ತ್ಯಾಗ, ಪ್ರೀತಿ ಎಲ್ಲದರಲ್ಲೂ ದಯೆ ಇರಲೇಬೇಕು ಇನ್ನು ಧರ್ಮ ಎಂದರೇ ನಾವು ಪಾಲಿಸಲೇಬೇಕಾದ ಕರ್ತವ್ಯಗಳು ಅದೇ ನಿಜವಾದ ಧರ್ಮ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಗೋಷ್ಠಿಯಲ್ಲಿ ಶ್ರೀ ಸಿದ್ದೇಶ್ವರ ಶ್ರೀಗಳು ಬರೆದಂತಹ ೬ ಗ್ರಂಥಗಳನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಹಲವಾರು ಸಂತರು, ಶ್ರೀಗಳು, ಭಕ್ತರು ಉಪಸ್ಥಿತರಿದ್ದರು.
ಸಂ.ಗು ಸಜ್ಜನ ಸ್ವಾಗತಿಸಿದರು, ಪೂಜ್ಯ ಶ್ರೀ ಸಂಗಮೇಶ್ವರ ಸ್ವಾಮಿಗಳು ನಿರೂಪಿಸಿದರು.
ವಿಜಯಪುರದ ಜ್ಞಾನಯೋಗಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ನಿಮಿತ್ಯವಾಗಿ ಜರುಗಿದ ದಯಾ-ಧರ್ಮ ಗೋಷ್ಠಿಯನ್ನು ಸೇಡಂನ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಸಂರಕ್ಷಕ ಬಸವರಾಜ ಪಾಟೀಲ ಸೇಡಂ ದೀಪ ಬೇಳಗುವ ಮೂಲಕ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಪೂಜ್ಯರು ಮತ್ತು ಗಣ್ಯರು ಉಪಸ್ಥಿತರಿದ್ದರು.




















