ನಾದ ಕೆಡಿ ಗ್ರಾಮದ ಜಮಖಂಢಿ ಶುಗರ್ಸ ಯುನಿಟ್ ೨ ಕಾರ್ಖಾನೆಗೆ ಕಬ್ಬು ಪರಿಶೀಲನಾ ಸಮಿತಿ ಭೇಟಿ ನೀಡಿ ಪರಿಶೀಲನೆ
ಇಂಡಿ: ತಾಲೂಕಿನ ನಾದ ಕೆಡಿ ಗ್ರಾಮದ ಜಮಖಂಢಿ ಶುಗರ್ಸ ಯುನಿಟ್ ೨ ಕಾರ್ಖಾನೆಗೆ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ನೇತೃತ್ವದಲ್ಲಿ ಕಬ್ಬು ಪರಿಶೀಲನಾ ಸಮಿತಿ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕಾರ್ಖಾನೆಯಲ್ಲಿ ಕಬ್ಬಿನ ತೂಕ ಮಾಡುವ ಮಷಿನ ಮತ್ತು ಇಳುವರಿ ಪರಿಶೀಲಿಸಿತು. ಕಬ್ಬಿನ ತೂಕದ ಮಷೀನು ಡಿಜಿಟಲ್ ಇರುವುದನ್ನು ಮತ್ತು ಎರಡು ತೂಕದ ಮಷಿನ್ ಇರುವದನ್ನು ಪರಿಶೀಲಿಸಿತು.ಕಬ್ಬಿನ ರಿಕವರಿಯ ಕುರಿತು ರೈತರ ಸಮ್ಮುಖದಲ್ಲಿ ಪ್ರಯೋಗಾಲಯದಲ್ಲಿ ಖಚಿತ ಪಡಿಸಿಕೊಂಡಿತು.
ಅಲ್ಲದೆ ಕಬ್ಬು ಕಳುಹಿಸಿದ ರೈತರಿಗೆ ಕಬ್ಬಿನ ತೂಕದ ಪಾವತಿ ವಿತರಣೆಯಾಗುತ್ತಿರುವ ಬಗ್ಗೆ ಪರಿಶೀಲಿಸಿದರು. ತೂಕದಲ್ಲಿ ಯಾವದೇ ರೀತಿಯ ವ್ಯತ್ಯಾಸ ಆಗದಂತೆ ನೋಡಿ ಕೊಳ್ಳಲು ಕಾರ್ಖಾನೆ ಸಿಬ್ಬಂದಿಗೆ ಸೂಚಿಸಿತು. ಕಬ್ಬಿನ ಹಣ ನೀಡುವದನ್ನು ಸಮಿತಿ ಖಚಿತ ಪಡಿಸಿಕೊಂಡಿತು.
ತಹಸೀಲ್ದಾರ ಬಿ.ಎಸ್.ಕಡಕಬಾವಿ, ಕೃಷಿ ಅಧಿಕಾರಿ ಶ್ರೀಶೈಲ ಗುರುಬೆಟ್ಟಿ, ಆಹಾರ ನೀರಿಕ್ಷಕ ಸಿದ್ದು ಹಲಸಂಗಿ, ಅಬಕಾರಿ ಅಧಿಕಾರಿ ರಾಹುಲ ನಾಯಕ, ಇಂಡಿ ತೂಕ ಮತ್ತು ಅಳತೆ ಅಧಿಕಾರಿ ಶಶಿಕಾಂತ ಚವ್ಹಾಣ, ರೈತ ಮುಖಂಡರಾದ ಸಿದ್ದರಾಮ ತಳವಾರ ಸೇರಿದಂತೆ ಮತ್ತಿತರರಿದ್ದರು.
ಇಂಡಿ: ತಾಲೂಕಿನ ನಾದ ಕೆಡಿ ಸಕ್ಕರೆ ಕಾರ್ಖಾನೆಗೆ ಎಸಿ ಚಿದಾನಂದ ಗುರುಸ್ವಾಮಿ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.



















